July 02, 2009

ಕಾಡಿನ ಬೆಡಗಿ

ಯಾವುಯಾವುದೋ ಗೋಜಲಿಗೆ ಸಿಕ್ಕಿಕೊಂಡು ಪಾಂಡಿಚೆರಿಯಿಂದ ಹೊರಡುವಾಗಲೇ ತಡವಾಗಿಹೋಗಿತ್ತು. ಚೆಂಗಲ್‌ಪೇಟೆ ಸಮೀಪಿಸುತ್ತಿದ್ದಂತೆ ಕತ್ತಲೆ ದಟ್ಟವಾಗಿ ಅಮರಿಕೊಳ್ಳತೊಡಗಿತ್ತು. ಇಲ್ಲಿಯವರೆಗೇನೋ ಚೆನ್ನಾಗಿ ತಿಳಿದಿದ್ದ ರಸ್ತೆ. ಮುಂದಿನದಂತೂ ನಾನೂ ಎಂದೂ ಕಾಲಿಡದ ಹಾದಿ.
ಫಾದರ್ ಆಲ್ಫಾನ್ಸೋ ವಾರದಿಂದಲೂ ತಿದಿ ಒತ್ತುವಂತೆ ಒತ್ತಿದ್ದರು. ಮಹಾಬಲಿಪುರಂನ ಸಮೀಪದ ತಿರುವಡಿಸೂಲಂನಲ್ಲಿ ಸುನಾಮಿ ಸಂತ್ರಪ್ತರ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರ ಪರಿಚಯದ ಮನುಷ್ಯನೊಬ್ಬನಿಂದ ಕೆಲವು `ವೆರಿ ವೆರಿ ಇಂಪಾರ್ಟೆಂಟ್' ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡು, ಜತೆಗೆ ಒಂದಷ್ಟು ಫೋಟೋಗಳನ್ನೂ ತೆಗೆದುಕೊಂಡು ಬರುವಂತೆ ನನ್ನನ್ನು ನಕ್ಷತ್ರಿಕನಂತೆ ಪೀಡಿಸಿಬಿಟ್ಟಿದ್ದರು. ಆ ಪತ್ರಗಳನ್ನವರು ಆದಷ್ಟು ಬೇಗನೆ ಡೆನ್‌ಮಾರ್ಕ್‌ನ ಒಂದು ಎನ್‌ಜಿಓಗೆ ಕಳುಹಿಸಬೇಕಾಗಿತ್ತಂತೆ. ಯೂನಿವರ್ಸಿಟಿಯಲ್ಲಿ ಮೂರು ದಿನಗಳ ಅಂತರರಾಷ್ಟ್ರೀಯ ಸೆಮಿನಾರ್ ಒಂದರ ಆಯೋಜನೆಯಲ್ಲಿ ತೊಡಗಿಕೊಂಡಿದ್ದ ನನಗಂತೂ ಬಿಡುವೇ ಇರಲಿಲ್ಲ. ಉದ್ಘಾಟನೆಗೆ ಪಾಂಡಿಚೆರಿಯ ಮುಖ್ಯಮಂತ್ರಿ, ಸಮಾರೋಪ ಸಮಾರಂಭಕ್ಕೆ ಕೇಂದ್ರೀಯ ಮಂತ್ರಿಯೊಬ್ಬರು ಬರಲೇಬೇಕೆಂದು ಡೀನ್ ಸಾಹೇಬರು ಪಟ್ಟು ಹಿಡಿದದ್ದರಿಂದ ಹಾಗೂ ಅವರ ತಾಳಕ್ಕೆ ತಕ್ಕಂತೆ ಹೆಚ್‌ಓಡಿ ಮಹಾಶಯ ಕುಣಿಯತೊಡಗಿದಾಗ ನನಗೆ ಸಾಕುಬೇಕಾಗಿಹೋಗಿತ್ತು. ಬರೀ ಪ್ರಾಧ್ಯಾಪಕರು, ವಿದ್ವಾಂಸರುಗಳಿರುವ ಸೆಮಿನಾರ್‌ಗಳನ್ನು ಆಯೋಜಿಸುವುದಾದರೆ ತೊಂದರೆಯಿಲ್ಲ. ಈ ಪುಢಾರಿಗಳನ್ನು ಎಳಕೊಂಡು ಬರುವುದೆಂದರೆ ನಮ್ಮದು ನಾಯಿಪಾಡಾಗಿಬಿಡುತ್ತದೆ. ಸೆಕ್ಯೂರಿಟಿ, ಪ್ರೋಟೋಕಾಲ್ ಎಂದೆಲ್ಲಾ ನೂರೊಂದು ರಗಳೆಗಳಿಗೆ ಸಿಕ್ಕಿಕೊಂಡು ತಲೆ ಚಿಟ್ಟುಹಿಡಿದುಹೋಗುತ್ತದೆ.ವಿಶ್ವವಿದ್ಯಾಲಯದ ಅಕ್ಯಾಡೆಮಿಕ್ ಸೆಮಿನಾರ್ ಒಂದಕ್ಕೆ ಈ ರಾಜಕೀಯದವರ ಉಪಸ್ಥಿತಿಯ ಅಗತ್ಯ ನನಗಂತೂ ಇಲ್ಲ. ದುರಂತವೆಂದರೆ ಉಳಿದೆಲ್ಲರಿಗೂ ಅವರವರದೇ ಕಾರಣಗಳಿಗಾಗಿ ಅದು ಇದೆ. ಸೆಮಿನಾರ್ ಮುಗಿದದ್ದು ಮೊನ್ನೆ. ಬಂದಿದ್ದವರಲ್ಲಿ ಅರ್ಧಕ್ಕರ್ಧ ಆ ಸಂಜೆಯೇ ಜಾಗ ಖಾಲಿ ಮಾಡಿದರು. ಉಳಿದವರನ್ನು ನಿನ್ನೆ ಆರೋವಿಲ್‌ಗೆ ಕರೆದುಕೊಂಡು ಹೋಗಿದ್ದೆವು. ಈವತ್ತು ದಿನಪೂರ್ತಿ ನನಗೆ ಬಿಲ್ಲುಗಳದೇ ಕೆಲಸ. ಕ್ಯಾಂಟಿನಿನವ, ಟ್ಯಾಕ್ಸಿಯವ, ಜೆರಾಕ್ಸ್ ಅಂಗಡಿಯವ- ಹೀಗೆ ನೂರೊಂದು ಜನರಿಗೆ ಹಣ ಸಂದಾಯ ಮಾಡಿ ಸಮರ್ಪಕ ರಶೀದಿಗಳನ್ನು ಪಡೆದುಕೊಳ್ಳುವುದರಲ್ಲಿ ಹಗಲು ಕಳೆದೇಹೋಯಿತು.ಇದೆಲ್ಲದರ ನಡುವೆ ಈ ಪಾದರಿ ಮಹಾಶಯ ನನ್ನ ಬೆನ್ನಿಗೆ ಬಿದ್ದಿದ್ದ. `ನಾನೇ ಆಗಬೇಕಾ? ಇನ್ಯಾರೂ ಇಲ್ಲವಾ?' ಎಂದು ನಾನು ರೋಸಿನಾಳ ಎದುರು ಅಸಹನೆ ಕಾರಿಕೊಂಡಿದ್ದೆ. `ನಿನ್ನ ಮೇಲೆ ಅವರಿಗೆ ತುಂಬಾ ನಂಬಿಕೆ ಇದೆ. ಅದನ್ನು ಕಳೆದುಕೊಳ್ಳಬೇಡ.' ಅವಳದು ತಣ್ಣನೆಯ ಉತ್ತರ.ಹೌದು, ಫಾದರ್ ಆಲ್ಫೋನ್ಸೋಗೆ ನನ್ನ ಮೇಲೆ ಅಗಾಧ ವಿಶ್ವಾಸ. ಅದನ್ನು ಹಾಗೇ ಉಳಿಸಿಕೊಳ್ಳುವುದರ ಅಗತ್ಯ ನನಗೂ ಇದೆ! ರೋಸಿನಾ ನನ್ನವಳಾಗಬೇಕಾದರೆ ಅದು ಅತ್ಯಗತ್ಯ. ಫಾದರ್ ಆಲ್ಫೋನ್ಸೋ ಅವರ ಅಣ್ಣನ ಮಗಳು ರೋಸಿನಾ. ಚಿಕ್ಕಂದಿನಿಂದಲೂ ಅವರ ರಕ್ಷಣೆ, ಆರೈಕೆಯಲ್ಲೇ ಬೆಳೆದವಳು. ಅವಳ ಮೇಲೆ ಪಾದರಿಯವರ ಋಣ ಅಗಾಧ. ಒಂದೂವರೆ ವರ್ಷಗಳ ಹಿಂದೆ ನನ್ನ - ರೋಸಿನಾಳ ಕಣ್ಣುಗಳು ಸಂಧಿಸಿದಾಗಿನಿಂದ ನಾನೂ ಆ ಋಣಕ್ಕೆ ಸಿಲುಕಿಕೊಂಡಿದ್ದೇನೆ. ಯಾವುದೇ ಕಾರಣದಿಂದ ಫಾದರ್‌ಗೆ ನನ್ನ ಮೇಲಿನ ವಿಶ್ವಾಸ ಕಳೆದುಹೋಯಿತೆಂದರೆ ನಾನು ರೋಸಿನಾಳನ್ನು ಕಳೆದುಕೊಂಡಂತೆಯೇ.`ಯೆಹೋವನ ಟೆನ್ ಕಮ್ಯಾಂಡ್‌ಮೆಂಟ್ಸನ್ನಾದರೂ ಮೀರಿಯೇನು, ಫಾದರ್ ಮಾತನ್ನು ಮೀರುವುದು ಬಹುಷಃ ನನ್ನಿಂದಾಗದು.' ರೋಸಿನಾ ನನ್ನ ಮುಂಗೈ ಹಿಡಿದು ಸಣ್ಣಗೆ ದನಿ ತೆಗೆಯುತ್ತಾಳೆ. ಆವಾಗೆಲ್ಲಾ ಅವಳ ಕಣ್ಣುಗಳು ಅರೆಮುಚ್ಚಿಕೊಳ್ಳುತ್ತವೆ. ರೆಪ್ಪೆಗಳ ನಡುವಿನಿಂದ ಕಣ್ಣೀರು ಜಿನುಗುತ್ತದೆ...ಫಾದರ್ ಆಲ್ಫೋನ್ಸೋ ಹೇಳಿದ ಕೆಲಸಗಳನ್ನೆಲ್ಲಾ ತಕರಾರಿಲ್ಲದೆ ಮಾಡಿದ್ದೇನೆ, ವಾರಕ್ಕೆ ನಾಲ್ಕು ಗಂಟೆ ಅವರ ಶಾಲೆಯಲ್ಲಿ ಮಕ್ಕಳಿಗೆ ಚಿತ್ರಕಲೆಯ ಕ್ಲಾಸ್ ತೆಗೆದುಕೊಳ್ಳುತ್ತೇನೆ, ತಿಂಗಳಿಗೆರಡು ಸಲವಾದರೂ ಅವರ ವಿದೇಶೀ ಅತಿಥಿಗಳ ನಡುವೆ ಮಹಾರಾಜನಂತೆ ಕುಳಿತು ಶಾಂಪೇನ್ ಚಪ್ಪರಿಸುತ್ತೇನೆ, ಪ್ರತೀ ಶನಿವಾರ ಅವರು ಮೀನು ಬೇಟೆಗೆಂದು ಅಥವಾ ಬೇಟೆಯ ಆಟಕ್ಕೆಂದು ಉಷ್ಟೇರಿ ಲೇಕ್‌ಗೆ ಹೋಗುವಾಗ ಮುಲುಮುಲುಗುಟ್ಟುವ ಮಣ್ಣುಹುಳುಗಳ ಪೊಟ್ಟಣ ಹಿಡಿದು ಅವರ ಹಿಂದೆ ಹೋಗುತ್ತೇನೆ...ಪ್ರೇಮ ಮನುಷ್ಯನನ್ನು ಒಮ್ಮೆ ಚಕ್ರವರ್ತಿಯಾಗಿಸಿದರೆ ಮತ್ತೊಮ್ಮೆ ಸಾಕುನಾಯಿಯಾಗಿಸುತ್ತದೆ ಎಂದು ಅದ್ಯಾವನೋ ಪುರಾತನ ರೋಮನ್ ಬುದ್ಧಿವಂತ ಹೇಳಿದ ಮಾತಿನಲ್ಲಿ ನನಗೆ ನಂಬಿಕೆ ಬಂದಿದೆ. ನೇರಕ್ಕೆ ಸಾಗಿದ್ದ ಚೆನ್ನೈ ಹೈವೇ ಬಿಟ್ಟು ಬಲಕ್ಕೆ ಹೊರಳಿ ಫ್ಲೈಓವರ್ ಕೆಳಗೆ ನುಸುಳಿ ಚೆಂಗಲ್‌ಪೇಟೆಯತ್ತ ಸಾಗಿದ್ದ ಕಿರಿದಾದ ರಸ್ತೆಗಿಳಿದೆ. ಎರಡೂ ಕಡೆಯ ಜಲಸಸ್ಯಗಳಿಂದ ತುಂಬಿದ್ದ ಜೌಗುಪ್ರದೇಶದತ್ತ ಒಮ್ಮೆ ಚಕಚಕನೆ ನೋಟ ಹೊರಳಾಡಿಸಿ ನೇರಕ್ಕೆ ನೋಡುತ್ತಾ ವಾಹನದ ವೇಗ ಹೆಚ್ಚಿಸಿದೆ. ಪಟ್ಟಣ ಪ್ರವೇಶಿಸುತ್ತಿದ್ದಂತೇ ಗಡಿಯಾರದತ್ತ ಕಣ್ಣಾಡಿಸಿದೆ. ಏಳೂವರೆಯಾಗುತ್ತಿತ್ತು. ಹಸಿವೆಯೆನಿಸಿತು. ಚೆಂಗಲ್‌ಪೇಟೆಯಲ್ಲೇ ಏನಾದರೂ ತಿಂದು ಮುಂದೆ ಹೋಗುವ ಯೋಚನೆ ಬಂದರೂ ಅದನ್ನು ತಳ್ಳಿಹಾಕಿದೆ. ನಾನು ಪಾಂಡಿಚೆರಿ ಬಿಡುವಾಗಲೇ ಐದೂವರೆ ದಾಟಿದ್ದನ್ನು ನೋಡಿ ರಾತ್ರಿ ತಿರುವಡಿಸೂಲಂನಲ್ಲೇ ಉಳಿಯಲು ಫಾದರ್ ಸೂಚಿಸಿದ್ದರು. ಅಷ್ಟೇ ಅಲ್ಲ, ಅಲ್ಲಿ ನಾನು ಭೇಟಿಯಾಗಬೇಕಾಗಿದ್ದ ಜೇಸುರತ್ನಂ ಎಂಬಾತನಿಗೆ ಫೋನ್ ಮಾಡಿ ನನಗಾಗಿ ಚಿಕನ್‌ನದ್ದೇನಾದರೂ ಅಡಿಗೆ ಮಾಡಬೇಕೆಂದು ತಾಕೀತು ಮಾಡಿ ನನ್ನ ಕೋಳಿಚಪಲದ ಸುದ್ಧಿಯನ್ನು ನನಗಿಂತಲೂ ಮೊದಲೇ ತಿರುವಡಿಸೂಲಂಗೆ ತಲುಪಿಸಿಬಿಟ್ಟಿದ್ದರು.ಮುಖ್ಯರಸ್ತೆಯಲ್ಲಿ ಸ್ವಲ್ಪ ದೂರ ಸಾಗಿ ರಸ್ತೆಬದಿಯ ಚಹದಂಗಡಿಯ ಮುಂದೆ ನಿಂತೆ. ಒಂದು ಸ್ಟ್ರಾಂಗ್ ಟೀಗೆ ಹೇಳಿ ತಿರುವಡಿಸೂಲಂಗೆ ಹೋಗುವ ರಸ್ತೆಯ ಬಗ್ಗೆ ಪ್ರಶ್ನಿಸಿದೆ."ನೇರಕ್ಕೆ ಹೋಗಿ ಎರಡನೇ ಸರ್ಕಲ್‌ನಲ್ಲಿ ಬಲಕ್ಕೆ ತಿರುಗಿ. ಮಹಾಬಲಿಪುರಂಗೆ ಹೋಗೋ ರಸ್ತೆ ಅದು. ಅದರಲ್ಲಿ ಎರಡು ಕಿಲೋಮೀಟರ್ ಸಾಗಿದ್ರೆ ಎಡಕ್ಕೆ ತಿರುವಡಿಸೂಲಂಗೆ ಹೋಗೋ ರಸ್ತೆ ಸಿಗುತ್ತೆ. ಬೋರ್ಡಿದೆ ಅಲ್ಲಿ." ಉತ್ತರ ಬಂತು. ಜೇಸುರತ್ನಂ ಫೋನಿನಲ್ಲಿ ಹೇಳಿದ್ದ ವಿವರವನ್ನು ಖಚಿತಪಡಿಕೊಂಡದ್ದಾಯಿತು. ಬೈಕಿನ ಮೇಲೆ ಕುಳಿತಂತೇ ಕಣ್ಣುಗಳನ್ನು ಅರೆಮುಚ್ಚಿ ಚಹಾ ಹೀರಿ ಮುಂದೆ ಸಾಗಿದೆ...ತಿರುವಡಿಸೂಲಂ ರಸ್ತೆ ತುಂಬಾ ಕಿರಿದಾಗಿತ್ತು. ಎರಡೂ ಕಡೆ ದಟ್ಟ ಗಿಡಮರಗಳ ಗೋಡೆ. ರಸ್ತೆ ಬಳುಕಿಬಳುಕಿ ಸಾಗಿತ್ತು. ಒಂದು ಕಿಲೋಮೀಟರ್ ಸಾಗಿದರೂ ಎದುರಿನಿಂದ ಒಂದು ವಾಹನದ ಸುಳಿವೂ ಕಾಣಲಿಲ್ಲ. ಜತೆಗೇ ಮರಗಳ ದಟ್ಟಣೆ ಮತ್ತಷ್ಟು ಅಧಿಕವಾಗಿ ತಲೆಯ ಮೇಲೇ ಕಪ್ಪನೆಯ ಚಪ್ಪರ ಹರಡಿದಂತಾಗಿಬಿಟ್ಟಿತು. ನನಗೆ ಕಗ್ಗತ್ತಲ ಸುರಂಗವೊಂದರಲ್ಲಿ ಪಯಣಿಸುತ್ತಿರುವ ಭ್ರಮೆ. ಸ್ವಲ್ಪ ಅಧೀರತೆಯಲ್ಲಿ ವಾಹನದ ವೇಗ ಕುಗ್ಗಿಸುತ್ತಿದ್ದಂತೇ ಹಿಂದಿನಿಂದ ಬಂದ ಟಾಟಾ ಸುಮೋವೊಂದು ಅಸಡ್ಡೆಯಿಂದ ನೂಕುವಂತೆ ತೀರಾ ಸನಿಹದಲ್ಲೇ ನನ್ನನ್ನು ದಾಟಿ ಮುಂದೆ ಹೋಯಿತು. ಕತ್ತಲ ಸುರಂಗದಿಂದ ಕೊನೆಗೂ ಹೊರಬರುತ್ತಿದ್ದಂತೆ ರಸ್ತೆ ಏರುತ್ತಾ ಬಲಕ್ಕೆ ಹೊರಳಿಕೊಂಡಿತು. ಎಡಕ್ಕೆ ಬೆಳ್ಳಿಯ ತಗಡಿನಂತೆ ಹೊಳೆಯುತ್ತಿದ್ದ ವಿಶಾಲ ಕೆರೆ. ನೆಮ್ಮದಿಯೆನಿಸಿತು. ಜೇಸುರತ್ನಂ ಹೇಳಿದ್ದಂತೆ ತಿರುವಡಿಸೂಲಂಗೆ ಇನ್ನು ನಾಲ್ಕು ಕಿಲೋಮೀಟರ್‌ಗಳಷ್ಟೇ.
