October 31, 2008

ಕುಡುಕನ ಮಾಸ್ಟರ್ ಸ್ಟ್ರೋಕ್...

ಸಾಮನ್ಯವಾಗಿ ಜನಗಳು ಎಣ್ಣೆ ಹಾಕಿ ಫುಲ್ಲು ಟೈಟಾದ ಮೇಲೆ ಏನ್ ಮಾಡ್ತಾರೆ ಅಂದ್ರೆ . ಯಾವ ಪೋಸಿಶನ್ ನಲ್ಲಿ ಎಲ್ಲಿ ಕೂತ್ಕೊಂಡ್ ಕುಡಿತ ಇರ್ತಾರೆ ಅಲ್ಲೇ ಪ್ಲಾಟ್ ಆಗ್ತಾರೆ. ಇನೊಂದ್ ಸ್ವಲ್ಪ ಜನ ನಾನೇ ರಾಜ ಅನ್ಕೊಂಡು ಯಾರು ಕೇಳಲಿ ಬಿಡಲಿ ಮಾತಿನ ಸಾಗರವನ್ನೇ ಹರಿದು ಬಿಡುತ್ತಾರೆ. ಮತ್ತೆ ಸ್ವಲ್ಪ ಜನ ಫುಲ್ಲು ಬಾವುಕರಾಗಿ ಅತ್ತಿಬಿಡ್ತಾರೆ. ಮತ್ತೊಂದ್ ಅಷ್ಟು ಜನ ಕರಾಟೆ ಆಡಿ ಪೋಲಿಸ್ ಸ್ಟೇಷನ್ಗೆ ಹೋದ್ರೆ, ಕೆಲವರು ಆಸ್ಪತ್ರೆಗೆ ಹೋಗ್ತಾರೆ. ಇದೆಲ್ಲ ಬಿಟ್ಟು ಕೆಲವರು ಇದ್ದರೆ ಅವ್ರು ಟೈಟೆ ಆಗೋಲ್ಲ. ಇದೆಲ್ಲ ಬಿಟ್ಟು ಅವ್ನು ಬೇರೆ ಏನಾದ್ರು ಮಾಡ್ತಾನೆ ಅಂದ್ರೆ ಅವನು ಮಾಸ್ಟರ್ ಪೀಸ್ ಆಗ್ತಾನೆ. ಈ ತರಹದ ಒಂದು ಮಾಸ್ಟರ್ ಪೀಸ್ ಬಗ್ಗೆ ನಾನು ಸಾಕಷ್ಟು ಹುಡುಕ್ತ ಇದ್ದೆ. ಹಿಂದೆ ಎಂದಾದರೂ ನೋಡಿರ ಬಹುದೇ ಎಂದು ನನ್ನ ಹಳೆ ನೆನಪುಗಳನ್ನ ಮೆಲುಕು ಮಾಡಿದೆ.

ಒಂದು ಘಟನೆ ನೆನಪಾಯಿತು. ರಾತ್ರಿ ಹುಡುಗ ಒಂದು ಫುಲ್ಲು ಬಾಟಲ್ ವಿಸ್ಕಿ ಯನ್ನು ಒಬ್ಬನೇ ಕೂತು, ಎದುರುಗಡೆ ಕೂತಿರುವನಿಗೆ ಮೊಳೆ ಹೊಡಿತ, ಬಾಟಲ್ ಅನ್ನು ಕಾಲಿ ಮಾಡಿ ಮಲಗಿಬಿಟ್ಟ. ಎದುರುಗಡೆ ಕೂತಿದ್ನಲ್ಲ ಅವನ ಪರಿಸ್ತಿತಿ ಏನಗಿರಬಹುದು ಒಮ್ಮೆ ನೀವು ಯೋಚನೆ ಮಾಡಿ. ಏಕೆ ಅಂದ್ರೆ ಅಂದು ಮಲಗಿದಾಗ ಸುಮಾರು ಬೆಳಗಿನ ಜಾವ ೪ ಘಂಟೆ. ಆ ಲೆವೆಲ್ನಲ್ಲಿ ಕುಡಿತಾನೆಅಂದ್ರೆ ಬೆಳಿಗ್ಗೆ ರಜೆ ಇದೆ ಅಂತಾನೆ ಅರ್ತ ಬಿಡಿ. ಅಂತು ಇಂತೂ ೪ ಘಂಟೆಗೆ ಮಲಗಿಬಿಟ್ರು. ಅರೆ ಇದೇನು ಮುಖ್ಯವಾಗಿ ಹೇಳಬೇಕಗಿರೋದನ್ನೇ ಹೇಳಲಿಲ್ಲ ಅಂತ ಯೋಚನೆ ಮಾಡ್ತಾ ಇದಿರಾ. ಸತ್ಯ ಏನು ಅಂದ್ರೆ ರಾತ್ರಿ ಆ ತರಹ ಏನು ಆಗ್ಲಿಲ್ಲ.

