October 30, 2008

ಹೋಯ್ತು ಒಂಟಿ ಬಂತು ಜಂಟಿ

ಕರ್ನಾಟಕದಲ್ಲಿ ಸಾರಾಯಿ ನಿಷೇಧ ಮಾಡಿದಾಗ ತುಂಬ ಜನರು ಯೋಚಿಸುತಿದ್ದರು. ಸಾರಾಯಿ ಕುಡುಕರು ಈಗ ಏನು ಮಾಡುವರೆಂದು? ನಾನು ನಮ್ಮ ಹಳ್ಳಿನಲ್ಲಿ ಹೀಗೆ ಒಬ್ಬನ್ನ ಕೇಳ್ದೆ. ಸಾರಾಯಿ ಇನ್ನು ಸಿಗೋದಿಲ್ಲ. ಬಾಟಲ್ ಮಧ್ಯಕ್ಕೆ ದುಡ್ಡು ಜಾಸ್ತಿ. ಮುಂದೆ ಏನು ಮಾಡ್ತಿರ ನೀವುಗಳು ಅಂತ. ಪಟ್ ಅಂತ ಉತ್ತರ ಬಂತು.

ಆಗ ೧೦ ರೂಪಾಯಿ ಕೊಟ್ರೆ ಒಂದು ಪ್ಯಾಕೆಟ್ ಸಿಗೋದು.
ಎಅಗ ೨೦ ರುಪಾಯಿ ಕೊಟ್ರೆ ಒಂದು ಬಾಟಲ್ ಸಿಕುತ್ತೆ.
ಆಗ ಒಂಟಿ ಯಾಗಿ ಹೋಗ್ತಿದ್ದೆ.
ಈಗ ಜಂಟಿಯಾಗಿ ಹೋಗ್ತಿವಿ.

ಆಗ ನಂಗೆ ಅನ್ನುಸ್ತು . ಟೀಮ್ ವರ್ಕ್ ಏನೆಲ್ಲ ಮಾಡುತ್ತೆ ಅಂತ. ಪೀಪಲ್ ಅರ್ ಇನ್ನೋವೆಟಿವ್ ....