ಏರುತಿರುವಿನಲ್ಲಿ ನಿಧಾನವಾಗಿ ಮುಂಬರಿದ ವಾಹನ ಅರ್ಧದಷ್ಟಕ್ಕೆ ಸಾಗಿ "ಗಡ್‌ಗಡ್ ಗಡರ್ರ್" ಎನ್ನುತ್ತಾ ನಿಂತುಬಿಟ್ಟಿತು. ಸ್ತಬ್ಧಗೊಂಡ ಎಂಜಿನ್ ಏನು ಮಾಡಿದರೂ ಮತ್ತೆ ಗಂಟಲು ತೆರೆಯಲಿಲ್ಲ. ಪೆಟ್ರೋಲ್ ಖಾಲಿಯಾಗಿರುವುದು ಸಾಧ್ಯವಿಲ್ಲ. ಪಾಂಡಿಚೆರಿ ಬಿಡುವಾಗ ಟ್ಯಾಂಕನ್ನು ಭರ್ತಿ ಮಾಡಿಸಿದ್ದೆ. ಆದರೂ ಒಮ್ಮೆ ನೋಡೋಣವೆಂದುಕೊಂಡು ಮುಚ್ಚಳ ತೆರೆದು ಟಾರ್ಚ್ ಬೆಳಕು ಹಾಯಿಸಿದೆ. ಟ್ಯಾಂಕ್ ಮುಕ್ಕಾಲು ಭಾಗ ತುಂಬಿತ್ತು. ಮುಂದಿನ ಹದಿನೈದು - ಇಪ್ಪತ್ತು ನಿಮಿಷಗಳಲ್ಲಿ ನನಗೆ ಗೊತ್ತಿದ್ದ ಕಸರತ್ತನ್ನೆಲ್ಲಾ ಮಾಡಿದೆ. ಗಾಡಿ ಜಪ್ಪಯ್ಯ ಅನ್ನಲಿಲ್ಲ. ತೊಂದರೆಯೇನೆಂದು ನನಗೆ ಅರ್ಥವಾಗಲೂ ಇಲ್ಲ. ಕೈಸೋತು ನಿಂತೆ. ಅಪರಿಚಿತ ಸ್ಥಳ, ಕತ್ತಲ ರಾತ್ರಿ, ಒಂದು ನರಪಿಳ್ಳೆಯ ಸುಳಿವೂ ಇಲ್ಲ, ಕೈಕೊಟ್ಟ ವಾಹನದ ಮುಂದೆ ನಿಸ್ಸಹಾಯಕನಾಗಿ ನಿಂತ ನಾನು. ಗಾಬರಿಗೊಂಡು ಸುತ್ತಲೂ ನೋಟ ಹೊರಳಾಡಿಸಿದೆ.ಎಡಕ್ಕೆ ವಿಶಾಲ ಕೆರೆ. ಸುಂಯುಗುಡುತ್ತಿದ್ದ ನಸುಗಾಳಿಗೆ ಮೇಲೆದ್ದು ಮೆಲ್ಲಮೆಲ್ಲಗೆ ದಡದತ್ತ ಸಾಗಿಬರುತ್ತಿದ್ದ ಪುಟ್ಟಪುಟ್ಟ ಅಲೆಗಳು. ಕೆರೆಯಾಚೆ ಕಪ್ಪು ದೈತ್ಯನಂತೆ ನಿಂತಿದ್ದ ಕರೀಗುಡ್ಡ. ಬಲಕ್ಕೆ ಮೇಲುಮೇಲಕ್ಕೆ ಏರಿಹೋಗಿದ್ದ ಬೆಟ್ಟ. ಎಲ್ಲವೂ ನಿರ್ಜನ, ನಿಶ್ಚಲ. ಜೀರುಂಡೆಗಳ "ಝೀ"ಕಾರದ ಹೊರತಾಗಿ ಎಲ್ಲವೂ ನಿಶ್ಶಬ್ಧ. ಹಿಂದಿನಿಂದ ಯಾವುದೋ ವಾಹನದ ಲಘು ಮೊರೆತ ಕೇಳಿಬಂತು. ಛಕ್ಕನೆ ಅತ್ತ ತಿರುಗಿದೆ. ತಿರುವಿನಲ್ಲಿ ಒಮ್ಮೆ ಹರಡಿಕೊಳ್ಳುತ್ತಾ ಒಮ್ಮೆ ಮಾಯವಾಗುತ್ತಿದ್ದ ಬೆಳಕು. ಅತ್ತಲೇ ಕಣ್ಣು ಕೀಲಿಸಿದವನಿಗೆ ಹತ್ತಿರಾದದ್ದು ಒಂದು ಮೋಟಾರ್‌ಬೈಕ್. ಅದರ ಮೇಲೆ ಇಬ್ಬರಿದ್ದರು. ಕೈತೋರಿದೆ. ನಿಧಾನವಾಗಿ ಹತ್ತಿರಾದ ವಾಹನ ನನ್ನನ್ನು ಸಮೀಪಿಸುತ್ತಿದ್ದಂತೇ ಛಕ್ಕನೆ ವೇಗ ಹೆಚ್ಚಿಸಿಕೊಂಡು ಏರಿನಲ್ಲಿ ಸಾಗಿಹೋಯಿತು. ಅದರ ಎಂಜಿನ್‌ನ ಕರ್ಕಶ ಸದ್ದು ನನ್ನ ಕಿವಿಗಳ ತಮಟೆಗಳನ್ನು ಹರಿದುಹಾಕಿಬಿಡುತ್ತದೆನಿಸಿ ನಾನು ಕಿವಿಗಳನ್ನು ಬಿಗಿಯಾಗಿ ಮುಚ್ಚಿಕೊಂಡೆ.ಆ ನರಕದ ತುತ್ತೂರಿಯಂಥ ಸದ್ದು ದೂರಾಗುತ್ತಿದ್ದಂತೇ ನಡೆದದ್ದೇನೆಂದು ನನ್ನ ಅರಿವಿಗೆ ಬಂತು. ಆ ವಾಹನ ನನ್ನ ಪಕ್ಕ ಸರಿದೋಡುತ್ತಿದ್ದಾಗ ಅದರ ಸವಾರರನ್ನು ನಾನು ಸ್ಪಷ್ಟವಾಗಿ ನೋಡಿದ್ದೆ. ನಾನು ಕಂಡದ್ದೇನು? ಚಾಲಕನ ಮುಖ ಭೂತದರ್ಶನವಾದಂತೆ ಬಿಳಿಚಿಹೋಗಿತ್ತು. ಪಿಲಿಯನ್‌ನಲ್ಲಿದ್ದವ ತನ್ನ ಮುಖವನ್ನು ಚಾಲಕನ ಬೆನ್ನಿಗೆ ಬಲವಾಗಿ ಒತ್ತಿಕೊಂಡಿದ್ದ. ಅವನ ಕೈಗಳು ಚಾಲಕನ ಎರಡೂ ಭುಜಗಳನ್ನು ಅವಚಿ ಹಿಡಿದುಬಿಟ್ಟಿದ್ದವು!ಇದೇಕೆ ಹೀಗೆ? ನಾನು ಗಾಬರಿಗೊಂಡೆ. ರೋಸಿನಾ, ಫಾದರ್ ಆಲ್ಫೋನ್ಸೋ, ಜೇಸುರತ್ನಂನ ಮುಖಗಳು ಕ್ಷಣದಲ್ಲಿ ಕಣ್ಣೆದುರು ಮೂಡಿದವು. ಸೊಂಟದ ಬೆಳ್ಟ್‌ನಿಂದ ಸೆಲ್‌ಫೋನ್ ತೆಗೆದೆ. ಜೇಸುರತ್ನಂನ ನಂಬರನ್ನು ನೆನಪಿಗೆ ತಂದುಕೊಳ್ಳುತ್ತಾ ಗುಂಡಿಗಳನ್ನು ಆತುರಾತುರವಾಗಿ ಒತ್ತಿ ಕಿವಿಗೆ ಹಿಡಿದೆ."ಟಿಣ್ ಟೊಂಯ್ ಟಿಣ್!" ಕಿವಿ ಇರಿದ ಸದ್ದಿಗೆ ಬೆಚ್ಚಿ ಸೆಲ್‌ಫೋನಿನ ಪರದೆಯತ್ತ ಗಾಬರಿಯ ನೋಟ ಹೂಡಿದೆ. ಅಲ್ಲಿ ಕಂಡದ್ದು... "ಕಾಲ್ ಫೈಯಿಲ್ಡ್."ಹತ್ತಿರದಲ್ಲೆಲ್ಲೂ ಟವರ್ ಇರುವ ಸಾಧ್ಯತೆ ಇಲ್ಲ ಎನ್ನುವ ಭೀಕರ ಸತ್ಯ ನನ್ನೆದುರು ಅನಾವರಣಗೊಂಡಿತ್ತು. ತಣ್ಣಗೆ ನಿಂತು ಯೋಚಿಸಿದೆ. ಎಂದೂ ಕೈಕೊಡದ ನನ್ನ ಹೀರೋ ಹೋಂಡಾ ಇಂದು ಈ ನಿರ್ಜನ ಪ್ರದೇಶದಲ್ಲಿ ಕೈಕೊಟ್ಟಿದೆ. ನಾನೀಗ ಯಾರನ್ನೂ ಸಂಪರ್ಕಿಸಲು ಸಾಧ್ಯವಿಲ್ಲ. ಈ ದಾರಿಯಲ್ಲಿ ಯಾರಾದರೂ ಬಂದರೂ ಅವರು ನನಗೆ ಸಹಾಯ ನೀಡುವುದಿಲ್ಲ ಎನ್ನುವುದು ನಿಮಿಷದ ಹಿಂದೆಯಷ್ಟೇ ಸಾಬೀತಾಗಿದೆ.ಇದೆಲ್ಲದರಿಂದ ನಾನು ಧೈರ್ಯಗೆಡುವುದು ಬೇಡ. ಇದೊಂದು ಕೆಟ್ಟ ಅನುಭವವಾಗುವುದರ ಬದಲು ನಾಳೆ ರೋಸಿನಾಳಿಗೆ ಹೇಳಿಕೊಂಡು ನಗುವಂಥ ಒಂದು ಸ್ವಾರಸ್ಯಕರ ಅನುಭವವಾಗಬೇಕು. ಮುಂದಿನ ನಾಲ್ಕು ಕಿಲೋಮೀಟರ್‌ಗಳನ್ನು ನಡೆದುಬಿಟ್ಟರೆ ಹೇಗೆ? ಅದಕ್ಕಿಂತಲೂ ಉತ್ತಮವಾದ ಮಾರ್ಗ ಬೇರೊಂದಿಲ್ಲ.ಬೈಕನ್ನು ತಳ್ಳಿಕೊಂಡು ಹೋಗಿ ರಸ್ತೆ ಬದಿಯ ದಟ್ಟ ಪೊದೆಯ ಹಿಂದೆ ನಿಲ್ಲಿಸಿ ಲಾಕ್ ಮಾಡಿದ್ದಲ್ಲದೇ ಚಕ್ರಕ್ಕೆ ಚೈನ್ ಸಹಾ ಹಾಕಿ ಬೀಗ ಹಾಕಿದೆ. ತಲೆಯ ಮೇಲೇ ರೆಕ್ಕೆ ಬಡಿಯುತ್ತಾ ಹಾರಿಹೋದ ಹೆಸರಿಲ್ಲದ ಇರುಳ್ವಕ್ಕಿಯನ್ನು ಶಪಿಸಿ ಹೆಗಲಿಗೆ ಚೀಲ ತೂಗುಹಾಕಿಕೊಂಡು ರಸ್ತೆಗಿಳಿದೆ. ಎರಡು ಹೆಜ್ಜೆ ನಡೆಯುವಷ್ಟರಲ್ಲಿ ಹಿಂದಿನಿಂದ ಯಾವುದೋ ವಾಹನದ ಶಬ್ಧ ಕೇಳಿ ನನ್ನ ಹೆಜ್ಜೆಗಳು ತಾವಾಗಿಯೇ ಸ್ಥಗಿತಗೊಂಡವು. ಮರುಕ್ಷಣ ನಿಮಿಷಗಳ ಹಿಂದಿನ ಅನುಭವ ನೆನಪಿಗೆ ಬಂತು. ನೇರವಾಗಿ ಮುಂದಕ್ಕೆ ನೋಡುತ್ತಾ ಏರುಹಾದಿಯಲ್ಲಿ ವೇಗವಾಗಿ ಹೆಜ್ಜೆ ಸರಿಸಿದೆ. ಹಿಂದಿನಿಂದ ಏದುತ್ತಾ ಬಂದ ವಾಹನ ನನ್ನ ನಿರೀಕ್ಷೆಗೆ ವಿರುದ್ಧವಾಗಿ ನನ್ನ ಪಕ್ಕದಲ್ಲೇ ನಿಂತಿತು. ನಿಂತು ಅತ್ತ ತಿರುಗದೇ ವಿಧಿಯಿರಲಿಲ್ಲ. ಅದೊಂದು ಹಳೆಯ ಜೀಪ್. ಚಾಲಕನ ಮೋರೆ ಸರಿಯಾಗಿ ಕಾಣದಿದ್ದರೂ ಅವನ ಹೊರತಾಗಿ ಬೇರಾರೂ ಇಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು."ಎಲ್ಲಿಗೆ ಹೋಗ್ತಿದೀಯ?" ಈ ನೆಲದ್ದಲ್ಲದ ಉಚ್ಛಾರಣೆಯ ಇಂಗ್ಲಿಷ್‌ನಲ್ಲಿ ಪ್ರಶ್ನೆ ಬಂತು. ಹೇಳಿದೆ. ಮುಂದಿನ ಪ್ರಶ್ನೆಗೆ ಅವಕಾಶವಿಲ್ಲದಂತೆ ನನ್ನ ಬೈಕ್ ಕೈಕೊಟ್ಟ ಕಥೆಯನ್ನೂ ಚುಟುಕಾಗಿ ವಿವರಿಸಿದೆ. ಅವನೊಮ್ಮೆ ಲೊಚಗುಟ್ಟಿದ. "ಬೈಕ್ ಬಗ್ಗೆ ಈಗೇನೂ ಮಾಡೋಕೆ ಆಗೋಲ್ಲ. ನಾಳೆ ಬೆಳಿಗ್ಗೆ ನನ್ನ ಕೆಲಸದವನನ್ನ ಚೆಂಗಲ್‌ಪೇಟೆಗೆ ಕಳಿಸಿ ಮೆಕ್ಯಾನಿಕ್ ಕರೆಸಬಲ್ಲೆ. ಜೀಪ್ ಹತ್ತು. ನಿನ್ನನ್ನ ತಿರುವಡಿಸೂಲಂಗೆ ತಲುಪಿಸ್ತೀನಿ." ಕೈಚಾಚಿ ಬಾಗಿಲು ತೆರೆದ. ಇದೂ ಒಂದು ಅನುಭವ. ಹತ್ತಿದೆ. ಈಗ ಅವನನ್ನು ಸರಿಯಾಗಿ ನೋಡುವ ಅವಕಾಶ. ಅರವತ್ತು ದಾಟಿದಂತಿದ್ದ ವಿದೇಶೀ ಮುದುಕ. ಜೀಪಿನ ಟಾಪಿಗೆ ತಾಗುತ್ತಿದ್ದ ತಲೆ, ಬೆಳ್ಳನೆಯ ಉಡುಪಿನಲ್ಲಿದ್ದ ಕುಗ್ಗದ ದೇಹ."ನಾನು ಹ್ಯಾರಿಸ್... ಹ್ಯಾರಿಸ್ ವಿಲ್ಸನ್." ತನ್ನ ಪರಿಚಯ ಹೇಳಿಕೊಂಡ. "ಹದಿನೈದು ವರ್ಷಗಳಿಂದ ಇಲ್ಲಿ ಸೆಟ್ಲ್ ಆಗಿದ್ದೀನಿ. ನನ್ನ ಮನೆ ಇಲ್ಲಿಂದ ಅರ್ಧ ಕಿಲೋಮೀಟರ್ ದೂರ." ವಾಹನವನ್ನು ಮುಂದಕ್ಕೆ ಚಿಮ್ಮಿಸಿ ಪ್ರಶ್ನೆ ಹಾಕಿದ: "ನಿನ್ನ ಬಗ್ಗೆ ಹೇಳು."ನನ್ನ ಹೆಸರು ಹೇಳಿ, ಪಾಂಡಿಚೆರಿ ವಿಶ್ವವಿದ್ಯಾಲದಲ್ಲಿ ನಾನೊಬ್ಬ ಅಧ್ಯಾಪಕ ಎಂದು ಹೇಳುತ್ತಿದ್ದಂತೆ ಆತ "ಊಹ್ ಊಹ್! ಎಂದು ಉದ್ಗಾರ ತೆಗೆದ. "ಗ್ರೇಟ್" ಎನ್ನುತ್ತಾ ಎಡಗೈಯಿಂದ ನನ್ನ ಭುಜ ತಟ್ಟಿದ. "ನನ್ನ ಮಗ ಸಹಾ ಯೂನಿವರ್ಸಿಟಿ ಪ್ರೊಫೆಸರ್, ಸಿಡ್ನಿಯಲ್ಲಿ." ದನಿಯಲ್ಲಿ ಹೆಮ್ಮೆಯಿತ್ತು. ಮುಂದಿನ ತಿರುವಿನಲ್ಲಿ ಛಕ್ಕನೆ ಬ್ರೇಕ್ ಒತ್ತಿದ."ಮಳೆ ಬರೋ ಹಾಗಿದೆ." ಲೊಚಗುಟ್ಟಿದ. "ನನಗೆ ಹತ್ತು ನಿಮಿಷ ಅವಕಾಶ ಕೊಡು. ನನ್ನ ಹೆಂಡತಿಯನ್ನ ಮನೆಗೆ ಕರಕೊಂಡು ಬರೋ ಸಮಯ ಇದು. ಅವಳು ಮನೆ ಸೇರಿದ ತಕ್ಷಣ ನಿನ್ನನ್ನ ನಿನ್ನ ಸ್ಥಳಕ್ಕೆ ಸೇರಿಸ್ತೀನಿ." ಪ್ರತಿಕ್ರಿಯೆಗೂ ಕಾಯದೇ ರಸ್ತೆಯನ್ನು ಬಿಟ್ಟು ಎಡಕ್ಕೆ ಗುಡ್ಡಗಳೆರಡರ ನಡುವೆ ನುಸುಳಿಹೋಗಿದ್ದ ಹಾದಿಗಿಳಿದ. ಮಾತು ಮುಂದುವರೆದಿತ್ತು: "ಇಲ್ಲಿಂದ ಒಂದು ಫರ್ಲಾಂಗ್ ದೂರ ನನ್ನ ಮನೆ. ಗುಡ್ಡದ ಆಚೆ ಕೆಳಗಿರೋ ಪುಟ್ಟ ಹಳ್ಳಿಯ ಕಡೆ ಸರ್ಕಾರದ ಗಮನ ಇಲ್ಲ. ಅಲ್ಲಿನ ಜನರಿಗೆ ನನ್ನ ಹೆಂಡತಿ ದಿನಾ ಸಂಜೆ ಪಾಠ ಹೇಳ್ತಾಳೆ. ಅವರ ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧೋಪಚಾರ ಸಹಾ. ಅಲ್ಲಿಗೆ ಜೀಪ್ ಹೋಗೋದಿಲ್ಲ. ಸಂಜೆ ಐದುಗಂಟೆಗೆ ಅಲ್ಲಿಗೆ ನಡೆದುಹೋಗ್ತಾಳೆ. ಹಿಂದಕ್ಕೆ ಬರೋದು ಎಂಟೂವರೆಗೆ. ನಾನು ಹೋಗಿ ಕರಕೊಂಡು ಬರಬೇಕು. ಕತ್ತಲಲ್ಲಿ ಒಂಟಿಯಾಗಿ ಬರೋದಿಕ್ಕೆ ಅವಳಿಗೆ ಭಯ. ಹಾವುಗಳಿಗೆ ಅವಳು ವಿಪರೀತ ಹೆದರ್ತಾಳೆ." ನಕ್ಕು ಮರುಕ್ಷಣ ದನಿ ತಗ್ಗಿಸಿದ: "ನಿನಗೊಂದು ವಿಷಯ ಹೇಳಬೇಕು. ಆ ಕೆರೆ... ಅದನ್ನ ಪೇಯಿ ಕುಳಂ ಅಂತಾರೆ."