ಕುಡಿದವನಿಗೆ ಕಿಕ್ ಹೊಡದಿದ್ದು ಬೆಳಿಗ್ಗೆ ಎದ್ದ ಮೇಲೆ. ಬೆಳಿಗ್ಗೆ ಎದ್ದಾಗ ಸುಮಾರು ೧೧ ಘಂಟೆ. ಕಷ್ಟ ಪಟ್ಟು ಎದ್ದ ಹುಡುಗ. ಬಲಗಡೆ ಬುಜದಲ್ಲಿ ಒಂದು ಗಾಯ ಆಗಿದೆ. ಹುಡುಗ ಯೋಚನೆ ಮಾಡಿದ. ರಾತ್ರಿ ಏನ್ ಆಯಿತು ಅಂತ ಒಮ್ಮೆ ಯೋಚಿಸಿದ. ನೆನಪು ಆಯಿತು. ತಾನು ಎದುರುಗಡೆ ಕೂತವನಿಗೆ ತುಂಬ ಕೊರಿತ ಇದ್ದೆ. ಅವ್ನು ಕೂಡ ಉರಕೊಂತ ಇದ್ದ. ಅಲ್ಲಿಗೆ ಹುಡುಗ ತೀರ್ಮಾನಕ್ಕೆ ಬಂದ. ನಿಮಗೂ ಅರ್ಥ ಆಯ್ತಲ್ಲಾ ...ಕಾರಣ ಯಾರಿರಬಹುದು ಅಂತ?

ಸಿಟ್ಟು ಬಂತು ಹುಡುಗನಿಗೆ. ಅವನನ್ನ ಕರೆದು ಕೂಗಾಡಿದ. ಮಗನೆ ರಾತ್ರಿ ನಾನು ಟೈಟಾಗಿದ್ದಾಗ ನನನ್ನ ಬೀಳಿಸಿ ಗಾಯ ಮಾಡಿ ಇದ್ದೀಯ. ಸುಮ್ನೆ ಇರೋಲ್ಲ ನಾನು. ಎದುರ್ಗಡೆ ಇದ್ದವನಿಗೆ ಮತ್ತೆ ಉರ್ದೊಯ್ತು. ಅವನು ಹೇಳ್ದ, ಮಗನೆ ರಾತ್ರೆಲ್ಲ ನಿದ್ದೆ ಹಾಳ್ಮಾಡಿದ್ದೂ ಅಲ್ಲದೆ ಈಗ ನಂಗೆ ಉಗಿತ ಇದ್ದೀಯ ...ಕುಡ್ದು ಮಗನೆ ಬಚ್ಚಲು ಮನೇಲಿ ಬಿದ್ದೆ. ಜೋರು ಸೌಂಡ್ ಆಯಿತು. ಏನಪ ಅಂತ ನಾನು ಬರೋದ್ರಲ್ಲಿ ನೀನೆ ಎದ್ದು ಬರ್ತಾ ಇದ್ದೆ. ಏಳ್ತಾ ಇದಾನಲ್ಲ ಅಂತ ನಾನು ಓಪಸ್ ಬರ್ತಾ ಇದ್ದೆ ಮತ್ತೆ ಸೌಂಡ್ ಆಯಿತು...ಅದೇ ತಾರಾ ಸುಮಾರ್ ಸರಿ ಸೌಂಡ್ ಕೆಳುಸ್ತು...ಅಂತು ಮತ್ತೆ ಬಂದು ನನ್ನ ತಲೆ ತಿಂತಾ ಕುಡಿದೆ..ಈಗ ನನ್ ಮೇಲೆ ಆರೋಪ ಮಾಡ್ತಾ ಇದ್ದೀಯ. ಕಡಿಮೆ ಕುಡಿಯೋಕೆ ಆಗೋಲ್ವಾ...