ಅವನತ್ತ ತಿರುಗಿದೆ. ರಸ್ತೆಯ ಮೇಲೆ ದೃಷ್ಟಿ ನೆಟ್ಟಿದ್ದ ಅವನಿಂದ ಗಂಭೀರ ದನಿಯಲ್ಲಿ ಮಾತು ಬಂತು: "ಅಲ್ಲಿ ಅಚಾನಕ್ ಆಗಿ ಕೆಟ್ಟು ನಿಂತ ವಾಹನ ನಿನ್ನದೊಬ್ಬನದೇ ಅಲ್ಲ." ನಾನು ಬೆಚ್ಚಿದೆ. ಮೈ ಸಣ್ಣಗೆ ಕಂಪಿಸಿತು. "ಹಾಗಂದರೆ...?" ಅವನು ಮಾತಾಡಲಿಲ್ಲ. ಕೈ ಒದರಿದ: "ಅಹ್ ಫರ್‌ಗೆಟ್ ಇಟ್." ಅವನ ಮುಖವನ್ನೇ ದಿಟ್ಟಿಸಿದೆ. ಅವನ ತುಟಿಗಳು ಬಿಗಿದುಕೊಂಡಿದ್ದವು. ತಿರುವಿನಲ್ಲಿ ಸರ್ರನೆ ವಾಹನ ಹೊರಳಿಸಿ ನಿಲುಗಡೆಗೆ ತಂದ. ಹೊರಗೆ ಹಾರಿ ಗೇಟ್ ತೆರೆದು ಮತ್ತೆ ಒಳಸೇರಿ ವೀಲ್ ಹಿಡಿದ. ನಾಲ್ಕು ಮಾರು ಮುಂದೆ ಸಾಗಿ ಬ್ರೇಕ್ ಒತ್ತಿದ. "ಇಳಿ." ನನ್ನತ್ತ ನೋಡದೇ ಹೇಳಿದ. ಕೆಳಗಿಳಿದು ಮುಂಭಾಗದಲ್ಲಿ ಹೆಂಚು ಹೊದಿಸಿದ್ದ ಒಂದಂತಸ್ತಿನ ವಿಶಾಲ ಮನೆಯ ಮುಂದೆ ನಿಂತೆ. "ಒಂದು ನಿಮಿಷ ನಿಲ್ಲು" ಎನ್ನುತ್ತಾ ಜೀಪನ್ನು ಮನೆಯ ಹಿಂಭಾಗಕ್ಕೆ ಕೊಂಡೊಯ್ದ.ಸುತ್ತಲೂ ನೋಟ ಹರಿಸಿದೆ. ಎಡಕ್ಕೆ ನಾವು ಬಂದ ಹಾದಿ ದಟ್ಟ ವೃಕ್ಷಗಳ ಹಿಂದೆ ಮುಚ್ಚಿಹೋಗಿತ್ತು. ಮನೆಯ ಹಿಂದೆ ಇನ್ನೂ ಮೇಲಕ್ಕೆ ಏರಿಹೋಗಿದ್ದ ಗುಡ್ಡ. ಎದುರಿನ ಇಳಿಜಾರು ಕಪ್ಪು ಕಂಬಳಿಯೊಂದನ್ನು ಹಾಸಿದಂತಿತ್ತು. ಬಲಕ್ಕೆ ಕೆಳಗೆ ಗಿಡಮರಗಳ ನಡುವೆ ಅರೆಬರೆ ಇಣುಕುತ್ತಿದ್ದ ಪೇಯಿ ಕುಳಂ. ನಾವು ಕೆರೆಯನ್ನು ಸುತ್ತಿ ಅದರ ಮತ್ತೊಂದು ಪಾರ್ಶ್ವದ ಗುಡ್ಡವನ್ನು ಅರ್ಧ ಏರಿಬಂದಿರುವುದು ಗಮನಕ್ಕೆ ಬಂತು. ಗಡಿಯಾರವನ್ನು ಮುಖದ ಹತ್ತಿರಕ್ಕೆ ತಂದು ಸಮಯ ನೋಡಿದೆ. ಎಂಟೂವರೆಗೆ ಎರಡು ನಿಮಿಷಗಳಿದ್ದವು. ಗಡಿಯಾರದಿಂದ ತಲೆ ಮೇಲೆತ್ತುತ್ತಿದ್ದಂತೆ ಅವನು ಕಾಣಿಸಿಕೊಂಡ. ನೀಳ ಬೀಗದ ಕೈ ಹೂಡಿ ಮುಂಬಾಗಿಲು ತೆರೆದ. ಒಂದು ಕೈ ಒಳತೂರಿ ಸ್ವಿಚ್ ಒತ್ತಿ ಬೆಳಕು ಮೂಡಿಸಿದ. "ಎರಡು ನಿಮಿಷ ಒಳಗೆ ಕೂರು." ಪ್ರತಿಕ್ರಿಯೆಗೂ ಕಾಯದೇ ನೆಲದ ಮೇಲೆ ಟಾರ್ಚ್‌ನ ಬೆಳಕು ಆಡಿಸುತ್ತಾ ಪೇಯಿ ಕುಳಂ ಕಡೆಗಿನ ಇಳಿಜಾರಿನಲ್ಲಿ ಹಿಂತಿರುಗಿ ನೋಡದೇ ಧಾಪುಗಾಲು ಹಾಕಿದ. ಎರಡು ಕ್ಷಣದಲ್ಲಿ ಮರಗಳ ಹಿಂದೆ ಮರೆಯಾಗಿಹೋದ.ನಾನು ಗರಬಡಿದು ನಿಂತೆ. ಒಳಗೆ ಹೋಗುವುದೇ ಬೇಡವೇ? ಯೋಚಿಸಲು ಸಮಯವೇ ಇರಲಿಲ್ಲ. ತಲೆಯ ಮೇಲೆ ತಣ್ಣನೆಯ ಹನಿಯೊಂದು ಬಿತ್ತು. ಮುಂದಿನ ಕ್ಷಣದಲ್ಲಿ ಹತ್ತು ತಣ್ಣನೆಯ ಸೂಜಿಗಳು. ಮನೆಯೊಳಗೆ ಪ್ರವೇಶಿಸಿದೆ. ಇದೂ ಒಂದು ಅನುಭವ. ಎರಡು ಟ್ಯೂಬ್‌ಲೈಟ್‌ಗಳ ಬೆಳಕಿನಲ್ಲಿ ಮೀಯುತ್ತಿದ್ದ ವಿಶಾಲ ಹಜಾರ. ನೆಲಕ್ಕೆ ಹಾಸಿದ್ದ ಮೆತ್ತನೆಯ ರತ್ನಗಂಬಳಿ, ಮೆತ್ತೆ ಹಾಕಿದ್ದ ಬೆತ್ತದ ಸೋಫಾಗಳು, ಕುರ್ಚಿಗಳು, ಗಾಜಿನ ಹೊದಿಕೆಯ ಬೆತ್ತದ್ದೇ ಟೀಪಾಯ್. ಮುಸುಕು ಹೊದ್ದ ಟೀವಿ, ಮತ್ತೊಂದು ಮೂಲೆಯಲ್ಲಿ ಎತ್ತರಕ್ಕೆ ನಿಂತಿದ್ದ ಸ್ಪೀಕರ್‌ಗಳ ನಡುವೆ ನಾಚಿದಂತೆ ಕುಳಿತಿದ್ದ ಮ್ಯೂಸಿಕ್ ಸಿಸ್ಟಮ್, ಅದರ ಒಂದು ಪಕ್ಕದ ಗಾಜಿನ ಗೋಡೆಯ ಹಿಂದೆ ನೂರುಗಟ್ಟಲೆಯಲ್ಲಿದ್ದ ಸಿಡಿಗಳು, ಕ್ಯಾಸೆಟ್‌ಗಳು... ಒಂದುಗೋಡೆಯ ಮೇಲಿದ್ದ ಎರಡು ಪುಟ್ಟ ಪುಟ್ಟ ತೈಲ ಚಿತ್ರಗಳು... ಬೇರೆಲ್ಲೂ ಕಂಡಿರದಿದ್ದ ಸ್ವಚ್ಛತೆ, ಈಗಷ್ಟೇ ಎಲ್ಲವನ್ನೂ ಜೋಡಿಸಿಟ್ಟಂತಹ ಅಚ್ಚುಕಟ್ಟುತನ. ಇದ್ಯಾವುದೋ ಮಾಯಾಲೋಕವಿರಬೇಕೆನಿಸಿತು.ಹೊರಗೆ ಮಳೆಯ ರಭಸ ಅಧಿಕವಾಯಿತು. ಹಿಂದೆಯೇ ಹುಯ್ಲಿಡುವ ಗಾಳಿ. ಮೆದುಳಿಗೆ ಸೂತಕದಂತಹ ಮುಸುಕು ಕವಿದುಕೊಳ್ಳುತ್ತಿದೆ ಅನಿಸುತ್ತಿದ್ದಂತೇ ಫಕ್ಕನೆ ದೀಪಗಳು ಆರಿಹೋದವು. ಎಲ್ಲೆಡೆ ಗಾಢಾಂಧಕಾರ. ಬೆಚ್ಚಿ ಮೇಲೆದ್ದು ನಿಂತೆ. ಸಾವರಿಸಿಕೊಂಡು ಮತ್ತೆ ಕುಳಿತೆ. ರೋಸಿನಾ ಏಕಾಏಕಿ ನೆನಪಾದಳು. ನನಗೇ ಧೈರ್ಯ ಹೇಳಿಕೊಳ್ಳುವಂತೆ ಅವಳ ನಂಬರ್ ಒತ್ತಿದೆ. ಮತ್ತೆ ಕಾಲ್ ಫೆಯಿಲ್ಡ್!ಹ್ಯಾರಿಸ್‌ನ ಸುಳಿವಿಲ್ಲ. ಈ ಮಳೆಯಲ್ಲಿ ಅವನು ಹಿಂತಿರುಗಲಾರ. ಬಡಿದ ಸಿಡಿಲಿಗೆ ಇಡೀ ಮನೆ ಅದುರಿತು. ಒಹ್ ಇದೇನಾಗುತ್ತಿದೆ! ನಾನೆಲ್ಲಿದ್ದೇನೆ?ಹೆದರಿಕೆ ಹುಟ್ಟಿಸುವಂಥ "ದೆವ್ವದ ಕೊಳ" ಎಂಬ ಹೆಸರಿನ ಕೆರೆ, ಅಲ್ಲಿ ಕೆಟ್ಟು ನಿಂತ ಬೈಕ್, ನನಗೆ ಹೆದರಿ ಓಡಿಹೋದ ಬೈಕ್ ಸವಾರರು, ಸಹಾಯಹಸ್ತ ನೀಡಿ ಇಲ್ಲಿಗೆ ಕರೆತಂದು ಒಂಟಿಯಾಗಿ ಕೂರಿಸಿ ಮಾಯವಾಗಿಹೋದ ವಿದೇಶೀ ಮುದುಕ... ಈ ಸುಡುಗಾಡಿನಲ್ಲಿ ಸುಸಜ್ಜಿತ ವಾಸದ ಮನೆ... ಎಲ್ಲವೂ ಅರ್ಥಕ್ಕೆ ನಿಲುಕದ ಅಸಹಜ ಬಿಡಿಬಿಡಿ ಚಿತ್ರಗಳು. ಇದಾವುದೂ ವಾಸ್ತವವಾಗಿರಲು ಸಾಧ್ಯವಿಲ್ಲ. ಈಗ ನಿಜವಾಗಿಯೂ ನನ್ನೆದೆಯಲ್ಲಿ ಹೆದರಿಕೆ ಮೂಡಿತು. "ಹೀಗೇನು ಮಾಡುವುದು" ಎಂಬ ಪ್ರಶ್ನೆ ಭೂತಾಕಾರವಾಗಿ ಮೇಲೇಳುತ್ತಿದ್ದಂತೇ ಒಳಬಾಗಿಲಲಲ್ಲಿ ಮಸುಕು ಬೆಳಕು ಕಾಣಿಸಿಕೊಂಡಿತು.ಮನೆಯೊಳಗೆ ಯಾರೋ ಇದ್ದಾರೆ! ನನ್ನ ಕಣ್ಣೆದುರೇ ಹ್ಯಾರಿಸ್ ಬೀಗ ತೆರೆದು ಬೆಳಕು ಮೂಡಿಸುವವರೆಗೆ ಕತ್ತಲಲ್ಲಿ ಮುಳುಗಿದ್ದ ಮನೆಯಲ್ಲಿ...!ಹಾರತೊಡಗಿದ ಎದೆಯನ್ನು ಒತ್ತಿ ಹಿಡಿದು ಅತ್ತಲೇ ನೋಟ ಕೀಲಿಸಿದೆ. ನಿಧಾನವಾಗಿ ಅಧಿಕಗೊಳ್ಳುತ್ತಿದ್ದ ಬೆಳಕಿನ ಜತೆ ಕಿವಿಗೆ ಸ್ಪಷ್ಟವಾಗಿ ಬಿದ್ದ ಹೆಜ್ಜೆಯ ಸಪ್ಪಳಗಳು. ಮುಂದಿನ ಕ್ಷಣದಲ್ಲಿ ಮೊಂಬತ್ತಿ, ಹಿಂದೆಯೇ ಅನಾವರಣಗೊಂಡ ದೀಪಧಾರಿಣಿ. ದುಂಡನೆಯ ಬಿಳುಪು ಮುಖ. ಸುತ್ತಲಿನ ಕತ್ತಲೆಯೇ ಮೈಗೆ ಮೆತ್ತಿಕೊಂಡಂಥ ಕಪ್ಪು ಗೌನ್‌ನಲ್ಲಿದ್ದ ಮೂವತ್ತರ ಅಸುಪಾಸಿನ ಹೆಂಗಸು. ಬೆಚ್ಚಿ ಗಕ್ಕನೆ ಮೇಲೆದ್ದೆ. ಅವಳು ನನಗಿಂತಲೂ ಅಧಿಕವಾಗಿ ಬೆಚ್ಚಿದಳು! ಗೋಚರವಾಗುವಂತೆ ಕಂಪಿಸಿದ ಅವಳ ದೇಹ. ಮೊಂಬತ್ತಿ ಆರಿಹೋಗುವಷ್ಟು ತೀವ್ರವಾಗಿ ಅಲುಗಿತು."ನೀನು... ನೀನು ಯಾರು? ಯಾರು ನೀನು? ಒಳಗೆ ಹೇಗೆ ಬಂದೆ?" ಅತೀವ ಗಾಬರಿಯಲ್ಲಿ ಕೂಗಿದಳು.ನಾನು ಕಂಗಾಲಾಗಿಹೋದೆ. "ನಾನು... ನಾನು..." ತೊದಲಿದೆ. "ಹ್ಯಾರಿಸ್... ಹ್ಯಾರಿಸ್ ಇಲ್ಲಿ ಕೂರಿಸಿ ಹೋದ."ಅವಳ ಮುಖ ಬಿಳಿಚಿಕೊಂಡಿತು. ನನ್ನ ಮೇಲೆ ದೃಷ್ಟಿ ನೆಟ್ಟಂತೇ ನಿಧಾನವಾಗಿ ಮುಂದೆ ಬಂದು ಮೊಂಬತ್ತಿಯಿದ್ದ ಕಂಚಿನ ಸ್ಟ್ಯಾಂಡನ್ನು ಟೀಪಾಯ್ ಮೇಲಿಟ್ಟಳು. "ಮತ್ತೊಮ್ಮೆ ಹೇಳು, ಇಲ್ಲಿಗೆ ಹೇಗೆ ಬಂದೆ?" ಕಣ್ಣುಗಳಲ್ಲಿ ಅಗಾಧ ಕೌತುಕ.ನಾನು ಸಾವರಿಸಿಕೊಂಡಿದ್ದೆ. ನನ್ನ ಬೈಕ್ ಕೆಟ್ಟುಹೋಗಿದ್ದರಿಂದ ಹಿಡಿದು ಹ್ಯಾರಿಸ್ ಇಲ್ಲಿಗೆ ಕರೆತಂದದ್ದರವರೆಗೆ ವಿವರವಾಗಿ ಹೇಳಿದೆ. ಎಲ್ಲವನ್ನೂ ಹೇಳಿಬಿಡಬೇಕು, ಅದೊಂದೇ ಈ ನಾಟಕೀಯ ಪ್ರಸಂಗದಿಂದ ಹೊರಬರಲು ನನಗಿರುವ ದಾರಿ ಎಂದು ನನಗನಿಸಿತ್ತು. ಅವಳು ರೆಪ್ಪೆ ಅಲುಗಿಸದೇ ಕೇಳಿದಳು. ನನ್ನ ಮಾತು ಮುಗಿಯುವ ಹೊತ್ತಿಗೆ ಅವಳ ಹಣೆಯ ಮೇಲೆ ಈ ತಂಪು ಹವೆಯಲ್ಲೂ ಬೆವರಹನಿಗಳು ಕಾಣಿಸಿಕೊಂಡಿದ್ದವು. ಹತ್ತಿರದ ಸೋಫಾದಲ್ಲಿ ಕುಸಿದ ಅವಳು ಮೌನವಾಗಿ ನನ್ನನ್ನೇ ನೋಡತೊಡಗಿದಳು. ಹೊರಗೆ ಮಳೆಯ ರಭಸ ಕಡಿಮೆಯಾಗಿತ್ತು."ಹ್ಯಾರಿಸ್ ಬಂದ ತಕ್ಷಣ ಹೊರಟುಬಿಡ್ತೀನಿ. ಮಳೆ ನಿಲ್ಲದಿದ್ದರೂ ಪರವಾಗಿಲ್ಲ." ನನಗೇ ಹೇಳಿಕೊಳ್ಳುವಂತೆ ಹೇಳಿದೆ. ಅವಳು ನಿಟ್ಟುಸಿರಿಟ್ಟಳು."ಹ್ಯಾರಿಸ್ ಬರೋದಿಲ್ಲ." ಪಿಸುಗಿದಳು."ಅಂದ್ರೆ...?" ನಾನು ಹೆಚ್ಚುಕಡಿಮೆ ಚೀರಿದೆ."ಹ್ಯಾರಿಸ್ ಸತ್ತುಹೋಗಿದ್ದಾನೆ. ಅವನ ಹೆಂಡತಿಯೂ ಸಹಾ. ಇಂದಿಗೆ ಸರಿಯಾಗಿ ಒಂದು ವರ್ಷ." ಅವಳಿಂದ ಅದೇ ಪಿಸುದನಿಯಲ್ಲಿ ಬಿಡಿಬಿಡಿ ಪದಗಳು ಹೊರಬಂದವು.ನಾನು ಗರಬಡಿದು ಕುಸಿದೆ. ಅವಳು ಕಣ್ಣುಗಳಿಗೆ ಕರವಸ್ತ್ರ ಒತ್ತಿದಳು. "ನಾನು ಮಾರ್ಥಾ, ಮಾರ್ಥಾ ವಿಲ್ಸನ್. ಹ್ಯಾರಿಸ್ ಮತ್ತು ಸೋಫಿಯಾರ ಮಗಳು... ಇಂದಿಗೆ ಸರಿಯಾಗಿ ಒಂದು ವರ್ಷ... ಡ್ಯಾಡ್‌ದು ಬರ್ತ್‌ಡೇ ಅವತ್ತು. ನಾನು ಸಿಡ್ನಿಯಿಂದ ಬಂದಿದ್ದೆ. ಹೀಗೆ ಮಳೆಯ ರಾತ್ರಿ ಅದು. ಮಹಾಬಲಿಪುರಂನಲ್ಲಿ ಡಿನ್ನರ್ ಮುಗಿಸಿ ಬರ್ತಾ ಇದ್ವಿ. ಅದೇ ಆ ಪೇಯಿ ಕುಳಂ..." ನಿಲ್ಲಿಸಿದಳು. ನಾನು ಬೆರಗುಹತ್ತಿ ಮುಖವನ್ನು ಮುಂದೆ ತರುತ್ತಿದ್ದಂತೇ ಮುಂದುವರೆಸಿದಳು: "ಡ್ರೈವ್ ಮಾಡ್ತಾ ಇದ್ದದ್ದು ನಾನೇ. ತಿರುವಿನಲ್ಲಿ ನಿಯಂತ್ರಣ ಕಳಕೊಂಡು ಜೀಪ್ ಕೆರೆಗೆ ಉರುಳಿಬಿತ್ತು. ನಾನು ಹೊರಗೆ ಹಾರಿ ಬಚಾವಾದೆ. ಆದ್ರೆ... ಮಮ್ ಅಂಡ್ ಡ್ಯಾಡ್... ಮುಳುಗಿಹೋದ್ರು... ಹೋಗಿಬಿಟ್ರು."