ಅದ್ರು ನಮ್ಮ ಮಾಸ್ಟರ್ ಪಿಎಸೆಗೆ ಇವನ ಮೇಲೆ ನಂಬಿಕೆ ಇರ್ಲಿಲ್ಲ...ಆಮೇಲೆ ದಿನ ಕಳೆದ ಹಾಗೆ ಕೈ, ಕಾಲು ಹಾಗೆ ನೋವೋಕ್ಕೆ ಶುರು ಅದ್ವಂತೆ...ಸಾಯಂಕಾಲ ಮತ್ತೆ ಕ್ವಾರ್ಟರ್ ಹೊಡಿಬೇಕಾದ್ರೆ ಹೇಳೋದಂತೆ. ಮಗ ನೀನು ಬೆಳಿಗ್ಗೆ ಹೇಳಿದ್ದು ಸತ್ಯ ಅಂತ......

ಹೆಂಗೆ ನಮ್ಮ ಮಾಸ್ಟರ್ ಪೀಸ್ ?


ಹೀಗೊಂದು ಸತ್ಯ ದರ್ಶಿನಿ

ಆತ್ಮಿಯರೇ,
ಮಂಗಳೂರು ಅಂದಕೂಡಲೇ ಮನಸ್ಸಿಗೆ ತಟ್ಟನೆ ನೆನಪಾಗುವ ಗಟನೆ ಅಂದ್ರೆ ಇತ್ತೀಚೆಗಷ್ಟೇ ಚರ್ಚ್ಗಳ ಮೇಲೆ ಬಜರಂಗದಳದವರು ನಡೆಸಿದ ಹಲ್ಲೆ. ನಾನು ಇಲ್ಲಿ ನನ್ನ ದಿಲ್ಲಿ ಸ್ನೇಹಿತರೊಂದಿಗೆ ಈ ವಿಚಾರ ಬಂದಾಗಲೆಲ್ಲ ನನ್ನ ಮನಸ್ಸಿಗೆ ತುಂಬ ಮುಜುಗುರವಾದ ಒಂದು ಬಾವನೆ. ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಇದೆ ಸುದ್ದಿ. ಮಂಗಳೂರಿನಿಂದ ಪ್ರಾರಂಬವಾಗಿ ದಿಲ್ಲಿ ತಲುಪಿ ಅಲ್ಲಿಂದ ನಮ್ಮ ಪ್ರದಾನ ಮಂತ್ರಿಗಳ ಜೊತೆಗೆ ಅಮೆರಿಕಾಗು ಹೋಗಿ ಬಂತು. ನಮ್ಮ ಪ್ರದಾನ ಮಂತ್ರಿಗಳು ಕೂಡ ತುಂಬ ನೊಂದು ಕೊಂಡು "ದಿಸ್ ಇನ್ಸಿಡೆಂಟ್ ಹಾಸ್ ಪುಟ್ ಇಂಡಿಯಾ ಇನ್ ಟು ವೆರಿ ಹ್ಯುಮಿಲಿಯೇಟಿಂಗ್ ಪೋಸಿಶನ್ " ಅಂತ ಮಾದ್ಯಮದ ಮೂಲಕ ತಮ್ಮ ಕೋಪವನ್ನು ಕರ್ನಾಟಕ ಸರ್ಕಾರದವರಿಗೆ ರವಾನೆ ಮಾಡ್ಬಿಟ್ರು. ಸರ್ಕಾರದವರು ಸಿಂಗ್ ಸಹೆಬ್ರುನಾ ಸಮಾದಾನ ಮಾಡುವ ಪ್ರಯತ್ನದಲ್ಲಿ ಬಜರಂಗ ದಳದ ನಾಯಕ ಮಹೇಂದ್ರ ಕುಮಾರನನ್ನು ಬಂಧಿಸಿಯೇ ಬಿಟ್ರು. ಅಲ್ಲಿಗೆ ಸುದ್ದಿಗಳು ಸಮಾಪ್ತ. ಸುದ್ದಿ ಅಷ್ಟೆ ಮುಗೀತು...ಕತೆ ತುಂಬಾನೆ ಬಾಕಿ ಇದೆ. ಓದಿ......

ನಾನು ಮೊದಲು ಈ ಘಟನೆ ಕೇಳ್ದಾಗ ಈ ಬಜರಂಗ ದಳದವರಿಗೆ ಇನ್ನೇನು ಕೆಲಸ ಇಲ್ವಾ? ಇವರ ಹಣೆಬರಹನೆ ಇಷ್ಟು ಅಂತ ರೆಗ್ತಾ ಇದ್ದೆ. ಆದ್ರೆ ಒಂದು ಪ್ರಶ್ನೆ ಮನಸ್ಸಿಗೆ ಬಂತು. ಮಂಗಳೂರಿನಲ್ಲೇ ಮೊದಲು ಏಕೆ ಪ್ರಾರಂಬ ಆಯಿತು? ಸುಮ್ಸುಮ್ನೆ ಇವರು ಚರ್ಚ್ಗಳ ಮೇಲೆ ಏಕೆ ದಾಳಿ ಮಾಡಿದ್ರು ಅಂತ? ಹುಚ್ಚರು ಒಟ್ಟಿಗೆ ಸೇರಿದ್ದಾರೆ ಅಂತ. ಹೀಗೆ ಮಾಧ್ಯಮಗಳನ್ನು ಗಮನಿಸುತ್ತಾ ಇದ್ದೆ. ಡೆಕ್ಕನ್ ಹೆರಾಲ್ಡ್ ಮತ್ತು ಮುಂಬೈ ಮಿರರ್ ಎಂಬ ದಿನ ಪತ್ರಿಕೆಗಳಲ್ಲಿ ಒಂದು ಲೇಖನ ಬಂತು. ಅದರ ಕೊಂಡಿಯು ಇಲ್ಲಿದೆ ನೋಡಿ.
http://www.mumbaimirror.com/net/mmpaper.aspx?page=article&sectid=3&contentid=200809192008091903361675194568d35&pageno=1