ದುರಂತಕಥೆಯೊಂದರ ಅನಾವರಣ ನನ್ನನ್ನು ಗಾಢವಾಗಿ ಅಲುಗಿಸಿಬಿಟ್ಟಿತು. ಮಾತು ಹೊರಡಲಿಲ್ಲ. ನಿಮಿಷದ ನಂತರ ಕಷ್ಟಪಟ್ಟು "ಐ ಆಮ್ ಸಾರೀ" ಎಂಬ ಮೂರು ಪದಗಳನ್ನು ಹೊರಡಿಸಿದೆ. ಅವಳು ತುಟಿ ತೆರೆದಳು. ಯಾರಿಗಾದರೂ ಹೇಳಿಕೊಳ್ಳಬೇಕೆಂಬ ತುಡಿತವೋ, ಹೇಳತೊಡಗಿದಳು. ಹತ್ತು - ಹನ್ನೆರಡು ನಿಮಿಷಗಳವರೆಗೆ ಅವ್ಯಾಹತವಾಗಿ ಹರಿದ ಅವಳ ಮಾತುಗಳನ್ನು ನಾನು ಕಣ್ಣವೆ ಅಲುಗಿಸದೇ ಕೇಳಿದೆ. ಹ್ಯಾರಿಸ್ ಮೂಲತಃ ಸ್ಕಾಟ್‌ಲೆಂಡಿನವ. ಹೆಂಡತಿ ಸೋಫಿಯಾ ಆಸ್ಟ್ರೇಲಿಯಾದವಳು. ಮದುವೆಯ ನಂತರ ಹ್ಯಾರಿಸ್ ಆಸ್ಟ್ರೇಲಿಯಾಗೇ ವಲಸೆ ಹೋದ. ದಂಪತಿಗೆ ಇಬ್ಬರು ಮಕ್ಕಳು. ಮಗ ಜೋನಥನ್, ಮಗಳು ಮಾರ್ಥಾ. ಹದಿನೈದು ವರ್ಷಗಳ ಹಿಂದೆ ಹ್ಯಾರಿಸ್ ಹೆಂಡತಿ ಜೊತೆ ಇಂಡಿಯಾಗೆ ಪ್ರವಾಸ ಬಂದ. ಈ ದೇಶ ಅವರಿಬ್ಬರಿಗೂ ತುಂಬಾ ಇಷ್ಟವಾಗಿಬಿಟ್ಟಿತು. ಇಲ್ಲೇ ಸೆಟ್ಲ್ ಆಗೋ ನಿರ್ಧಾರ ಮಾಡಿದ್ರು. ಬ್ರಿಟಿಷ್ ಪಾದ್ರಿಯೊಬ್ಬನಿಗೆ ಸೇರಿದ್ದ ಈ ಮನೆ ಕೊಂಡು ಇಲ್ಲಿ ನೆಲೆಸಿದರು. ಸುತ್ತಲ ಹಳ್ಳಿಗರ ಪ್ರೀತಿವಿಶ್ವಾಸ ಗಳಿಸಿದರು. ಸೋಫಿಯಾ ಹಳ್ಳಿಗರಿಗೆ ಪಾಠ ಹೇಳುವುದಲ್ಲದೇ ಅವರ ಸಣ್ಣಪುಟ್ಟ ಕಾಯಿಲೆಗಳಿಗೆ ಮದ್ದು ಮಾಡುತ್ತಿದ್ದಳು. ಅವಳಿಗೆ ಅದೊಂದು ಹುಚ್ಚೇ ಆಗಿಬಿಟ್ಟಿತು. ಹ್ಯಾರಿಸ್ ಚಿತ್ರವಿಚಿತ್ರ ಗಿಡಗಂಟೆಗಳನ್ನು ಬೆಳೆಸಿಕೊಂಡು ಅವುಗಳ ಆರೈಕೆಯಲ್ಲಿ ಖುಷಿಪಡತೊಡಗಿದ. ಪ್ರತೀ ಸಂಜೆ ಎಂಟೂವರೆಗೆ ಗುಡ್ಡದ ಕೆಳಗಿನ ಹಳ್ಳಿಗೆ ಹೋಗಿ ಹೆಂಡತಿಯನ್ನು ಕರೆದುಕೊಂಡು ಬರುವುದು ಅವನ ದಿನಚರಿಯ ಒಂದು ಭಾಗ. ವಿಲ್ಸನ್ ದಂಪತಿ ಇಲ್ಲಿ ಬದುಕಿದ ಬಗೆ ಇದು. ಮಗ - ಮಗಳು ಸಿಡ್ನಿಯಲ್ಲೇ ಉಳಿದರು. ಜೋನಥನ್ ಈಗ ಅಲ್ಲಿನ ಯೂನಿವರ್ಸಿಟಿಯಲ್ಲಿ ತತ್ವಶಾಸ್ತ್ರ ಬೋಧಿಸುತ್ತಿದ್ದಾನೆ. ಅವನಿಗೆ ಮದುವೆಯಾಗಿದೆ. ನನ್ನೆದುರು ಕೂತ ಮಗಳು ಮಾರ್ಥ ಒಬ್ಬಳು ನನ್. ನ್ಯೂಗಿನಿ, ಸೋಲೋಮನ್ ಐಲ್ಯಾಂಡ್ಸ್, ಸಮೋವಾ ಮುಂತಾದ ಫೆಸಿಫಿಕ್ ದ್ವೀಪಗಳಲ್ಲಿ ಮತಪ್ರಚಾರದ ಸುತ್ತಾಟ ಅವಳಿಗೆ ಇಷ್ಟವಾದ ಕೆಲಸ. ತಾನು ಎಲ್ಲಿದ್ದರೂ ಸರಿ ಪ್ರತಿವರ್ಷ ತಂದೆತಾಯಿಯರ ಹುಟ್ಟಿದ ಹಬ್ಬಗಳಂದು ತಪ್ಪದೇ ಇಲ್ಲಿಗೆ ಬರುತ್ತಾಳೆ. ಕಳೆದ ವರ್ಷವೂ ಬಂದಿದ್ದಳು. ದುರಂತ ಘಟಿಸಿದ್ದು ಆಗಲೇ. ತಂದೆಯ ಹುಟ್ಟಿದ ಹಬ್ಬ ಮತ್ತೆ ಬಂದಿದೆ. ಆದರೆ ತಂದೆ ಈಗ ಇಲ್ಲ. ತಾಯಿ ಸಹಾ. ಆದರೂ ಮಾರ್ಥಾಳಿಗೆ ಇಲ್ಲಿನ ಸೆಳೆತ ತಪ್ಪಲಿಲ್ಲ. ಇಂದು ಬೆಳಿಗ್ಗೆಯಷ್ಟೇ ಇಲ್ಲಿಗೆ ಬಂದಿದ್ದಾಳೆ...ಕೇಳಿದ ವಿವರಗಳನ್ನು ಅರಗಿಸಿಕೊಳ್ಳುತ್ತಿದ್ದಂತೇ ಅವಳಿಂದ ಮಾತು ಬಂತು: "ನಾನು ಒಂಟಿಯಾಗಿ ಕೂತು ಅಳ್ತಾ ಇದ್ದೆ. ನನ್ನ ದುಃಖ ಹಂಚಿಕೊಳ್ಳೋದಿಕ್ಕೆ ನೀನು ಬಂದಿದ್ದೀಯ."ವಿಷಾದದ ನಗೆಯೊಂದು ನನ್ನಿಂದ ಹೊರಡುತ್ತಿದ್ದಂತೆ ಅವಳು ಕಣ್ಣುಗಳನ್ನು ಒರೆಸಿಕೊಂಡು ತಲೆಯೆತ್ತಿದಳು: "ಈ ಮನೆಯನ್ನ ಮಾರಿಬಿಡಬೇಕು ಅನ್ನೋ ಯೋಚನೆ ನನಗೆ ಬಂದದ್ದುಂಟು. ಆದರೆ ಕೊಂಡುಕೊಳ್ಳೋಕೆ ಯಾರೂ ಮುಂದೆ ಬರ್ತಾ ಇಲ್ಲ. ಇಲ್ಲಿ ಅಸಹಜ ಘಟನೆಗಳು ನಡೀತಿವೆ ಅಂತ ಹೇಳಿ ಹಳ್ಳಿಯ ಜನರೂ ಇತ್ತ ಬರೋದಿಲ್ಲ. ಮನೆಯನ್ನ ಸ್ವಚ್ಛವಾಗಿಡೋಕೆ, ತೋಟವನ್ನ ನೋಡಿಕೊಳ್ಳೋಕೆ ಒಂದು ಕುಟುಂಬವನ್ನ ಹೆಚ್ಚು ಹಣದಾಸೆ ತೋರಿಸಿ ಕಷ್ಟಪಟ್ಟು ಒಪ್ಪಿಸಿದ್ದೀನಿ. ಆ ಜನರ ಓಡಾಟ ಇಲ್ಲಿ ಹಗಲಲ್ಲಿ ಮಾತ್ರ. ಕತ್ತಲಾದ ಮೇಲೆ ಒಂದು ನರಪಿಳ್ಳೆಯೂ ಇತ್ತ ಸುಳಿಯೋದಿಲ್ಲ. ನಂಗೆ ಒಮ್ಮೊಮ್ಮೆ ಅನ್ಸುತ್ತೆ, ಮಮ್ ಹಾಗೂ ಡ್ಯಾಡ್‌ಗೆ ಇಷ್ಟವಾದ ಈ ಮನೆಯಲ್ಲೇ ಇದ್ದುಬಿಡೋಣ ಅಂತ." ಕಣ್ಣುಗಳನ್ನು ಅರೆಮುಚ್ಚಿದಳು. ತಗ್ಗಿದ ದನಿಯಲ್ಲಿ ಮಾತು ಸಾಗಿತ್ತು: "ಅವರಿಬ್ರೂ ಮಾಡ್ತಾ ಇದ್ದ ಕೆಲಸಾನ್ನ ಮುಂದುವರಿಸ್ಕೊಂಡು, ಇಲ್ಲೇ, ಈ ಕಾಡುಜನರ ನಡುವೆ ಈ ಕಾಡಿನ ಮಗಳಾಗಿ ಇದ್ದುಬಿಡೋಣವಾ ಅಂತ.""ಕಾಡಿನ ಮಗಳು! ಅಡವಿಯ ಹುಡುಗಿ!" ಸಣ್ಣಗೆ ನಕ್ಕೆ. ಅವಳು ನನ್ನತ್ತ ತಿರುಗಿದಳು. "ಯೆಸ್, ಅದೇ. ಅಡವಿಯ ಹುಡುಗಿ." ಕನಸಿನಲ್ಲೆಂಬಂತೆ ಹೇಳಿಕೊಂಡಳು. ನಾನು ಪ್ರತಿಕ್ರಿಯಿಸುವ ಮೊದಲೇ ಛಕ್ಕನೆ ದನಿಯೆತ್ತರಿಸಿ ಪ್ರಶ್ನಿಸಿದಳು: "ನಿನ್ನ ಯೋಚನೆ ಏನು? ನೀನು ಈಗಲೇ ನಿನ್ನ ದಾರಿ ಹಿಡಿದು ಹೋಗೋದಿಕ್ಕೆ ಬಯಸ್ತೀಯೇನು? ಅಥವಾ ಈ ರಾತ್ರಿ ಇಲ್ಲೇ ಉಳಿಯೋದಿಕ್ಕೆ ನೀನು ಇಷ್ಟಪಟ್ರೆ ಈ ಅಡವಿಯ ಹುಡುಗಿಯ ಅಭ್ಯಂತರ ಇಲ್ಲ." ಸಣ್ಣಗೆ ನಕ್ಕು ಮುಂದುವರೆಸಿದಳು: "ಬೆಳಿಗ್ಗೆ ತಿರುವಡಿಸೂಲಂಗೆ ನಿನ್ನ ಜತೆ ನಾನೂ ನಡೆದು ಬರ್ತೀನಿ. ನನಗೆ ಒಂದು ಬದಲಾವಣೆ ಅದು."ಕಣ್ಣುಗಳನ್ನು ಅರೆಮುಚ್ಚಿ ಯೋಚಿಸಿದೆ. ಮಳೆ ನಿಂತಿತ್ತು. ನಿರ್ಧಾರಕ್ಕೆ ಬಂದೆ."ದಯವಿಟ್ಟು ತಪ್ಪು ತಿಳೀಬೇಡ ಮಾರ್ಥಾ. ನಾನು ಎಷ್ಟೇ ಆದ್ರೂ ಒಬ್ಬ ಅಪರಿಚಿತ. ಇದು ನಿನ್ನ ವೈಯುಕ್ತಿಕ ಕ್ಷಣ. ಇಲ್ಲಿ ನನ್ನ ಅತಿಕ್ರಮಣ ಸೌಜನ್ಯ ಅನ್ನಿಸೋದಿಲ್ಲ. ನಾನು ಈಗ ಹೊರಡ್ತೀನಿ. ನನಗಾಗಿ ಅಲ್ಲಿ ಜೇಸುರತ್ನಂ ಕಾಯ್ತಿದಾನೆ. ಮಳೆ ನಿಂತಿದೆ. ನನ್ನತ್ರ ಟಾರ್ಚ್ ಇದೆ."ಅವಳು ನಿಟ್ಟುಸಿರಿಟ್ಟಳು. "ಸರಿ, ನಿನ್ನಿಷ್ಟ." ನಿಧಾನವಾಗಿ ಮೇಲೆದ್ದಳು. "ಒಂದು ನಿಮಿಷ ಕೂರು, ನಿನಗೆ ಟೀ ತರ್ತೀನಿ." ಒಳಕೋಣೆಯ ಬಾಗಿಲ ಕತ್ತಲಲ್ಲಿ ಕರಗಿಹೋದಳು. ಬೊಗಸೆಯಲ್ಲಿ ಮುಖವಿಟ್ಟು ಯೋಚನೆಗೆ ಬಿದ್ದೆ. ಇದೆಲ್ಲವೂ ವಾಸ್ತವವೇ? ಅಥವಾ ಕನಸೇ? ನನ್ನನ್ನಿಲ್ಲಿ ಕರೆತಂದದ್ದು ಹ್ಯಾರಿಸ್‌ನ ಪ್ರೇತವೇ? ಯಾಕಾಗಿ? ಹೊರಬಾಗಿಲಲ್ಲಿ ಸದ್ದಾಯಿತು. ತಲೆಯೆತ್ತಿದೆ. ಮಾರ್ಥಾ ಇಟ್ಟುಹೋಗಿದ್ದ ಮೊಂಬತ್ತಿಯ ತಣ್ಣನೆಯ ಬೆಳಕಿನಲ್ಲಿ ಕಂಡದ್ದು...! ರಕ್ತ ಹೆಪ್ಪುಗಟ್ಟಿಸುವ ನೋಟ! ನಖಶಿಖಾಂತ ಬೆವತುಹೋದೆ.ಅಲ್ಲಿ... ಒದ್ದೆಯಾಗಿಹೋಗಿದ್ದ ಬಟ್ಟೆಗಳನ್ನು ಒದರಿಕೊಳ್ಳುತ್ತಾ ನಿಂತಿದ್ದ... ಹ್ಯಾರಿಸ್! ಅದೇ ಬಿಳಿಯುಡುಗೆ. ಪಕ್ಕದಲ್ಲಿ ಬಿಳಿಯದೇ ಉಡುಪಿನಲ್ಲಿ ಒಬ್ಬಳು ವಯಸ್ಕ ಹೆಂಗಸು. ಚೀರಲೆಂದು ನಾನು ಬಾಯಿ ತೆರೆಯುತ್ತಿದ್ದಂತೇ ಅವನು ನಕ್ಕ. "ಸಾರೀ ಮ್ಯಾನ್. ಈ ಮಳೆಯಿಂದಾಗಿ ನಿನ್ನನ್ನ ಹೆಚ್ಚು ಹೊತ್ತು ಕಾಯಿಸಬೇಕಾಯ್ತು." ಪಕ್ಕದಲ್ಲಿದ್ದ ಹೆಂಗಸಿನತ್ತ ತಿರುಗಿದ: "ನೋಡು ಸೋಫಿ, ಇವನೇ ನಾನು ಹೇಳಿದ ಆ ಬಡಪಾಯಿ."ಹೆಂಗಸು ನನ್ನತ್ತ ನೋಡಿ ಮುಗುಳ್ನಕ್ಕಳು. ನಾನು ಹತಾಷೆಯಲ್ಲಿ ಒಳಕೋಣೆಯ ಬಾಗಿಲತ್ತ ತಿರುಗಿದೆ. ಮತ್ತೆ ಇತ್ತ ತಿರುಗುವಷ್ಟರಲ್ಲಿ ಹ್ಯಾರಿಸ್ ನನ್ನಿಂದ ಕೇವಲ ಎರಡು ಅಡಿಗಳಷ್ಟು ಹತ್ತಿರದಲ್ಲಿದ್ದ. ಅವನ ಮುಖ ಬೆಳ್ಳಗೆ ಬಿಳಿಚಿಹೋಗಿತ್ತು."ಏನಾಯ್ತು? ಯಾಕಿಷ್ಟು ಹೆದರಿದ್ದೀಯ?" ಅವನ ದನಿಯಲ್ಲಿ ಗಾಬರಿಯಿತ್ತು. ನನ್ನ ಭುಜದತ್ತ ಕೈಚಾಚಿದ. ನಾನು ಅತೀವ ಭೀತಿಯಲ್ಲಿ "ಓಹ್ ನೋ" ಎಂದು ಚೀರಿ ಎರಡು ಹೆಜ್ಜೆ ಹಿಂದೆ ಹಾರಿದೆ. "ಮಾರ್ಥಾ, ಪ್ಲೀಸ್ ಬೇಗ ಬಾ." ಭೀತಿಯಲ್ಲಿ ಅರಚಿದೆ.ನನ್ನತ್ತ ಚಾಚಿದ್ದ ಅವನ ಕೈ ಹಾಗೇ ಗಾಳಿಯಲ್ಲಿ ನಿಶ್ಚಲವಾಗಿ ನಿಂತುಬಿಟ್ಟಿತು. ಬಾಗಿಲಲ್ಲೇ ನಿಂತಿದ್ದ ಅವನ ಹೆಂಡತಿ ಧಾಪುಗಾಲಿಟ್ಟು ನನ್ನತ್ತ ಓಡಿಬಂದಳು. ಅವಳ ಕಣ್ಣುಗಳು ಅಗಲವಾಗಿ ತೆರೆದುಕೊಂಡಿದ್ದವು. ಮುಖ ಶವದಂತೆ ಬಿಳಿಚಿಹೋಗಿತ್ತು. "ಮಾರ್ಥಾ! ಮಾರ್ಥಾ! ಎಲ್ಲಿದ್ದಾಳೆ ಅವಳು?" ಆತುರಾತುರವಾಗಿ ಪ್ರಶ್ನಿಸಿದಳು.ನನ್ನ ಕೈ ಅಯಾಚಿತವಾಗಿ ಒಳಕೋಣೆಯ ಬಾಗಿಲತ್ತ ಚಾಚಿತು. "ಒಳಗೆ ಹೋದ್ಲು... ಈಗ." ನನ್ನ ದನಿ ನನಗೇ ಅಪರಿಚಿತವಾಗಿತ್ತು. ಇಬ್ಬರೂ ಮುಖ ಮುಖ ನೋಡಿಕೊಂಡರು. "ಸ್ಟ್ರೇಂಜ್!" ಹ್ಯಾರಿಸ್ ಉದ್ಗರಿಸಿದ. "ಮಾರ್ಥಾ ಸತ್ತುಹೋದಳು, ಇಂದಿಗೆ ಸರಿಯಾಗಿ ಒಂದು ವರ್ಷ. ನನ್ನ ಬರ್ತ್‌ಡೇ ಆವತ್ತು. ಆ ದಿನವೇ ನನ್ನ ಮಗಳನ್ನ ಕಳಕೊಂಡೆ."ನಾನು ಶಿಲೆಯಾಗಿ ನಿಂತೆ. ಅವನ ಮಾತು ಮುಂದುವರೆದಿತ್ತು: "ನನ್ನ ಬರ್ತ್‌ಡೇಗಾಗಿ ಸಿಡ್ನಿಯಿಂದ ಬಂದಿದ್ಲು ಅವಳು. ಮಹಾಬಲಿಪುರಂನಲ್ಲಿ ಡಿನ್ನರ್ ಮುಗಿಸಿ ಬರ್ತಾ ಇದ್ವಿ. ಆ ದಿನವೂ ಇಂಥದೇ ಮಳೆ. ಡ್ರೈವ್ ಮಾಡ್ತಾ ಇದ್ದದ್ದು ಅವಳೇ. ತಿರುವಿನಲ್ಲಿ ನಿಯಂತ್ರಣ ಕಳಕೊಂಡು ಜೀಪ್ ಕೆರೆಗೆ ಉರುಳಿಬಿತ್ತು. ಮುಂಭಾಗ ಪೂರ್ತಿ ನೀರಿನಲ್ಲಿ. ಹಿಂದಿನ ಸೀಟ್‌ನಲ್ಲಿದ್ದ ನಾವಿಬ್ರೂ ಪ್ರಯಾಸದಿಂದ ಹೊರಗೆ ಬಂದ್ವಿ. ಆದ್ರೆ... ಮಾರ್ಥಾ... ಹೋಗಿಬಿಟ್ಲು. ಅವಳಿದ್ದ ಜೀಪಿನ ಮುಂಭಾಗ ನೀರಲ್ಲಿ ಮುಳುಗಿಹೋಗಿತ್ತು. ಅವಳಿಗೆ ಏಟು ಬಿದ್ದಿತ್ತು. ಜತೆಗೇ ಸೀಟಿನಲ್ಲಿ ಸಿಕ್ಕಿಕೊಂಡಿದ್ಲು. ಹೊರಗೆ ಬರೋದಿಕ್ಕೆ ಅವಳಿಗೆ..."ಅವನು ಹೇಳುತ್ತಲೇ ಇದ್ದ. ನಾನು ಕಾಲುಗಳ ಸ್ವಾಧೀನ ತಪ್ಪಿ ಕೆಳಗೆ ಕುಸಿದೆ.

January 30, 2009

ಬೆಟ್ಟದಲ್ಲಿ ನೆಲ್ಲಿ, ಸಮುದ್ರದ ಉಪ್ಪು

ನಾನು, ವೆಂಕ ,ಸೀನ - ಆತ್ಮೀಯ ಗೆಳೆಯರು. ಒಂದೇ ರೂಮಿನಲಿದ್ದು ಇಂಜಿನಿಯರಿಂಗ್ ಪಾಸು ಮಾಡಿದವರು. ಹುಡುಗಿಯರ ಬಗ್ಗೆ ಹಲವಾರು ಕನಸುಗಳನ್ನು ಹಂಚಿಕೊಂಡ ನಮಗೆ ಈಗ ಮದುವೆಯ ವಯಸ್ಸು.

ಮೊದಲು ಮದುವೆಯಾದವನು ವೆಂಕ. ಮದುವೆಯ ಮಂಟಪದಲ್ಲಿ ಅವನ ಹೆಂಡತಿಯನ್ನು ಪ್ರಥಮ ಬಾರಿ ನೋಡಿದಾಗ, ಸೀನ ಮತ್ತು ನನಗೆ ಅವಳು ಚೆನ್ನಾಗಿಲ್ಲ ಎನಿಸಿತು. ನನಗಂತೂ ಅವಳ ಹಲ್ಲುಗಳು ಉಬ್ಬೆನಿಸಿತು. ಸೀನ ಕೂಡ "ಹಲ್ಲೇನೋ ಪರವಾಗಿಲ್ಲ , ಆದರೆ ಸೊಂಟ ದಪ್ಪ " ಅಂತ ಮುಗೂ ಹಿಂಡಿದ. ನಾವೆಲ್ಲ ಕಂಡ ಕನಸಿನ ಕನ್ಯೆಯರಿಗೂ ಇವಳಿಗೂ ಹೋಲಿಕೆ ಇಲ್ಲವೆಂದು ಇಬ್ಬರು ನಿರ್ಧರಿಸಿದವು. ಊಟಕ್ಕೆ ಕುಳಿತಾಗ ಹಾರ - ಬಾಸಿಂಗಗಳ ಸಮೇತ ನಮ್ಮ ಬಳಿ ಬಂದ ವೆಂಕ "ಹೇಗಿದ್ದಾಳೋ " ಅಂತ ಕಳಕಳಿ ಇಂದ. ತುಂಬ ಚೆನ್ನಾಗಿದ್ದಾಳೆ ಯು ಆರ್ ಲಕ್ಕಿ ..." ಅಂತ ಇಬ್ಬರು ಒಟ್ಟಿಗೆ ಹೇಳಿದವು. "ಥ್ಯಾಂಕ್ಸ್ ಕಣ್ರೋ ...ನಾಲ್ಕೈದು ಹೀದುಗಿಯರನ್ನ ನೋಡಿದೆ . ಆದರೆ ಇವಳನ್ನ ನೋಡಿದಾ ಮೇಲೆ ಬೇರೆ ಹುಡುಗಿಯರನ್ನ ನೋಡಬೇಕು ಅಂತ ಅನ್ನಿಸಲೇ ಇಲ್ಲ " ಅಂತ ಹೆಮ್ಮೆ ಇಂದ ಹೇಳಿಕೊಂಡ. ನಾನು ಸೀನ ಮುಖ ಮುಖ ನೋಡಿಕೊಂಡೆವು.

ಮತ್ತೆ ಆರೇ ತಿಂಗಳಿಗೆ ಸೀನನ ಮದುವೆಯು ಆಯಿತು. ವಿಚಿತ್ರ ವೆಂದರೆ ಅವನ ಹೆಂಡತಿಯೂ ನನಗೆ ಚೆನ್ನಾಗಿಲ್ಲ ಅನಿಸಿತು. ಮುಗು ಸ್ವುಲ್ಪ ಡೊಂಕು! ವೆಂಕ ನಂತು "ಹೋಗಿ ಹೋಗಿ ಟೆನ್ನಿಸ್ ಕೋರ್ಟ್ ನಾ ಮದುವುಯಾಗಿದ್ದನಲ್ಲೋ ! ಎಂತ ಕಾರಬ್ ಟೇಸ್ಟ್ ಮಾರಾಯ. ಕಡೆ ಪಕ್ಷ ನನ್ನದರು ಒಂದು ಮಾತು ಕೆಳಬಹುದಿತ್ತಲ್ಲ " ಅಂತ ಪೇಚಾಡಿದ. ನಮ್ಮ ಗೊಣಗಾಟ ಏನೆ ಇದ್ದರು, ಸೀನ ಬಳಿ ಬಂದಾಗ "ಯು ಆರ್ ಲಕ್ಕಿ " ಅಂತ ಕೈ ಕುಲುಕಿದವು. ಸೀನ ನನ್ನೊಬ್ಬನನ್ನೇ ಪಕ್ಕಕ್ಕೆ ಕರೆದು "ವೆಂಕನ ತಾರಾ ಹಾರಿಬಲ್ ಆಯ್ಕೆ ನಂದಲ್ಲ ಅಲ್ವೇನೋ ? " ಅಂತ ಕೇಳಿದಾ. "ನೋ ನೋ " ಅಂತ ನಾನವನ್ನ ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ.

ನಾನಂತೂ ಹುಡುಗಿಯ ವಿಚಾರದಲ್ಲಿ ತುಂಬ ಜಾಗರೂಕನಾಗಿದ್ದೆ. ಉಬ್ಬು ಹಲ್ಲು, ದಪ್ಪ ಸೊಂಟ, ಮೊಂಡು ಮುಗು, ಟೆನ್ನಿಸ್ ಕೋರ್ಟು ....ಯಾವುದು ಇಲ್ಲವೆಂದು ಖಾತರಿ ಪಡಿಸಿಕೊಂಡೆ. ಆದರು ಮದುವೆಯ ದಿನ ಗೆಳೆಯರು ಏನು ಎನ್ನುವರೋ ಎಂಬ ಆತಂಕ ದಲ್ಲಿದ್ದೆ. ಪುರೋಹಿತರು, ವಿದಿಯೋದವರು , ಬಂಧು ಬಳಗದವರ ಕಣ್ಣು ತಪ್ಪಿಸಿ ಗೆಳೆಯರ ಬಳಿ ಹೋಗಿ "ಹೇಗಿದ್ದಾಳೋ ?" ಅಂತ ಉದ್ವೇಗದಲ್ಲಿ ಕೇಳಿದೆ. "ಯು ಆರ್ ಲಕ್ಕಿ ...." ಅಂತ ಇಬ್ಬರು ನನ್ನ ಕೈ ಕುಲುಕಿದರು. ನನಗೆ ನಂಬಿಕೆಯಾಗಲಿಲ್ಲ. "ಸುಳ್ಳು ಹೇಳಬೇಡ್ರೋ ...ನಿಜ ಹೇಳಿ ...ನಂಗೇನು ಬೇಜಾರಾಗೊಲ್ಲ ..." ಅಂತ ಬೇಡಿಕೊಂಡೆ. "ಸುಳ್ಳು ಯಾಕೆ ಹೇಳೋಣಾ ....ನಿಜವಾಗಿಯು ನೀನು ಲಕ್ಕಿ ...." ಅಂತ ಮೊತ್ತೊಮ್ಮೆ ನನ್ನ ಕೈ ಕುಲುಕಿ ಒಬ್ಬರಿಗೊಬ್ಬರು ಮುಖ ನೋಡಿಕೊಂಡರು !!!











December 23, 2008

ಬಡವನ ಬದುಕು..


ಬಡವನಿಗೆ ಉಣ್ಣುವ ಆಸೆ,

ಉಂಡರೆ ಉಡುವ ಆಸೆ,

ಉಟ್ಟರೆ ಹೆಂಡತಿ ಆಸೆ,

ಹೆಂಡರಾದರೆ ಮಕ್ಕಳ ಆಸೆ,

ಮಕ್ಕಳಾದರೆ ಬದುಕುವ ಆಸೆ,

ಬದುಕಿದರೆ ಕೆಡುವ ಆಸೆ,

ಕೆಟ್ಟರೆ ಸಾಯುವ ಆಸೆ....

November 25, 2008

ಭಲೇ ತಾತ ಭಲೇ

ಸುಮಾರು ೩ ತಿಂಗಳ ನಂತರ ಊರಿಗೆ ಹೋಗೋಣ ಅಂತ ತೀರ್ಮಾನಿಸಿ, ಕಛೇರಿಗೆ ರಜೆ ಹಾಕಿ ಸಿದ್ದನಾಗಿ ದಿಲ್ಲಿಇಂದಿರಾ ಗಾಂದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋದೆ. ನನ್ನ ವಿಮಾನ ಸುಮಾರು ೯ ಘಂಟೆಗೆ ಹೊರಡಬೇಕಿತ್ತು. ನಾನು ತುಂಬ ಬೇಗ ವಿಮಾನ ನಿಲ್ದಾಣ ತಲುಪಿದ್ದೆ. ನನ್ನ ಬಳಿ ಸುಮಾರು ೩ ಘಂಟೆಗಳ ಸಮಯವಿತ್ತು. ಒಳಗಡೆ ಕುಳಿತು ಒಂದಷ್ಟು ಸ್ನೇಹತರಿಗೆ ದೂರವಾಣಿಯ ಮೂಲಕ ಮಾತನಾಡುತ್ತ ಒಂದಷ್ಟು ಸಮಯ ಕಳೆದೆ. ತುಂಬ ಬೇಜಾರು ಆಗ್ತಾ ಇತ್ತು. ಹಾಗೆ ಸುತ್ತಾಡುತ್ತ ಸಮಯ ಕಳೆದುಬಿಟ್ಟೆ. ಇನೊಂದು ಘಂಟೆ ಅಷ್ಟೆ ಬಾಕಿ ಇತ್ತು. ನಾನು ನನ್ನ ವಿಮಾನದ ಗೇಟ್ ಬಳಿ ಕುಳಿತು ಹಾಗೆ ಅಲ್ಲಿ ಇಲ್ಲಿ ನೋಡುತ್ತಾ ಕಾಲ ಕಳೆಯುತಿದ್ದೆ. ಅಷ್ಟರಲ್ಲಿ ಒಂದು ಸಿಹಿ ಸುದ್ದಿ ಕೇಳಿ ಬಂತು. ನಮ್ಮ ವಿಮಾನ ಸರಿಯಾದ ಸಮಯಕ್ಕೆ ಹೊರಡುವ ಸುದ್ದಿ. ಪ್ರಯಾಣಿಕರೆಲ್ಲರೂ ಸಾಲಾಗಿ ನಿಂತು ಹೊರಡುತ್ತಿದ್ದರು. ನಾನು ನಿಲ್ಲ್ಲ ಬೇಕಲ್ಲ ಎಂಬ ಸೋಮಾರಿತನದಿಂದ ಹಾಗೆ ಎದುರಲ್ಲೇ ಕುಳಿತು, ಕೊನೆಯಲ್ಲಿ ಹೋದರೈತು ಎಂದು ಹಾಗೆ ಆ ಸಾಲಿನ ಕಡೆಯಲ್ಲಿ ,ಗಮನಿಸುತ್ತಾ ಕುಲಿತಿದ್ದೆ.

ಸಾಲಿನ ಕಡೆಯಲ್ಲಿ ಇಬ್ಬರು ತಮಿಳು ದಂಪತಿಗಳು ನಿಂತಿದ್ದರು. ಅವರನ್ನು ನೋಡಿದರೆ ತಿಳಿಯುತ್ತೆ, ಇವರು ತಮಿಲಿಗರೆಂದೆ. ಹೇಗೆ ಅಂತಿರ, ಅವರದು ಒಂದಷ್ಟು ಟ್ರೇಡ್ ಮಾರ್ಕ್ ಪ್ರಪಂಚದಾದ್ಯಂತ ಪ್ರಸಿದ್ದಿ. ಅದೇನೇ ಇರ್ಲಿ, ವಿಷಯಕ್ಕೆ ಬರ್ತೀನಿ. ಈ ದಂಪತಿಗಳ ಮುಂದೆ ಇಬ್ಬರು ಕಲಿಯುಗದ ಹುಡುಗರು ನಿಂತಿದ್ದರು. ಇವರಿಬ್ಬರ ಟ್ರೇಡ್ ಮಾರ್ಕ್ ತುಂಬಾ ವಿಚಿತ್ರವಾಗಿತ್ತು. ನಮ್ಮ ಹಳ್ಳಿ ನಾಯಿಗಳು ಇವರನ್ನು ನೋಡಿದ ಕೂಡಲೇ ಕಚ್ಚುವುದು ಖಂಡಿತ. ದೊಗಳೆ ಚಡ್ಡಿ, ಕೆದಿರಿದ ಕೂದಲು, ಮುಂಗೈನ ತುಂಬಾ ಪ್ಲಾಸ್ಟಿಕ್ ಬಳೆಗಳು, ಕುತ್ತಿಗೆಯಲ್ಲಿ ಸ್ಟೀಲ್ ಚೈನ್ ಗಳು, ಹೀಗೆ ವಿಚಿತ್ರವಾದ ಉಡಿಗೆಗಳು. ನಾನು ಕೂಡ ಅಂದುಕೊಂಡೆ. ಯಾವುದೊ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡೋ ಹುಡುಗ್ರು ಅಂತ. ಇವರ ಮುಂದಿದ್ದ ಜನರೆಲ್ಲ ಮುಂದೆ ಸಾಗಿಯೇ ಬಿಟ್ರು. ಇವರಿಬ್ಬರು ಮಾತ್ರ ನಿಂತಲ್ಲೇ ನಿಂತು ಸಂಗೀತ ಪ್ರಿಯರಾಗಿ, ಮುಂದೆ ಏನು ಆಗ್ತಾ ಇದೆ ಎನ್ನುವ ಅರಿವು ಇಲ್ಲದೆ ಸಂಗೀತದಲ್ಲಿ ಮಗ್ನರಾಗಿದ್ದರು. ಪಾಪ ಇವರ ಹಿಂದಿದ್ದ ದಂಪತಿಗಳು ಮುಂದೆಯೂ ಹೋಗದೆ, ನಿಲ್ಲಲು ಆಗದೆ ಇವರಿಬ್ಬರನ್ನು ನೋಡುತ್ತಾ ನಿಂತಿದ್ದರು. ಒಂದೆರಡು ಬಾರಿ ಸುತ್ತ ಮುತ್ತ ನೋಡಿದರು. ಯಾರು ಎನನ್ನು ಹೇಳಲಿಲ್ಲ. ನಾನು ಏನು ಮಾಡುವುದೆಂದು ಯೋಚಿಸದೆ, ಎದ್ದು ಆ ಇಬ್ಬರು ಹುಡುಗರ ಮುಂದೆ ನಿಂತುಬಿಟ್ಟೆ. ಆ ಕೂಡಲೇ ಇಬ್ಬರಿಗೂ ಜ್ಞಾನೋದಯ ಆಯಿತು ಕಣ್ರೀ..ಒಂದ್ಕಡೆ ಕುಶಿ ಆಯಿತು. ಏಕೆ ಅಂದ್ರೆ ಇಬ್ಬರಿಗೂ ಸುತ್ತ ಮುತ್ತಲಿನ ಪ್ರಪಂಚದ ಅರಿವಾಗುತ್ತೆ ಅಂತ. ಕೂಡಲೇ ಒಬ್ಬ ನನ್ನ ಕೇಳಿದ. excuse me boss!!! We are in a queue? ನಾನು ಅವನಿಗೆ ಉತ್ತರ ಹೇಳಿದೆ..I know ಅಂತ.ಮತ್ತೆ ಹಿಂದಿ ನಲ್ಲಿ ಹೇಳಿದ..ಫಿರ್? ಅಂತ..ನಾನು ಇಬ್ಬರನ್ನು ನೋಡಿ..ಸುಮ್ಮನೆ ನಿಂತೇ..ಏನೋ ಗೊಣಗಿದ ನಂಗು ಅರ್ಥ ಆಗ್ಲಿಲ್ಲ..whats your problem man? ಅಂದೇ..nothing ಅಂದ..are you sure? ಅಂತ ಕೇಳಿದೆ..ಆಗ ಹೇಳ್ತಾನೆ..we are in a queue, you cannot come and stand like this..ಅಂತ..ನಾನು ಅವನಿಗೆ ಹೇಳಿದೆ...actually I was standing behind you guys..Since both of them were not moving along with the queue, I thought I should move forward..ಅಂತ I dont undersatnd what you are saying ..ಅಂದ..ಅದಿಕೆ ನಾನು This is exctly your problem ಅಂದೇ..ಅಲ್ಲಿ ತನಕ ಸುಮ್ಮನಿದ್ದ ತಮಿಳು ದಂಪತಿಗಳು ಇಂಗ್ಲಿಷ್ ನಲ್ಲಿ ಹೇಳಿದ. You are right!!! Even I am seeing this guys for a long time...ಅಂತ ನನ್ನ ಪರವಾಗಿ ಮಾತನಾಡಿದ. ನನಗೆ ಸ್ವುಲ್ಪ ಸಮಾದಾನ ಆಯಿತು. ಈ ಇಬ್ಬರು ಹುಡುಗರು ತಣ್ಣಗಾದರು..ಆಮೇಲೆ ಮಜಾ ನೋಡಿ..ಆ ಯಪ್ಪಾ ನನ್ನ ಹತ್ತಿರ ಬಂದು ಹೇಳೋದು..you did the right thing ಅಂತ..ಕುಶಿ ಆಯಿತು..ಮುಂದಿನ ಕ್ಷಣದಲ್ಲೇ ಒಂದು ಮಾತನ್ನ ಹೇಳಿದ. what you did is also wrong.you should not come and stand in between the queue ಅಂತ.ನಾನು ಹೇಳ್ದೆ. actually I should have taken you with me ಅಂತ..ಮುದುಕಪ್ಪ ಮೆಲ್ಲೆ smile ಕೊಟ್ಟ..ನಾನುನು ಅಂದುಕೊಂಡೆ..ಪಕ್ಕ ಇದಾನೆ ಮುದುಕಪ್ಪ ಅಂತಾ...

October 31, 2008

ಕುಡುಕನ ಮಾಸ್ಟರ್ ಸ್ಟ್ರೋಕ್...

ಸಾಮನ್ಯವಾಗಿ ಜನಗಳು ಎಣ್ಣೆ ಹಾಕಿ ಫುಲ್ಲು ಟೈಟಾದ ಮೇಲೆ ಏನ್ ಮಾಡ್ತಾರೆ ಅಂದ್ರೆ . ಯಾವ ಪೋಸಿಶನ್ ನಲ್ಲಿ ಎಲ್ಲಿ ಕೂತ್ಕೊಂಡ್ ಕುಡಿತ ಇರ್ತಾರೆ ಅಲ್ಲೇ ಪ್ಲಾಟ್ ಆಗ್ತಾರೆ. ಇನೊಂದ್ ಸ್ವಲ್ಪ ಜನ ನಾನೇ ರಾಜ ಅನ್ಕೊಂಡು ಯಾರು ಕೇಳಲಿ ಬಿಡಲಿ ಮಾತಿನ ಸಾಗರವನ್ನೇ ಹರಿದು ಬಿಡುತ್ತಾರೆ. ಮತ್ತೆ ಸ್ವಲ್ಪ ಜನ ಫುಲ್ಲು ಬಾವುಕರಾಗಿ ಅತ್ತಿಬಿಡ್ತಾರೆ. ಮತ್ತೊಂದ್ ಅಷ್ಟು ಜನ ಕರಾಟೆ ಆಡಿ ಪೋಲಿಸ್ ಸ್ಟೇಷನ್ಗೆ ಹೋದ್ರೆ, ಕೆಲವರು ಆಸ್ಪತ್ರೆಗೆ ಹೋಗ್ತಾರೆ. ಇದೆಲ್ಲ ಬಿಟ್ಟು ಕೆಲವರು ಇದ್ದರೆ ಅವ್ರು ಟೈಟೆ ಆಗೋಲ್ಲ. ಇದೆಲ್ಲ ಬಿಟ್ಟು ಅವ್ನು ಬೇರೆ ಏನಾದ್ರು ಮಾಡ್ತಾನೆ ಅಂದ್ರೆ ಅವನು ಮಾಸ್ಟರ್ ಪೀಸ್ ಆಗ್ತಾನೆ. ಈ ತರಹದ ಒಂದು ಮಾಸ್ಟರ್ ಪೀಸ್ ಬಗ್ಗೆ ನಾನು ಸಾಕಷ್ಟು ಹುಡುಕ್ತ ಇದ್ದೆ. ಹಿಂದೆ ಎಂದಾದರೂ ನೋಡಿರ ಬಹುದೇ ಎಂದು ನನ್ನ ಹಳೆ ನೆನಪುಗಳನ್ನ ಮೆಲುಕು ಮಾಡಿದೆ.