ಈ ಲೇಖನಗಳ ಪ್ರಕಾರ ಈ ಎಲ್ಲ ಗಲಬೆಗಳಿಗೆ ಕಾರಣ ಸತ್ಯ ದರ್ಶನ ಎಂಬ ಒಂದು ಪುಸ್ತಕ. ಈ ಪುಸ್ತಕ ದಲ್ಲಿ ಇರುವುದಾದರೂ ಏನು? ಕೆಲವು ಆಯ್ದ ಭಾಗಗಳನ್ನು ನಾನು ಇಲ್ಲಿ ಉಲ್ಲೆಕಿಸುತ್ತಿದ್ದೇನೆ.
೧. ಊರ್ವಶಿ - ಭಾಗವಾನ್ ಶ್ರೀ ವಿಷ್ಣುವಿನ ಮಗಳು - ಇವಳು ದೇವದಾಸಿ - ವಶಿಷ್ಟ ಈ ದೇವದಾಸಿಯ ಮಗ - ಇವನು ತನ್ನ ತಾಯಿಯನ್ನೇ ವದಿಸುತ್ತಾನೆ - ಇಂತಹ ನೀಚ ಮನುಷ್ಯ ಹಿಂದೂಗಳ ಭಗವಂತ ರಾಮನ ಗುರು.
೨. ಇಂತಹವರನ್ನು ದೇವರು ಎಂದು ಹೇಳುವುದೇ ಒಂದು ದೊಡ್ಡ ತಮಾಷೆ.
ಹೀಗೆ ಹಲವಾರು ರೀತಿಯಲ್ಲಿ ಹಿಂದೂ ದೇವರುಗಳ ವಿಶ್ಲೇಷಣೆ ಮಾಡುತ್ತ ಹೊರಡುತ್ತಾನೆ. ನಾನು ಇಂತಹ ಮಹಾನುಭಾವ ಯಾರೆಂದು ತಿಳಿಯುವ ಕುತೂಹಲ. ಅವನ ಹೆಸರು ಪರವಸ್ತು ಸೂರ್ಯನಾರಾಯಣ. ಇವನ ಬಗ್ಗೆ ಹೇಳೋದು ತುಂಬ ಇದೆ.

ಇವನೇನೋ ಬರೆದ ಸರಿ. ನಂತರ ಏನಾಯ್ತು. ೧೯೯೬ ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ಆಂದ್ರ ಪ್ರದೇಶದಲ್ಲಿ ಕೆಲವೊಂದು ಚುರ್ಚುಗಳು ಜನರ ಮುಂದೆ ಈ ಪುಸ್ತಕವನ್ನು ತಂದಿಡುವ ಸಾಹಸ ಪ್ರಯತ್ನ ಮಾಡಿದರು. ಅಂದ್ರ ಸರ್ಕಾರದವರು ಅಂದೇ ಈ ಪುಸ್ತಕವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದರು. ಅದೇನೋ ಸರಿ, ಆದ್ರೆ ಮಂಗಳೂರಿನಲ್ಲಿ ಗಲಾಟೆ ಏಕೆ ಶುರುವಾಯ್ತು? ಹಾಗೆ ಯೋಚಿಸಿ...ಮಂಗಳೂರಿನ ಚುರ್ಚುಗಳು ಮತ್ತೊಮ್ಮೆ ದುಸ್ಸಾಹಸ ಮಾಡುವ ಪ್ರಯತ್ನ. ಇದೆ ಪುಸ್ತಕವನ್ನು ತೆಲಗಿನಿಂದ ಕನ್ನಡಕ್ಕೆ ಅನುವಾದ ಮಾಡಿ ಜನರಿಗೆ ತಲುಪಿಸಲು ಮಾಡಿದ ಹೀನ ಕೃತ್ಯ. ಉತ್ತರ ಅವರಿಗೆ ತುಂಬ ಬೇಗ ಹಾಗು ಸಾಕಷ್ಟು ಚುರುಕಾಗಿಯೇ ಸಿಕ್ತು. ಇದೆಲ್ಲ ಆದ ನಂತರ ಮಾಧ್ಯಮಗಳಲ್ಲಿ ಬಂದ ಸುದ್ದಿ ಎಲ್ಲರಿಗೂ ಗೊತ್ತು.

ನಾನು ಹೀಗೆ ಬರೆಯೋದು ಬಜರಂಗ ದಳದವರಿಗೆ ಕೊಡುವ ಬೆಂಬಲ ಅಂತು ಅಲ್ಲ. ಹಾಗಂತ ಕೆಲವು ಚುರ್ಚುಗಳು ಮಾಡ್ತಿರೋದು ಕೂಡ ಸರಿ ಅಲ್ಲ. ನನ್ನ ಎಲ್ಲ ಆತ್ಮೀಯರಿಗೆ ತಿಳಿದ ಹಾಗೆ ನಾನು ಬಜರಂಗ ದಳದವರನ್ನು ಹಲವಾರು ಬಾರಿ ಕಂಡಿಸಿರುವುದು ಇದೆ. ಇವರುಗಳು ಚುರ್ಚುಗಳಿಗೆ ನುಗ್ಗಿ ಹಲ್ಲೆ ನಡೆಸಿದರು. ಹಾಗೆ ನೋಡಿದರೆ ಬಜರಂಗದಳ, ಪುಸ್ತಕ ವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ ಚುರ್ಚುಗಳು ಮತ್ತು ನೀಚಾತ್ಮ ಪರವಸ್ತು ಸೂರ್ಯನಾರಾಯಣ ಎಲ್ಲರೂ ಒಂದೇ ಜಾತಿಗೆ ಸೇರಿದ, ಸಮಾಜದಲ್ಲಿರುವ ಸೊಳ್ಳೆಗಳು.

ಇಲ್ಲಿ ಎಷ್ಟೊಂದು ತಪ್ಪುಗಳು ನೆಡೆದು ಹೋಗಿದೆ ನೋಡಿ.
೧. ಯಾರೋ ನೀಚಾತ್ಮ ತಲೆ ಕೆಟ್ಟಿ ಏನೋ ಬರೆದ.
೨. ಈ ಹುಚ್ಚನ ಮಾತು ಕೇಳಿ ಕೆಲವು ಚುರ್ಚುಗಳು ಚಪ್ಪಾಳೆ ಹಾಕಿದರು.
೩. ಎಲ್ಲ ಹುಚ್ಚರಿಗೂ ನಾವು ಸರಿ ಮಾಡುತ್ತೇವೆಂದು ಬಜರಂಗ ದಳದವರು ಹುಚ್ಚರಾದರು.
ಯಂತಹ ತಮಾಷೆ ನೋಡಿ. ಕೋತಿಗೆ ಹೆಂಡ ಕುಡಿಸಿದ ಹಾಗೆ. ಆದರೆ ಇವೆಲ್ಲ ನೀಚ ಕೃತ್ಯಗಳು ತಂದಿಟ್ಟ ಕಳಂಕ ವೆಂದರೆ ಹಿಂದೂ - ಕ್ರಿಶ್ಚನ್ ಗಲಾಟೆಎನ್ನುವ ವಿಷ ನಮ್ಮ ಸಮಾಜದಲ್ಲಿ ನೆಲೆ ಮಾಡಿತು . ನನ್ನ ಪ್ರಕಾರ ಮೇಲೆ ನಮೂದಿಸಿರುವ ಮೂರು ಹುಚ್ಚರ ಪೈಕಿಯಲ್ಲಿ ಮೊದಲೆರೆಡು ಹುಚ್ಚರು ತಣ್ಣಗಾದರೆ ಮೂರನೆಯ ಕೋತಿ ಕುಣಿಯುವುದನ್ನು ತಾನಾಗೆ ನಿಲ್ಲಿಸುವದು ಎಂದು ನಂಬಿರುತ್ತೇನೆ.