ಒಂದು ಘಟನೆ ನೆನಪಾಯಿತು. ರಾತ್ರಿ ಹುಡುಗ ಒಂದು ಫುಲ್ಲು ಬಾಟಲ್ ವಿಸ್ಕಿ ಯನ್ನು ಒಬ್ಬನೇ ಕೂತು, ಎದುರುಗಡೆ ಕೂತಿರುವನಿಗೆ ಮೊಳೆ ಹೊಡಿತ, ಬಾಟಲ್ ಅನ್ನು ಕಾಲಿ ಮಾಡಿ ಮಲಗಿಬಿಟ್ಟ. ಎದುರುಗಡೆ ಕೂತಿದ್ನಲ್ಲ ಅವನ ಪರಿಸ್ತಿತಿ ಏನಗಿರಬಹುದು ಒಮ್ಮೆ ನೀವು ಯೋಚನೆ ಮಾಡಿ. ಏಕೆ ಅಂದ್ರೆ ಅಂದು ಮಲಗಿದಾಗ ಸುಮಾರು ಬೆಳಗಿನ ಜಾವ ೪ ಘಂಟೆ. ಆ ಲೆವೆಲ್ನಲ್ಲಿ ಕುಡಿತಾನೆಅಂದ್ರೆ ಬೆಳಿಗ್ಗೆ ರಜೆ ಇದೆ ಅಂತಾನೆ ಅರ್ತ ಬಿಡಿ. ಅಂತು ಇಂತೂ ೪ ಘಂಟೆಗೆ ಮಲಗಿಬಿಟ್ರು. ಅರೆ ಇದೇನು ಮುಖ್ಯವಾಗಿ ಹೇಳಬೇಕಗಿರೋದನ್ನೇ ಹೇಳಲಿಲ್ಲ ಅಂತ ಯೋಚನೆ ಮಾಡ್ತಾ ಇದಿರಾ. ಸತ್ಯ ಏನು ಅಂದ್ರೆ ರಾತ್ರಿ ಆ ತರಹ ಏನು ಆಗ್ಲಿಲ್ಲ.

ಕುಡಿದವನಿಗೆ ಕಿಕ್ ಹೊಡದಿದ್ದು ಬೆಳಿಗ್ಗೆ ಎದ್ದ ಮೇಲೆ. ಬೆಳಿಗ್ಗೆ ಎದ್ದಾಗ ಸುಮಾರು ೧೧ ಘಂಟೆ. ಕಷ್ಟ ಪಟ್ಟು ಎದ್ದ ಹುಡುಗ. ಬಲಗಡೆ ಬುಜದಲ್ಲಿ ಒಂದು ಗಾಯ ಆಗಿದೆ. ಹುಡುಗ ಯೋಚನೆ ಮಾಡಿದ. ರಾತ್ರಿ ಏನ್ ಆಯಿತು ಅಂತ ಒಮ್ಮೆ ಯೋಚಿಸಿದ. ನೆನಪು ಆಯಿತು. ತಾನು ಎದುರುಗಡೆ ಕೂತವನಿಗೆ ತುಂಬ ಕೊರಿತ ಇದ್ದೆ. ಅವ್ನು ಕೂಡ ಉರಕೊಂತ ಇದ್ದ. ಅಲ್ಲಿಗೆ ಹುಡುಗ ತೀರ್ಮಾನಕ್ಕೆ ಬಂದ. ನಿಮಗೂ ಅರ್ಥ ಆಯ್ತಲ್ಲಾ ...ಕಾರಣ ಯಾರಿರಬಹುದು ಅಂತ?

ಸಿಟ್ಟು ಬಂತು ಹುಡುಗನಿಗೆ. ಅವನನ್ನ ಕರೆದು ಕೂಗಾಡಿದ. ಮಗನೆ ರಾತ್ರಿ ನಾನು ಟೈಟಾಗಿದ್ದಾಗ ನನನ್ನ ಬೀಳಿಸಿ ಗಾಯ ಮಾಡಿ ಇದ್ದೀಯ. ಸುಮ್ನೆ ಇರೋಲ್ಲ ನಾನು. ಎದುರ್ಗಡೆ ಇದ್ದವನಿಗೆ ಮತ್ತೆ ಉರ್ದೊಯ್ತು. ಅವನು ಹೇಳ್ದ, ಮಗನೆ ರಾತ್ರೆಲ್ಲ ನಿದ್ದೆ ಹಾಳ್ಮಾಡಿದ್ದೂ ಅಲ್ಲದೆ ಈಗ ನಂಗೆ ಉಗಿತ ಇದ್ದೀಯ ...ಕುಡ್ದು ಮಗನೆ ಬಚ್ಚಲು ಮನೇಲಿ ಬಿದ್ದೆ. ಜೋರು ಸೌಂಡ್ ಆಯಿತು. ಏನಪ ಅಂತ ನಾನು ಬರೋದ್ರಲ್ಲಿ ನೀನೆ ಎದ್ದು ಬರ್ತಾ ಇದ್ದೆ. ಏಳ್ತಾ ಇದಾನಲ್ಲ ಅಂತ ನಾನು ಓಪಸ್ ಬರ್ತಾ ಇದ್ದೆ ಮತ್ತೆ ಸೌಂಡ್ ಆಯಿತು...ಅದೇ ತಾರಾ ಸುಮಾರ್ ಸರಿ ಸೌಂಡ್ ಕೆಳುಸ್ತು...ಅಂತು ಮತ್ತೆ ಬಂದು ನನ್ನ ತಲೆ ತಿಂತಾ ಕುಡಿದೆ..ಈಗ ನನ್ ಮೇಲೆ ಆರೋಪ ಮಾಡ್ತಾ ಇದ್ದೀಯ. ಕಡಿಮೆ ಕುಡಿಯೋಕೆ ಆಗೋಲ್ವಾ...

ಅದ್ರು ನಮ್ಮ ಮಾಸ್ಟರ್ ಪಿಎಸೆಗೆ ಇವನ ಮೇಲೆ ನಂಬಿಕೆ ಇರ್ಲಿಲ್ಲ...ಆಮೇಲೆ ದಿನ ಕಳೆದ ಹಾಗೆ ಕೈ, ಕಾಲು ಹಾಗೆ ನೋವೋಕ್ಕೆ ಶುರು ಅದ್ವಂತೆ...ಸಾಯಂಕಾಲ ಮತ್ತೆ ಕ್ವಾರ್ಟರ್ ಹೊಡಿಬೇಕಾದ್ರೆ ಹೇಳೋದಂತೆ. ಮಗ ನೀನು ಬೆಳಿಗ್ಗೆ ಹೇಳಿದ್ದು ಸತ್ಯ ಅಂತ......

ಹೆಂಗೆ ನಮ್ಮ ಮಾಸ್ಟರ್ ಪೀಸ್ ?


ಹೀಗೊಂದು ಸತ್ಯ ದರ್ಶಿನಿ

ಆತ್ಮಿಯರೇ,
ಮಂಗಳೂರು ಅಂದಕೂಡಲೇ ಮನಸ್ಸಿಗೆ ತಟ್ಟನೆ ನೆನಪಾಗುವ ಗಟನೆ ಅಂದ್ರೆ ಇತ್ತೀಚೆಗಷ್ಟೇ ಚರ್ಚ್ಗಳ ಮೇಲೆ ಬಜರಂಗದಳದವರು ನಡೆಸಿದ ಹಲ್ಲೆ. ನಾನು ಇಲ್ಲಿ ನನ್ನ ದಿಲ್ಲಿ ಸ್ನೇಹಿತರೊಂದಿಗೆ ಈ ವಿಚಾರ ಬಂದಾಗಲೆಲ್ಲ ನನ್ನ ಮನಸ್ಸಿಗೆ ತುಂಬ ಮುಜುಗುರವಾದ ಒಂದು ಬಾವನೆ. ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಇದೆ ಸುದ್ದಿ. ಮಂಗಳೂರಿನಿಂದ ಪ್ರಾರಂಬವಾಗಿ ದಿಲ್ಲಿ ತಲುಪಿ ಅಲ್ಲಿಂದ ನಮ್ಮ ಪ್ರದಾನ ಮಂತ್ರಿಗಳ ಜೊತೆಗೆ ಅಮೆರಿಕಾಗು ಹೋಗಿ ಬಂತು. ನಮ್ಮ ಪ್ರದಾನ ಮಂತ್ರಿಗಳು ಕೂಡ ತುಂಬ ನೊಂದು ಕೊಂಡು "ದಿಸ್ ಇನ್ಸಿಡೆಂಟ್ ಹಾಸ್ ಪುಟ್ ಇಂಡಿಯಾ ಇನ್ ಟು ವೆರಿ ಹ್ಯುಮಿಲಿಯೇಟಿಂಗ್ ಪೋಸಿಶನ್ " ಅಂತ ಮಾದ್ಯಮದ ಮೂಲಕ ತಮ್ಮ ಕೋಪವನ್ನು ಕರ್ನಾಟಕ ಸರ್ಕಾರದವರಿಗೆ ರವಾನೆ ಮಾಡ್ಬಿಟ್ರು. ಸರ್ಕಾರದವರು ಸಿಂಗ್ ಸಹೆಬ್ರುನಾ ಸಮಾದಾನ ಮಾಡುವ ಪ್ರಯತ್ನದಲ್ಲಿ ಬಜರಂಗ ದಳದ ನಾಯಕ ಮಹೇಂದ್ರ ಕುಮಾರನನ್ನು ಬಂಧಿಸಿಯೇ ಬಿಟ್ರು. ಅಲ್ಲಿಗೆ ಸುದ್ದಿಗಳು ಸಮಾಪ್ತ. ಸುದ್ದಿ ಅಷ್ಟೆ ಮುಗೀತು...ಕತೆ ತುಂಬಾನೆ ಬಾಕಿ ಇದೆ. ಓದಿ......

ನಾನು ಮೊದಲು ಈ ಘಟನೆ ಕೇಳ್ದಾಗ ಈ ಬಜರಂಗ ದಳದವರಿಗೆ ಇನ್ನೇನು ಕೆಲಸ ಇಲ್ವಾ? ಇವರ ಹಣೆಬರಹನೆ ಇಷ್ಟು ಅಂತ ರೆಗ್ತಾ ಇದ್ದೆ. ಆದ್ರೆ ಒಂದು ಪ್ರಶ್ನೆ ಮನಸ್ಸಿಗೆ ಬಂತು. ಮಂಗಳೂರಿನಲ್ಲೇ ಮೊದಲು ಏಕೆ ಪ್ರಾರಂಬ ಆಯಿತು? ಸುಮ್ಸುಮ್ನೆ ಇವರು ಚರ್ಚ್ಗಳ ಮೇಲೆ ಏಕೆ ದಾಳಿ ಮಾಡಿದ್ರು ಅಂತ? ಹುಚ್ಚರು ಒಟ್ಟಿಗೆ ಸೇರಿದ್ದಾರೆ ಅಂತ. ಹೀಗೆ ಮಾಧ್ಯಮಗಳನ್ನು ಗಮನಿಸುತ್ತಾ ಇದ್ದೆ. ಡೆಕ್ಕನ್ ಹೆರಾಲ್ಡ್ ಮತ್ತು ಮುಂಬೈ ಮಿರರ್ ಎಂಬ ದಿನ ಪತ್ರಿಕೆಗಳಲ್ಲಿ ಒಂದು ಲೇಖನ ಬಂತು. ಅದರ ಕೊಂಡಿಯು ಇಲ್ಲಿದೆ ನೋಡಿ.
http://www.mumbaimirror.com/net/mmpaper.aspx?page=article&sectid=3&contentid=200809192008091903361675194568d35&pageno=1


ಈ ಲೇಖನಗಳ ಪ್ರಕಾರ ಈ ಎಲ್ಲ ಗಲಬೆಗಳಿಗೆ ಕಾರಣ ಸತ್ಯ ದರ್ಶನ ಎಂಬ ಒಂದು ಪುಸ್ತಕ. ಈ ಪುಸ್ತಕ ದಲ್ಲಿ ಇರುವುದಾದರೂ ಏನು? ಕೆಲವು ಆಯ್ದ ಭಾಗಗಳನ್ನು ನಾನು ಇಲ್ಲಿ ಉಲ್ಲೆಕಿಸುತ್ತಿದ್ದೇನೆ.
೧. ಊರ್ವಶಿ - ಭಾಗವಾನ್ ಶ್ರೀ ವಿಷ್ಣುವಿನ ಮಗಳು - ಇವಳು ದೇವದಾಸಿ - ವಶಿಷ್ಟ ಈ ದೇವದಾಸಿಯ ಮಗ - ಇವನು ತನ್ನ ತಾಯಿಯನ್ನೇ ವದಿಸುತ್ತಾನೆ - ಇಂತಹ ನೀಚ ಮನುಷ್ಯ ಹಿಂದೂಗಳ ಭಗವಂತ ರಾಮನ ಗುರು.
೨. ಇಂತಹವರನ್ನು ದೇವರು ಎಂದು ಹೇಳುವುದೇ ಒಂದು ದೊಡ್ಡ ತಮಾಷೆ.
ಹೀಗೆ ಹಲವಾರು ರೀತಿಯಲ್ಲಿ ಹಿಂದೂ ದೇವರುಗಳ ವಿಶ್ಲೇಷಣೆ ಮಾಡುತ್ತ ಹೊರಡುತ್ತಾನೆ. ನಾನು ಇಂತಹ ಮಹಾನುಭಾವ ಯಾರೆಂದು ತಿಳಿಯುವ ಕುತೂಹಲ. ಅವನ ಹೆಸರು ಪರವಸ್ತು ಸೂರ್ಯನಾರಾಯಣ. ಇವನ ಬಗ್ಗೆ ಹೇಳೋದು ತುಂಬ ಇದೆ.

ಇವನೇನೋ ಬರೆದ ಸರಿ. ನಂತರ ಏನಾಯ್ತು. ೧೯೯೬ ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ಆಂದ್ರ ಪ್ರದೇಶದಲ್ಲಿ ಕೆಲವೊಂದು ಚುರ್ಚುಗಳು ಜನರ ಮುಂದೆ ಈ ಪುಸ್ತಕವನ್ನು ತಂದಿಡುವ ಸಾಹಸ ಪ್ರಯತ್ನ ಮಾಡಿದರು. ಅಂದ್ರ ಸರ್ಕಾರದವರು ಅಂದೇ ಈ ಪುಸ್ತಕವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದರು. ಅದೇನೋ ಸರಿ, ಆದ್ರೆ ಮಂಗಳೂರಿನಲ್ಲಿ ಗಲಾಟೆ ಏಕೆ ಶುರುವಾಯ್ತು? ಹಾಗೆ ಯೋಚಿಸಿ...ಮಂಗಳೂರಿನ ಚುರ್ಚುಗಳು ಮತ್ತೊಮ್ಮೆ ದುಸ್ಸಾಹಸ ಮಾಡುವ ಪ್ರಯತ್ನ. ಇದೆ ಪುಸ್ತಕವನ್ನು ತೆಲಗಿನಿಂದ ಕನ್ನಡಕ್ಕೆ ಅನುವಾದ ಮಾಡಿ ಜನರಿಗೆ ತಲುಪಿಸಲು ಮಾಡಿದ ಹೀನ ಕೃತ್ಯ. ಉತ್ತರ ಅವರಿಗೆ ತುಂಬ ಬೇಗ ಹಾಗು ಸಾಕಷ್ಟು ಚುರುಕಾಗಿಯೇ ಸಿಕ್ತು. ಇದೆಲ್ಲ ಆದ ನಂತರ ಮಾಧ್ಯಮಗಳಲ್ಲಿ ಬಂದ ಸುದ್ದಿ ಎಲ್ಲರಿಗೂ ಗೊತ್ತು.

ನಾನು ಹೀಗೆ ಬರೆಯೋದು ಬಜರಂಗ ದಳದವರಿಗೆ ಕೊಡುವ ಬೆಂಬಲ ಅಂತು ಅಲ್ಲ. ಹಾಗಂತ ಕೆಲವು ಚುರ್ಚುಗಳು ಮಾಡ್ತಿರೋದು ಕೂಡ ಸರಿ ಅಲ್ಲ. ನನ್ನ ಎಲ್ಲ ಆತ್ಮೀಯರಿಗೆ ತಿಳಿದ ಹಾಗೆ ನಾನು ಬಜರಂಗ ದಳದವರನ್ನು ಹಲವಾರು ಬಾರಿ ಕಂಡಿಸಿರುವುದು ಇದೆ. ಇವರುಗಳು ಚುರ್ಚುಗಳಿಗೆ ನುಗ್ಗಿ ಹಲ್ಲೆ ನಡೆಸಿದರು. ಹಾಗೆ ನೋಡಿದರೆ ಬಜರಂಗದಳ, ಪುಸ್ತಕ ವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ ಚುರ್ಚುಗಳು ಮತ್ತು ನೀಚಾತ್ಮ ಪರವಸ್ತು ಸೂರ್ಯನಾರಾಯಣ ಎಲ್ಲರೂ ಒಂದೇ ಜಾತಿಗೆ ಸೇರಿದ, ಸಮಾಜದಲ್ಲಿರುವ ಸೊಳ್ಳೆಗಳು.

ಇಲ್ಲಿ ಎಷ್ಟೊಂದು ತಪ್ಪುಗಳು ನೆಡೆದು ಹೋಗಿದೆ ನೋಡಿ.
೧. ಯಾರೋ ನೀಚಾತ್ಮ ತಲೆ ಕೆಟ್ಟಿ ಏನೋ ಬರೆದ.
೨. ಈ ಹುಚ್ಚನ ಮಾತು ಕೇಳಿ ಕೆಲವು ಚುರ್ಚುಗಳು ಚಪ್ಪಾಳೆ ಹಾಕಿದರು.
೩. ಎಲ್ಲ ಹುಚ್ಚರಿಗೂ ನಾವು ಸರಿ ಮಾಡುತ್ತೇವೆಂದು ಬಜರಂಗ ದಳದವರು ಹುಚ್ಚರಾದರು.
ಯಂತಹ ತಮಾಷೆ ನೋಡಿ. ಕೋತಿಗೆ ಹೆಂಡ ಕುಡಿಸಿದ ಹಾಗೆ. ಆದರೆ ಇವೆಲ್ಲ ನೀಚ ಕೃತ್ಯಗಳು ತಂದಿಟ್ಟ ಕಳಂಕ ವೆಂದರೆ ಹಿಂದೂ - ಕ್ರಿಶ್ಚನ್ ಗಲಾಟೆಎನ್ನುವ ವಿಷ ನಮ್ಮ ಸಮಾಜದಲ್ಲಿ ನೆಲೆ ಮಾಡಿತು . ನನ್ನ ಪ್ರಕಾರ ಮೇಲೆ ನಮೂದಿಸಿರುವ ಮೂರು ಹುಚ್ಚರ ಪೈಕಿಯಲ್ಲಿ ಮೊದಲೆರೆಡು ಹುಚ್ಚರು ತಣ್ಣಗಾದರೆ ಮೂರನೆಯ ಕೋತಿ ಕುಣಿಯುವುದನ್ನು ತಾನಾಗೆ ನಿಲ್ಲಿಸುವದು ಎಂದು ನಂಬಿರುತ್ತೇನೆ.

ಕರ್ನಾಟಕ ೨೦ -೨೦ ಲೀಗ್

ಅದು ಯಾಕೋ ಏನೋ ಗೊತ್ತಿಲ್ಲ. ರವಿ ಬೆಳಗರೆ ಅವರಿಗೆ ದೇವೇಗೌಡರ ನೆನಪು ಅಗಾಗ ಆಗ್ತಾ ಇರುತ್ತೆ. ಮೊನ್ನೆ ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಎಂದು ಮರೆಯದ ಹಾಡು ಕಾರ್ಯಕ್ರಮದಲ್ಲಿ ಶ್ರೀ ಬೆಳಗೆರೆ ಅವರಿಗೆ ಗೌಡರ ನೆನಪು ಅಗಾಗ ಆಗ್ತಾ ಇತ್ತು. ಬಹುಷಃ ಇವರಿಬ್ಬರು ಪದ್ಮನಾಭನಗರದ ನಿವಾಸಿಗಳು ಆಗಿರೋದ್ರಿಂದ. ಹೇಗೆ ಅಂದ್ರೆ ನಮ್ಮ ಪಕ್ಕದ ಮನೆಯಲ್ಲಿ ಯಾರಾದ್ರೂ ಒಳ್ಳೆ ಫಿಗರ್ ಇದ್ರೆ ನಮಗೆ ನೆನಪಾಗುತ್ತೆ ನೋಡಿ, ಹಾಗೆ. ಎಲ್ಲೊ ಒಂದು ಕಡೆ ಪ್ರೀತಿ. ಅದೇನೇ ಇರಲಿ. ಈ ರೀತಿ ಬೆಳಗರೆ ಅವರಿಗೆ ಗೌಡರ ನೆನಪಾದ ಒಂದು ಪ್ರಸಂಗವನ್ನ ನಾನು ಈಗಾಗಲೇ ನಿಮಗೆ ಹೇಳಿದ್ದೇನೆ. ಹಾಗೆ ಅದೇ ರೀತಿಯ ಇನ್ನೊಂದು ಪ್ರಸ್ನಗವನ್ನ ಇಲ್ಲಿ ಹೇಳ್ಬೇಕು. ಈ ಬಾರಿ ಬೆಳಗೆರೆ ಅವರು ಕ್ರಿಕೆಟ್ ಮತ್ತು ರಾಜಕೀಯವನ್ನ ಹೋಲಿಕೆ ಮಾಡ್ಲಿಕ್ಕೆ ಹೊರಟುಬಿಡ್ತಾರೆ. ಅದ್ಬುತವಾದ ವಾಕ್ಚತುರತೆ ಬೆಳಗರೆ ಅವರಿಗೆ ದೇವರು ಕೊಟ್ಟ ವರ ಬಿಡಿ. ಇಲ್ಲಿ ಇನ್ನು ಒಂದು ಮಾತಿದೆ. ಸರಿಯಾಗಿ ಎಣ್ಣೆ ಏರ್ಸವ್ರೆಲ್ಲ ಮಸ್ತಾಗೆ ಮಾತನಾಡ್ತಾರೆ ಅಂತ. ಆದ್ರೆ ನಮ್ಮ್ ಬೆಳಗರೆ ಅವರು ಯಾವಾಗ ಮಾತು ಕಲಿತರು ಅಂತ ಅವರನ್ನೇ ಕೇಳಿ ತಿಳ್ಕೊಬೇಕು. ಅದೇನೇ ಇದ್ರೂ ಬೆಳಗರೆ ಸಾಹೇಬರ ನಿರೂಪಣೆ ಅಂತು ಕೇಳುಗರಿಗೆ ರಸದೌತಣ. ಹೀಗೆ ನಿರೂಪಣೆ ಮಾಡ್ತಾ ಬೆಳಗರೆ ಸಾಹೇಬ್ರು ನಮ್ಮ ಕರ್ನಾಟಕದ ರಾಜಕೀಯದಲ್ಲಿ ನಡೆಯಲಿರುವ ಒಂದು ೨೦ - ೨೦ ಲೀಗ್ ಬಗ್ಗೆ ಹೇಳಿದ್ರು. ನಮ್ಮ ಎಲ್ರುಗೂ ಗೊತ್ತು. ಕುಮಾರಸ್ವಾಮಿ ಅವರು ಅಧಿಕಾರದ ಅವದಿಯಲ್ಲಿ ಎಷ್ಟು ಚುರುಕಾಗಿ ಸರ್ಕಾರಿ ಕೆಲಸಗಳು ಸಾಗ್ತಾ ಇದ್ವು. ಮಜಾ ಅಂದ್ರೆ ಅಷ್ಟೆ ಚುರುಕಾಗಿ ಕುಮಾರಸ್ವಾಮಿ ಅವ್ರು ಕೂಡ ಹೋಗ್ಬಿಟ್ರು. ಈಗ ನೋಡಿ ಯಡಿಯೂರಪ್ಪ ನವರು ಮಂದಗತಿಯಲ್ಲಿ ಸಾಗ್ತಾ ಇದ್ದಾರೆ. ಇದನ್ನ ಗಮನಿಸಿದ ಕುಮಾರಣ್ಣ ಹೀಗೆ ಒಂದು ದೂರವಾಣಿನ ಮಾಡಿದರಂತೆ ಯಡಿಯೂರು ಸಾಹೆಬ್ರುಗೆ. ನಿಮಗೊಂದು ಸವಾಲಿದೆ, ಬೇಟಿ ಮಾಡಿ ಹೇಳ್ತೀನಿ ಅಂದ್ರಂತೆ. ಇನ್ನು ಯಡ್ಡಿ ಸಾಹೆಬ್ರುನ ಕೇಳ್ಬೇಕಾ. ಬಂದೆ ಈಗಲೇ ಅಂತ ಬೇಟಿ ಮಾಡೇ ಬಿಟ್ರಂತೆ. ಅದೇನು ನಿಮ್ಮ ಸವಾಲು ಹೇಳಪ್ಪ ಅಂದ್ರಂತೆ. ಕುಮಾರಣ್ಣ ಆದಿಕೆ ಹಿಂದೆ ನೆಡೆದ ೨೦ -೨೦ ನಲ್ಲಿ ನಿಮಗೆ ಬ್ಯಾಟ್ಟಿಂಗ್ ಕೊಡ್ಲಿಲ್ಲ. ಈ ಸಾರಿ ಬ್ಯಾಟ್ಟಿಂಗ್ ಕೊಟ್ಟೆ ಕೊಡ್ತೀವಿ. ದಮ್ಮಿದ್ರೆ ಬನ್ರಿ ಒಂದು ೨೦ -೨೦ ಆಡೋಣ ಅಂದ್ರಂತೆ. ಯಡ್ಡಿ ಈಗ ಸಿ.ಎಂ. ಸವಾಲನ್ನ ಸ್ವೀಕಾರ ಮಾಡ್ದೆ ಇರ್ತಾರ. ಕುಮಾರಣ್ಣ ಈಗ ಸೋತು ಸುಣ್ಣ ಆಗಿದಾರೆ. ಯಡ್ಡಿ ಮನಸಲ್ಲೇ ಅಂದ್ಕೊಂಡ್ರಂತೆ. ಸೋತರು ಈ ನನ್ ಮಗುನ್ ಜಂಬಕ್ಕೆನು ಕಡಮೆ ಇಲ್ಲ ಅಂತ. ನಾನು ರೆಡಿ ನೀನು ನಿನ್ನ ತಯಾರಿ ಮಾಡ್ಕೊಂಡು ಬಾ ಕುಮಾರ, ಅಂದೇ ಬಿಟ್ರು. ನಂತರ ಯಡ್ಡಿ ಸಾಹೇಬ್ರು ಸ್ವುಲ್ಪ ಯೋಚನೆ ಮಾಡಿ ನಂದೊಂದು ಕಂಡೀಷನ್ ಇದೆ ಅಂದ್ರಂತೆ. ಕುಮಾರಣ್ಣ ಅದೇನಿದೆ ನಿಮ್ ಕಂಡೀಷನ್ ಹೇಳ್ಬಿಡಿ ಅಂತಾರೆ. ಆದಿಕೆ ಯಡ್ಡಿ ಸಾಹೇಬ್ರು ಬ್ಯಾಟ್ಟಿಂಗ್ ಮಾತ್ರ ನಾವೇ ಫರ್ಸ್ಟ್ ಮಾಡಬೇಕು ಅಂದ್ರಂತೆ. ಕುಮಾರಣ್ಣ ಯೋಚನೇನೆ ಮಾಡ್ದೆ ಓಕೆ ಅಂದ್ಬಿಟ್ರು. ಯಡ್ಡಿ ಫುಲ್ ಕುಶ್. ಹಾಗಾದ್ರೆ ನಾನ್ ರೆಡಿ ಅಂತ ಹೇಳ್ಬಿತ್ರು. ಆಮೇಲೆ ಕುಮಾರಣ್ಣ ನೀವು ಮಾತ್ರ ಕಂಡೀಷನ್ ಹಾಕಿದರೆ ಹೇಗೆ, ನನ್ದುನು ಒಂದು ಕಂಡೀಷನ್ ಇದೆ ಅಂದ್ರಂತೆ. ಯಡ್ಡಿ ಸಾಹೇಬರು ಹೇಗಿದ್ರು ಬ್ಯಾಟ್ಟಿಂಗ್ ನಂದೆ ಮೊದಲು ಅದೇನು ಹೇಳ್ರಿ ಅಂದ್ರಂತೆ. ಆದಿಕೆ ಕುಮಾರಣ್ಣ, ಅಂಪೈರ್ ಮಾತ್ರ ನಮಪ್ಪಾನೆ ಆಗಬೇಕು ಅಂದ್ರಂತೆ.
ಯಡ್ಡಿ ಫುಲ್ಲು ತಲೆ ಕೆಟ್ಟು ಈ ಅಪ್ಪ ಮಕ್ಳು ಸಹವಾಸ ಲೈಫ್ ನಲ್ಲಿ ಬೇಡ ಅಂತ ಅನ್ಕೊಂಡು, ಕುಮಾರಣ್ಣ ನಿಂಗು ನಿಮಪ್ಪನಿಗು ದೊಡ್ ನಮಸ್ಕಾರ ಅಂದ್ಬಿಟ್ಟು ಸೀದಾ ರೈಟ್ ಅಂದ್ರಂತೆ.

October 30, 2008

ಹೋಯ್ತು ಒಂಟಿ ಬಂತು ಜಂಟಿ

ಕರ್ನಾಟಕದಲ್ಲಿ ಸಾರಾಯಿ ನಿಷೇಧ ಮಾಡಿದಾಗ ತುಂಬ ಜನರು ಯೋಚಿಸುತಿದ್ದರು. ಸಾರಾಯಿ ಕುಡುಕರು ಈಗ ಏನು ಮಾಡುವರೆಂದು? ನಾನು ನಮ್ಮ ಹಳ್ಳಿನಲ್ಲಿ ಹೀಗೆ ಒಬ್ಬನ್ನ ಕೇಳ್ದೆ. ಸಾರಾಯಿ ಇನ್ನು ಸಿಗೋದಿಲ್ಲ. ಬಾಟಲ್ ಮಧ್ಯಕ್ಕೆ ದುಡ್ಡು ಜಾಸ್ತಿ. ಮುಂದೆ ಏನು ಮಾಡ್ತಿರ ನೀವುಗಳು ಅಂತ. ಪಟ್ ಅಂತ ಉತ್ತರ ಬಂತು.

ಆಗ ೧೦ ರೂಪಾಯಿ ಕೊಟ್ರೆ ಒಂದು ಪ್ಯಾಕೆಟ್ ಸಿಗೋದು.
ಎಅಗ ೨೦ ರುಪಾಯಿ ಕೊಟ್ರೆ ಒಂದು ಬಾಟಲ್ ಸಿಕುತ್ತೆ.
ಆಗ ಒಂಟಿ ಯಾಗಿ ಹೋಗ್ತಿದ್ದೆ.
ಈಗ ಜಂಟಿಯಾಗಿ ಹೋಗ್ತಿವಿ.

ಆಗ ನಂಗೆ ಅನ್ನುಸ್ತು . ಟೀಮ್ ವರ್ಕ್ ಏನೆಲ್ಲ ಮಾಡುತ್ತೆ ಅಂತ. ಪೀಪಲ್ ಅರ್ ಇನ್ನೋವೆಟಿವ್ ....

October 29, 2008

ಬಿಹಾರಿನ ರಾಹುಲ್ ರಾಜ್ ...

ಮೊನ್ನೆಯಷ್ಟೇ ಮುಂಬೈ ನಗರದಲ್ಲಿ ನೆಡೆದ ಎನ್ಕೌಂಟರ್ನಲ್ಲಿ ಬಿಹಾರಿನ ರಾಹುಲ್ ರಾಜ್ ಎಂಬ ಯುವಕ ಹತ್ಯೆಗೆ ಒಳಗಾದನು. ನಂತರ ನೆಡೆದ ಬೆಳವಣಿಗೆಗಳನ್ನು ನಾವು ಗಂಭಿರವಾಗಿ ಗಮನಿಸುವ ಅವಶ್ಯಕತೆ ಇದೆ ಎಂಬುದು ಇಲ್ಲಿ ನಾನು ಹೇಳಲು ಪ್ರಯತ್ನಿಸುತ್ತಿರುವ ವಿಚಾರ. ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು, ರಾಜಕೀಯ ಮುಖಂಡರ ಹೇಳಿಕೆಗಳು, ಅದಿಕಾರಿಗಳ ಸಮರ್ತನೆ, ಇವೆಲ್ಲವನ್ನೂ ನಾವು ಕೇಳಿದ್ದೇವೆ. ಬಿಹಾರಿನ ನಾಯಕರು ಶ್ರೀ ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರು ಬಿಹಾರಿನ ಕಂದನನ್ನು ಮುಂಬೈ ಪೊಲೀಸರು ಕೊಂದರು, ಅದು ಎನ್ಕೌಂಟರ್ ಅಲ್ಲ ಎಂದು ವಾದಿಸಿದರು. ಈ ಇಬ್ಬರು ನಾಯಕರು ಇದೆ ಮೊದಲ ಬಾರಿಗೆ ಒಗ್ಗಟ್ಟಾಗಿ ಬಿಟ್ಟರು. ಎಂತಹ ಆಶ್ಚರ್ಯ ನೋಡಿ. ಕೆಲವು ತಿಂಗಳ ಹಿಂದೆ ಬಿಹಾರಿನಲ್ಲಿ ನೆಡೆದ ಅತಿವೃಷ್ಟಿಯಲ್ಲಿ ಸಾವಿರಾರು ಜನಗಳು ಮನೆ, ಆಸ್ತಿ , ದನ ಕರು ಹಾಗು ತಮ್ಮೆ ಕುಟುಂಬದವರನ್ನು ಕಳೆದುಕೊಂಡರು. ಅಂತಹ ಸಂದರ್ಭದಲ್ಲಿ ಇದೆ ಇಬ್ಬರು ನಾಯಕರು ಒಬ್ಬರನೊಬ್ಬರು ದೂರಿದರು. ಆಗ ಇಬ್ಬರು ಒಂದಾಗಿ ಕೆಲಸ ಮಾಡಿದರೆ ಸಮಸ್ಯೆಯನ್ನು ಸಾಕಷ್ಟು ಚೆನ್ನಾಗಿ ನಿಬೈಸಬಹುದಿತ್ತು. ಸಾವಿರಾರು ಜನರು ಸತ್ತಾಗ ಇಲ್ಲದ ಒಗ್ಗಟ್ಟು ಈಗ ಒಬ್ಬನ ಎನ್ಕೌಂಟರ್ನಿಂದಾಗಿ ಬಂದಿದೆ ಎಂದರೆ ....ಏನೆಂದು ತಾನೆ ಹೇಳಲು ಸಾದ್ಯ. ...

ಮಾದ್ಯಮದವರು ಈ ಘಟನೆ ಯನ್ನು ಪ್ರಶ್ನಿಸಿದರು. ಬೇರೆ ದಾರಿಯೇ ಇರಲಿಲ್ಲವೇ ಅರಕ್ಷಕರಿಗೆ ? ಹೀಗೆ ಸಾಕಷ್ಟು ಪ್ರಶ್ನೆಗಳು ಕೇಳಿ ಬಂದವು. ನಾವು ನಮ್ಮ ಮಾದ್ಯಮದವರನ್ನು ಸಾಕಷ್ಟು ಬಾರಿ ತುಂಬ ಜವಾಬ್ದಾರಿ ಇಂದ ವರ್ತಿಸಿರುವುದನ್ನು ಗಮನಿಸಿರುವುದು ಸತ್ಯ. ಹಾಗಾಗಿ ಇವರು ಕೇಳುವ ಪ್ರಶ್ನೆಯಲ್ಲಿ ಸತ್ವ ಇರಬಹುದು. ಅದೇನೇ ಇರಲಿ ಅದಿಕಾರಿಗಳು ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ.

ಇಲ್ಲಿ ಗಮನಿಸಬೇಕಾದ ಒಂದು ಅಂಶ ಎಂದರೆ ಒಬ್ಬ ಮಾಮೂಲಿ ಪ್ರಜೆಗೆ ಪಿಸ್ತೂಲು ಎಲ್ಲಿಂದ ಬಂತು. ಹಾಗೆ ಬಿಹಾರಿನಲ್ಲಿ ಪಿಸ್ತೂಲು ಹಿಡಿದು ಜನರನ್ನು ಹೆದರಿಸುವ ವರ್ತನೆ , ಅವರಿಗೆ ತಪ್ಪು ಅಂತ ಏಕೆ ಅನಿಸಲಿಲ್ಲ. ಹೀಗೆ ಇನ್ನು ಎಷ್ಟು ಜನರು ಬಿಹಾರಿನಲ್ಲಿ ಪಿಸ್ತೂಲು ಹಿಡಿದು ಈ ಮೂರ್ಖ ಕೃತ್ಯ ಎಸಗುವ ಯೋಚನೆ ನಡೆಸಿದ್ದಾರೆ? ನಾನು ಇಲ್ಲಿ ಮುಂಬೈಕರ್ ಮತ್ತು ಬಿಹಾರಿಗಳ ಮದ್ಯೆ ಇರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಅದು ನಮಗೆ ಅರ್ಥವಾಗದ ವಿಚಾರ. ಅರ್ಥವಾದರೂ ಆದಷ್ಟು ಬೇಗ ಮರೆಯಬೇಕು ಎನ್ನುವ ಬಯಕೆ.

ನಮ್ಮ ಭಯ ವೆಂದರೆ ಮುಗ್ದ ಜನರು ಇಂತಹ ಮೂರ್ಖರಿಗೆ ಬಲಿಯಾಗುವ ಸಾದ್ಯತೆ ಇದ್ದೆ ಇದೆ. ಹಾಗಾಗಿ ಈ ಪ್ರಶ್ನೆ ಕೇಳಲೇ ಬೇಕು. ಬಿಹಾರಿನವನು ಒಬ್ಬ ಸತ್ತ ಎಂಬುದು ಸತ್ಯ. ಆದರೆ ಅವನು ಮಡಿದ ಕೃತ್ಯ ಹಿಡಿ ದೇಶಕ್ಕೆ ನಾಚಿಕೆ ತರುವಂತದ್ದು. ಇವನು ಮಾಡಿದ ಕೆಲಸ ಸರಿ ಎಂದರೆ ನಾಳೆ ಒಬ್ಬ ಮುಂಬೈ ನಿಂದ ಒಂದು ಪಿಸ್ತೂಲು ಹಿಡಿದು ಪಾಟ್ನಾಗೆ ಹೋಗಿ ಲಾಲು ನನ್ನು ಕೊಲೆ ಮಾಡಲು ಬಂದೆ ಎಂದರೆ ಆಶ್ಚರ್ಯ ಏನಿಲ್ಲ ..ಅವನನ್ನು ಮುಂಬೈ ಪ್ರೇಮಿ ಇವನನ್ನು ಬಿಹಾರಿನ ಪ್ರೇಮಿ ಎಂದು ಈ ನಾಯಕರು ನಾಮಕರಣ ಮಾಡಿದರೆ ತಪ್ಪು ಆಗಲಾರದು.

ಸ್ನೇಹಿತರೇ, ಈಗಾಗಲೇ ಈ ಘಟನೆಯ ಬಗ್ಗೆ ಒಂದು ವಿಚಾರಣೆ ಸಾಗುತ್ತಿದೆ. ಎಲ್ಲ ಪ್ರಶ್ನೆ ಗಳಿಗೆ ಉತ್ತರ ಸಿಗಬಹುದು. ನಮ್ಮ ನಾಯಕರಲ್ಲಿ ನಾನು ಕೇಳುತ್ತಿರುವ ಪ್ರಶ್ನೆ ಇಷ್ಟೇ. ಒಬ್ಬ ಸಾಮಾನ್ಯ ಪ್ರಜೆಗೆ ಒಂದು ರಾಜ್ಯದ ರಾಜದಾನಿಯಲ್ಲಿ ಪಿಸ್ತೂಲು ಸಿಗುತ್ತೆ ಎಂದರೆ, ಇದು ಭಯ ಹುಟ್ಟಿಸುವ ಸುದ್ದಿ. ಇದರ ಬಗ್ಗೆ ಸಂಬಂದ ಪಟ್ಟ ಅದಿಕಾರಿಗಳು, ರಾಜಕೀಯ ನಾಯಕರು ಯೋಚಿಸಿ ಕಾರ್ಯೋನ್ಮುಖರಾದರೆ ಸಾಮನ್ಯ ಜನರ ಬಾಳು ನೆಮ್ಮದಿ ಯಾಗಿರಿವುದು...

ಇಬ್ಬರು ಕನ್ನಡಿಗರು ಸೇರಿದರೆ....

ಸ್ನೇಹಿತರೇ,
ಮೊನ್ನೆ ೨೮ನೇ ತಾರೀಖು ಈಟಿವಿ ಕನ್ನಡ ವಾಹಿನಿಯಲ್ಲಿ ನಮೆಲ್ಲರ ಆತ್ಮಿಯ ನಟ ದಿವಂಗತ ಶಂಕರ್ ನಾಗ್ ಅವರ ಜ್ಞಾಪಕಾರ್ಥವಾಗಿ, ರವಿ ಬೆಳಗರೆ ಅವರ ನಿರೂಪಣೆಯೊಂದಿಗೆ ಶಂಕರ್ ನಾಗ್ ಅವರು ನಟಿಸಿದ ಚಿತ್ರಗಳ ಹಾಡನ್ನು ಹಾಡುವ ಕಾರ್ಯಕ್ರಮ ಮೂಡಿ ಬಂತು. ಆ ಕಾರ್ಯಕ್ರಮದ ಹೆಸರೇ "ಎಂದು ಮರೆಯದ ಹಾಡು". ಶಂಕರ್ ನಾಗ್ ಅವರು ಅಂದ್ರೆ ನಮೆಲ್ಲರ ಜೀವನದಲ್ಲಿ ಮಿಂಚಿನ ವೇಗದಲ್ಲಿ ಬಂದು ಹೋದ ಅಪ್ರತಿಮ ಕನ್ನಡದ ಕಲಾವಿದ. ಹಾಗಾಗಿ ಕಾರ್ಯಕ್ರಮ ನೋಡಲೇಬೇಕು ಎಂದು ತಿರ್ಮಾನಿಸಿ ನೋಡಲು ಕುಳಿತೆ. ಜೊತೆಗೆ ರವಿ ಬೆಳಗೆರೆ ಅವರ ನಿರೂಪಣೆ ಅಂದ್ರೆ ಅದರ ಮಜಾನೆ ಬೇರೆ ಬಿಡಿ. ಹೀಗೆ ರವಿ ಬೆಳೆಗರೇ ಅವರು ನಿರೂಪಣೆ ಮಾಡ್ತಾ ಒಂದು ಮಾತು ಹೇಳಿದ್ರು ಕಣ್ರೀ.. ಅದನ್ನ ಕೇಳಿದ ಮೇಲೆ ಅದ್ರಲ್ಲಿ ಎಷ್ಟು ಸತ್ಯ ಇದೆ ಅಂತ ನಾನು ಒಮ್ಮೆ ಯೋಚನೆ ಮಾಡಿದೆ. ಹಾಗಂತ ಅವರೇನು ಅಷ್ಟು ಗಂಬೀರವದ ವಿಚಾರವನ್ನ ಹೇಳಲಿಲ್ಲ. ಅದನ್ನು ಕೇಳ್ದಾಗ ನಂಗು ತುಂಬ ನಗು ಬಂತು. ಅವರು ಹೇಳಿದ್ದು ಇಷ್ಟೇ.

ಇಬ್ಬರು ಬೆಂಗಾಳಿಗಳು ಸೇರಿದ್ರೆ ಒಂದು ಕವಿಗೋಷ್ಠಿ ನಡೆಯುತ್ತೆ.
ಇಬ್ಬರು ಮರಾಠಿಗಳು ಸೇರಿದ್ರೆ ಒಂದು ನಾಟಕ ನಡೆಯುತ್ತೆ.
ಇಬ್ಬರು ತೆಲುಗುನವರು ಸೇರಿದ್ರೆ ಒಂದು ಲೇಔಟ್ ಶುರುವಾಗುತ್ತೆ.
ಇಬ್ಬರು ಕನ್ನಡಿಗರು ಸೇರಿದ್ರೆ ೩ ರಾಜಕೀಯ ಪಕ್ಷಗಳು ಹುಟ್ಟಿ ಬಿಡ್ತಾವೆ.....

ಇದನ್ನ ಮೊದಲು ಕೇಳಿದಾಗ ನಂಗೆ ತುಂಬ ನಗು ಬಂತು. ಆದ್ರೆ ರವಿ ಬೆಳಗೆರೆ ಅವರು ತಮಾಷೆ ಮಾಡೋಕೆ ಕನ್ನಡ ಅಥವಾ ಕನ್ನಡಿಗರ ಬಗ್ಗೆ ಹೀಗೆ ಮಾತಾಡೊಲ್ಲ. ಏಕೆ ಹೀಗೆ ಹೇಳಿದ್ರು ಅಂತ ಹಾಗೆ ಯೋಚನೆ ಮಾಡ್ತಾ ಇದ್ದೆ. ಉತ್ತರ ಸಿಕ್ತು ಕಣ್ರೀ..

ದೇವೇಗೌಡರು ಮತ್ತು ರಾಮಕೃಷ್ಣ ಹೆಗ್ಡೆ ಇಬ್ರು ಅಪ್ಪಟ ಕನ್ನಡಿಗರೇ. ಇಬ್ರು ಸೇರಿ ಜನತಾ ಪಕ್ಷ (ನೇಗಿಲು ಹೊತ್ತ ರೈತ ) ಅದಿಕಾರಕ್ಕೆ ಬಂದಿದ್ದು ಎಲ್ರಿಗೂ ಗೊತ್ತು. ಆದ್ರೆ ನಂತರ ಏನಾಯ್ತು ಒಮ್ಮೆ ನೆನಪು ಮಾಡಿಕೊಂಡೆ. ಜನತಾ ಪಕ್ಷ ದಿಂದ ಜನತಾ ದಳ ಶುರುವಾಯ್ತು. ಇದರ ಜೊತೆಗೆ ಶುರುವಾದ ಮತ್ ಒಂದು ಪಕ್ಷ ಲೋಕ ಶಕ್ತಿ. ಅದ್ವಲ್ಲ ಅಲ್ಲಿಗೆ ಮೌರು ಪಕ್ಷ ...ಇಬ್ಬರು ಕನ್ನಡಿಗರಿಂದ.
ಹೀಗೆ ಇನ್ನು ಒಂದು ಉದಾಹರಣೆ ಇದೆ. ಮತ್ತೆ ನಮ್ಮ ದೇವೇಗೌಡರು , ಇವರ ಜೊತೆಗೆ ಸಿದ್ದರಾಮಯ್ಯ. ಮತ್ತೆ ಇಬ್ಬರು ಕನ್ನಡಿಗರು ಸೇರಿ ಮೂರು ರಾಜಕೀಯ ಪಕ್ಷಗಳು ಶೃಷ್ಟಿ ಆಗ್ತವೆ.

ಈ ಎರಡು ಸಂದರ್ಭದಲ್ಲಿ ನಮ್ಮ ದೇವೇಗೌಡರ ಶ್ರಮ ತುಂಬ ಇದೆ ಬಿಡಿ...ಸದ್ಯಕ್ಕೆ ಗೌಡ್ರು ಮತ್ತೊಬ್ಬ ಕನ್ನಡಿಗನನ್ನು ಹುಡುಕ್ತ ಇದಾರೆನೋ ಅನ್ನ ಸಂಶಯ ನಂಗೆ ಈಗ ಬಂದಿದೆ...ಕಾದು ನೋಡೋಣ....

ರವಿ ಬೆಳಗರೆ ಅವರು ಮಾತ್ನಲ್ಲಿ ಹೇಳಿದರೇನು ...ಗೌಡ್ರು ಒಂದಲ್ಲ ಅಂತ ಎರಡು ಬಾರಿ ಮಾಡಿ ತೋರ್ಸಿದಾರೆ...

October 27, 2008

ನಮ್ಮ ದೇಶದ ಕತೆ ಇಷ್ಟೇ ಕಣಮ್ಮೋ

ದೇಶದ ಹಲವಾರು ಪ್ರದೇಶಗಳಲ್ಲಿ ಬಾಂಬ್ಗಳು ಸ್ಪೋಟಗೊಂಡ ಸುದ್ದಿ ಎಲ್ಲಡೆ ಮಿಂಚಿನ ವೇಗದಲ್ಲಿ ಹರಡಿತ್ತು. ನಾನು ಎಲ್ಲರ ಹಾಗೆ ದೂರದರ್ಶನ, ರೇಡಿಯೋ ಹೀಗೆ ನಾಲ್ಕಾರು ಮಾದ್ಯಮಗಳ ಮೊಲಕ ಸುದ್ದಿಯ ವಿವರಗಳನ್ನು ಕೇಳುವ ಪ್ರಯತ್ನದಲಿದ್ದೆ . ಈ ಎಲ್ಲ ಪ್ರಯತ್ನಗಳ ಜೊತೆಗೆ ಸ್ನೇಹಿತರೊಂದಿಗೆ ಚರ್ಚೆ ಸಾಕಷ್ಟು ಗಂಬೀರವಗಿಯೇ ಸಾಗಿತ್ತು. ಕೆಲವೊಮ್ಮೆ ಶನಿವಾರ ಬಂತೆಂದರೆ ಯಾವ ಊರಿನಲ್ಲಿ ಬಾಂಬ್ ಸ್ಪೋಟಗೊಂಡಿದೆ, ಅಥವಾ ಎಲ್ಲಿ ಸ್ಪೋಟ ಆಗಬಹುದು ಎಂದು ಊಹಿಸುವ ಚರ್ಚೆಗಳು ನೆದೆಯುತಿದ್ದವು. ಅಷ್ಟೇ ಮುಖ್ಯವಾಗಿ ಕೇಳಿಬರುತಿದ್ದ ಮತ್ತೊಂದು ಪ್ರಶ್ನೆ ಎಂದರೆ ಈ ಎಲ್ಲ ಸ್ಪೋಟಗಳ ಹಿಂದಿರುವ ದೇಶದ್ರೋಹಿಗಳು ಯಾರು? ಹೀಗೆ ಹಲವಾರು ಚರ್ಚೆಗಳು, ಮನಸಿನ ಒಳಗಡೆ ಅವಿತಿರುವ ಭಯ, ದೂರದರ್ಶನದಲ್ಲಿ ನೋಡಿರುವ ಆ ದೃಶ್ಯಗಳು ಎಲ್ಲವೂ ಸೇರಿ ಮನಸಿನಲ್ಲಿ ಸಾಕಷ್ಟು ಗೊಂದಲಗಳನ್ನು ಹುಟ್ಟಿಸಿತು. ಇದೆಲ್ಲದರ ಮದ್ಯೆ ಒರಿಸ್ಸಾ ಹಾಗು ಕರ್ನಾಟಕದಲ್ಲಿ ಕ್ರ್ಯಸ್ತರ ಮೇಲೆ ಹಲ್ಲೆ ನಡೆಸಿದ ಸುದ್ದಿಯು ಸಾಕಷ್ಟು ಪ್ರಚಾರವಾಗಿತ್ತು. ಇಂತಹ ಸಂದರ್ಬದಲ್ಲಿ "TIMES NOW" ಸುದ್ದಿ ವಾಹಿನಿಯಲ್ಲಿ ಒಂದು ಕಾರ್ಯಕ್ರಮ ಪ್ರಸಾರಗೊಂಡಿತು. ಕಾರ್ಯಕ್ರಮದ ಉದ್ದೇಶ ತುಂಬಾ ಆಕರ್ಷಕವಾಗಿತ್ತು. ಕಾರಣವೆಂದರೆ ನಾವು ನಡೆಸುತಿದ್ದ ಚರ್ಚೆ ಮತ್ತು ಈ ಕಾರ್ಯಕ್ರಮದ ಉದ್ದೇಶ ಒಂದೇ. ಈಗ ನಮ್ಮ ಚರ್ಚೆ ಮತ್ತು ಈ ಕಾರ್ಯಕ್ರಮದ ಉದ್ದೇಶ ಹೇಳ್ತಿನಿ. ಈ ವಿಚಾರ ತುಂಬಾ ಸೂಕ್ಷ್ಮ ವಾದದ್ದು.

ಒಂದೆಡೆ ಬಾಂಬ್ಗಳ ಹಾವಳಿ, ಒಂದೆಡೆ ಕ್ರೈಸ್ತರ ಮೇಲೆ ದಾಳಿ, ಇಂತ ಸಂದರ್ಬಗಲ್ಲಿ ನಮ್ಮುಗಳ ಮನಸಲ್ಲಿ ಸಾವಿರಾರು ಪ್ರಶ್ನೆಗೆಳು ಉತ್ತರಕ್ಕಾಗಿ ಹುಡುಕಾಟ ಮಾಡುವಾಗ, ಮೆದುಳು ಮುಂಕಾಗಿ ಸೊರಗಿ ಬಿಡುತಿತ್ತು.ಈ ರೀತಿಯ ಪ್ರಶ್ನೆಗಳನ್ನು ನಾನು ಇಲ್ಲಿ ಉಲ್ಲೆಕಿಸಲೇಬೇಕು. ಎಲ್ಲ ಬಾಂಬ್ ಸ್ಪೋಟಗಳ ಹಿಂದೆ ಮುಸಲ್ಮಾನರ ಹೆಸರು ಮತ್ತೆ ಮತ್ತೆ ಏಕೆ ಕೇಳಿ ಬರುತಿದೆ? ಎಷ್ಟು ಜನ ಮುಸಲ್ಮಾನರು ಈ ದೇಶ ದ್ರೋಹಿಯ ಕೆಲಸದಲ್ಲಿ ತೊಡಗಿರುವರು? ಇವರೆಲ್ಲ ನಮ್ಮ ದೇಶದ ಪ್ರಜೆಗಳೇ? ಈ ರೀತಿಯ ಪ್ರಶ್ನೆ ಎಷ್ಟು ಸರಿ ಎಷ್ಟು ತಪ್ಪು ? ಇನ್ನು ಕ್ರೈಸ್ತರ ಮೇಲೆ ನೆಡೆದ ಹೀನಾಯ ಕೃತ್ಯಗಳಿಗೆ ಏನು ಹೇಳುವುದು ಗೊತ್ತಿಲ್ಲ. ಒಟ್ಟಾರೆಯಾಗಿ ಒಂದು ಅಂಶವನ್ನು ನಾನು ಸ್ಪಷ್ಟವಾಗಿ ಹೇಳಬಲ್ಲೆ. ನಮ್ಮ ಒಳಗಡೆ ಸಾಕಷ್ಟು ಕಿಡಿಗೇಡಿಗಳು ಬೆಳೆಯುತಿದ್ದಾರೆ. ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಈ ಕಾರ್ಯಕ್ರಮದಲ್ಲಿ ಕೇಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹನೀಯರು

೧ .ಶ್ರೀ ಜಾವಿದ್ ಅಕ್ತರ್ (ಖ್ಯಾತ ಗೀತ ರಚನಕಾರರು )

೨. ಶ್ರೀ ಪೆರರಿಯ (ನಿವೃತ್ತ ಪೋಲಿಸ್ ಆಯುಕ್ತರು , ಹೊಸ ದೆಹಲಿ )

೩. ಶ್ರೀ ರವಿಶಂಕರ್ ಪ್ರಸಾದ್ (ಹಿರಿಯ ಮುಕಂದರು, ಭಾರತೀಯ ಜನತಾ ಪಕ್ಷ )

ನನಗೆ ಈ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎನ್ನುವ ಹಂಬಲ. ಕಾರಣವೆಂದರೆ ಇಂದಿನ ನಮ್ಮ ಸಮಜಾದ ಆಗು ಹೋಗುಗಳು. ನಮ್ ಅಂತಹ ಸಾಮಾನ್ಯ ಜನರ ಪ್ರಶ್ನೆಗಳಿಗೆ ಈ ನಾಯಕರು ಉತ್ತರ ಕೊಡ ಬಲ್ಲರು ಎನ್ನುವ ಹಂಬಲ ಅಷ್ಟೇ. ನಾನು ಇಲ್ಲೇ ಕಾರ್ಯಕ್ರಮದಿಂದ ನನಗೆ ಏನು ತಿಳೀತು ಎಂದು ಹೇಳುವ ಪ್ರಯತ್ನ ಅಷ್ಟೇ ಮಾಡ್ತಿನಿ.

ರವಿ ಶಂಕರ್ ಪ್ರಸಾದ್ ಅವರಿಗೆ ವಿಶ್ವ ಹಿಂದು ಪರಿಷತ್ ನಡೆಸಿದ ದಾಳಿ ಅಷ್ಟೇನೂ ನೋವಲ್ಲ. ಆದರೆ ದಿಲ್ಲಿಯಲ್ಲಿ ನೆಡೆದ ಎನ್ಕೌಂಟರ್ ನಲ್ಲಿ ಮಡಿದ ಸಾಹಸಿ ಅರಕ್ಷಕನ ಸಾವು ತುಂಬಾ ನೋವುಂಟು ಮಾಡಿತ್ತು.

ಪೆರೆರಿಯ ಅವರಿಗೆ ದೇಶ ದೆಲ್ಲದೆ ನೆಡೆದ ಬಾಂಬ್ಗಳ ಹಾವಳಿ ಗಿಂತ ಹೆಚ್ಚಾಗಿ ಕ್ರೈಸ್ತರ ಮೇಲೆ ನೆಡೆದ ದಾಳಿ ತುಂಬಾ ಗೊಂದಲವನ್ನು ಅವರ ಮನಸಲ್ಲಿ ಮಾಡಿತ್ತು.

ಇನ್ನು ನಮ್ಮ ಮಹಾನ್ ಗೀತ ರಚನಕಾರರಿಗೆ ಕ್ರೈಸ್ತರ ಮೇಲೆ ನೆಡೆದ ದಾಳಿನು ಅಲ್ಲ, ಬಾಂಬ್ಗಳ ಹಾವಳಿನು ಅಲ್ಲ, ದಿಲ್ಲಿಯಲ್ಲಿ ಬಂದಿಸಿದ ಜಾಮಿಯಾ ಕಾಲೇಜಿನ ವಿದ್ಯಾರ್ಥಿಗಳು. ಇವರ ಬಂದನ ಶ್ರೀ ಅಕ್ತರ್ ಅವರಿಗೆ ಮನದಾಳದಲ್ಲಿ ನೋವುಂಟು ಮಾಡಿದೆ.

ಇವರೆಲ್ಲರೂ ಹೇಳಿದ್ದು ಇಷ್ಟೇ. "I strongly condemn the attack on christians" ಅಂತ ಒಬ್ರು ಹೇಳಿದ್ರೆ, ಇನ್ ಒಬ್ರು "VHP and ABVP should be banned" ಅಂತ ಮೊತ್ತ್ಹೊಬ್ರು ಆಮೇಲೆ ಇನ್ನೊಬ್ರು "minorities are targetted for no reason" ಅಂದ್ಬಿಟ್ರು. ನಾನು ಅವರುಗಳು ಹೇಳಿದನ್ನ ಹಾಗೆ ಇಲ್ಲಿ ಬರಿತ ಎಲ್ಲ. ಅವರುಗಳ ಮಾತಿನ ಸಾರಾಂಶವನ್ನಷ್ಟೇ ಇಲ್ಲಿ ಹೇಳುವ ಪ್ರಯತ್ನ ಮಾಡ್ತಿದೀನಿ.

ಕಾರ್ಯಕ್ರಮ ಮುಗಿತು.. ನಮ್ಮ ನಾಯಕರ ಯೋಚನಾ ದಿಕ್ಕುಗಳು ಏನು ಎಮ್ಬುದು ಮೊತ್ಹೊಮ್ಮೆ ಅರಿವು ಆಯಿತು. ಇಲ್ಲಿ ವಿಶೇಷ ಏನಂದ್ರೆ ನನ್ನ ಸ್ನೇಹಿತ ಮೊದಲೇ ಹೇಳಿದ್ದ. ಇವರೆಲ್ಲ ಕೆಲಸಕ್ಕೆ ಬಾರದವರು ಸಮಯ ವ್ಯರ್ಥ ಮಾಡಬೇಡ ಅಂತ. ಅದು ಸತ್ಯ ಅಂತ ನಂಗು ಅರಿವಾಯ್ತು. ಹಗಲಲ್ಲಿ ಕಂಡ ಬಾವಿಗೆ ಇರುಳಲ್ಲಿ ಬಿದ್ದ ಅನುಭವ.

ನಾನು ಈ ಮೊದಲು ಸಾಕಷ್ಟು ಬಾರಿ ಹೇಳ್ತಾ ಇದ್ದೆ. "ನಮಲ್ಲಿ ನಾಯಕರ ಕೊರತೆ ಇಲ್ಲ . ಒಂದು ವ್ಯವಸ್ಥೆಯ ಕೊರತೆ ಎದೆ. ನಮಗೆ ಹೊಸ ನಾಯಕರು ಬೇಡ. ಹೊಸ ವ್ಯವಸ್ಥೆಗಳು ಬೇಕು " ಅಂತ. ಅದು ತಪ್ಪು ಅಂತ ಅರಿವು ಆಯಿತು.

ಆಮೇಲೆ ನಂಗೆ ಅರಿವು ಏನು ಆಯಿತು ಅಂತ ನಿಮಗೆ ಹೇಳಲೇಬೇಕು. ಪೆರರಿಯ ಅವರಿಗೆ ಕ್ರೈಸ್ತರ ಮೇಲೆ ನೆಡೆದ ದಾಳಿ ತುಂಬಾ ನೋವುಂಟು ಮಾಡಿದೆ ಏಕೆ ಅಂದ್ರೆ ಅವರು ಕ್ರೈಸ್ತರು. ಅಕ್ತರ್ ಅವರಿಗೆ ಜಾಮಿಯಾ ವಿದ್ಯಾರ್ಥಿಗಳ ಬಂದನ ಹಾಗು ರವಿಶಂಕರ್ ಅವರಿಗೆ ದಿಲ್ಲಿ ಎನ್ಕೌಂಟರ್. ನಾನು ಇಲ್ಲಿ ಕಾರಣ ಹೇಳುವ ಅವಶ್ಯಕತೆ ಇಲ್ಲ. ಹಾಗಾಗಿ ಸಾರಾಂಶ ಏನ್ ಅಂದ್ರೆ ದೇಶ ಕಿಂತ ಜಾತಿ ಮುಖ್ಯ ಅಂತ ನಮ್ಮ ನಾಯಕರುಗಳು ಕೂಗಿ ಕೂಗಿ ಹೇಳ್ಬಿಟ್ರು.

ಸ್ನೇಹಿತರೆ ನೀವು ಕೂಡ ನಿಮ್ಮ ಅಭಿಪ್ರಾಯಗಳನ್ನ ಹೇಳಿ. ಈ ಮೌಲಕ ನನಗೆ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದೆಂದು ಮತೊಮ್ಮೆ ಹಂಬಲಿಸುತ್ತ .......