ಕರ್ನಾಟಕ ೨೦ -೨೦ ಲೀಗ್

ಅದು ಯಾಕೋ ಏನೋ ಗೊತ್ತಿಲ್ಲ. ರವಿ ಬೆಳಗರೆ ಅವರಿಗೆ ದೇವೇಗೌಡರ ನೆನಪು ಅಗಾಗ ಆಗ್ತಾ ಇರುತ್ತೆ. ಮೊನ್ನೆ ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಎಂದು ಮರೆಯದ ಹಾಡು ಕಾರ್ಯಕ್ರಮದಲ್ಲಿ ಶ್ರೀ ಬೆಳಗೆರೆ ಅವರಿಗೆ ಗೌಡರ ನೆನಪು ಅಗಾಗ ಆಗ್ತಾ ಇತ್ತು. ಬಹುಷಃ ಇವರಿಬ್ಬರು ಪದ್ಮನಾಭನಗರದ ನಿವಾಸಿಗಳು ಆಗಿರೋದ್ರಿಂದ. ಹೇಗೆ ಅಂದ್ರೆ ನಮ್ಮ ಪಕ್ಕದ ಮನೆಯಲ್ಲಿ ಯಾರಾದ್ರೂ ಒಳ್ಳೆ ಫಿಗರ್ ಇದ್ರೆ ನಮಗೆ ನೆನಪಾಗುತ್ತೆ ನೋಡಿ, ಹಾಗೆ. ಎಲ್ಲೊ ಒಂದು ಕಡೆ ಪ್ರೀತಿ. ಅದೇನೇ ಇರಲಿ. ಈ ರೀತಿ ಬೆಳಗರೆ ಅವರಿಗೆ ಗೌಡರ ನೆನಪಾದ ಒಂದು ಪ್ರಸಂಗವನ್ನ ನಾನು ಈಗಾಗಲೇ ನಿಮಗೆ ಹೇಳಿದ್ದೇನೆ. ಹಾಗೆ ಅದೇ ರೀತಿಯ ಇನ್ನೊಂದು ಪ್ರಸ್ನಗವನ್ನ ಇಲ್ಲಿ ಹೇಳ್ಬೇಕು. ಈ ಬಾರಿ ಬೆಳಗೆರೆ ಅವರು ಕ್ರಿಕೆಟ್ ಮತ್ತು ರಾಜಕೀಯವನ್ನ ಹೋಲಿಕೆ ಮಾಡ್ಲಿಕ್ಕೆ ಹೊರಟುಬಿಡ್ತಾರೆ. ಅದ್ಬುತವಾದ ವಾಕ್ಚತುರತೆ ಬೆಳಗರೆ ಅವರಿಗೆ ದೇವರು ಕೊಟ್ಟ ವರ ಬಿಡಿ. ಇಲ್ಲಿ ಇನ್ನು ಒಂದು ಮಾತಿದೆ. ಸರಿಯಾಗಿ ಎಣ್ಣೆ ಏರ್ಸವ್ರೆಲ್ಲ ಮಸ್ತಾಗೆ ಮಾತನಾಡ್ತಾರೆ ಅಂತ. ಆದ್ರೆ ನಮ್ಮ್ ಬೆಳಗರೆ ಅವರು ಯಾವಾಗ ಮಾತು ಕಲಿತರು ಅಂತ ಅವರನ್ನೇ ಕೇಳಿ ತಿಳ್ಕೊಬೇಕು. ಅದೇನೇ ಇದ್ರೂ ಬೆಳಗರೆ ಸಾಹೇಬರ ನಿರೂಪಣೆ ಅಂತು ಕೇಳುಗರಿಗೆ ರಸದೌತಣ. ಹೀಗೆ ನಿರೂಪಣೆ ಮಾಡ್ತಾ ಬೆಳಗರೆ ಸಾಹೇಬ್ರು ನಮ್ಮ ಕರ್ನಾಟಕದ ರಾಜಕೀಯದಲ್ಲಿ ನಡೆಯಲಿರುವ ಒಂದು ೨೦ - ೨೦ ಲೀಗ್ ಬಗ್ಗೆ ಹೇಳಿದ್ರು. ನಮ್ಮ ಎಲ್ರುಗೂ ಗೊತ್ತು. ಕುಮಾರಸ್ವಾಮಿ ಅವರು ಅಧಿಕಾರದ ಅವದಿಯಲ್ಲಿ ಎಷ್ಟು ಚುರುಕಾಗಿ ಸರ್ಕಾರಿ ಕೆಲಸಗಳು ಸಾಗ್ತಾ ಇದ್ವು. ಮಜಾ ಅಂದ್ರೆ ಅಷ್ಟೆ ಚುರುಕಾಗಿ ಕುಮಾರಸ್ವಾಮಿ ಅವ್ರು ಕೂಡ ಹೋಗ್ಬಿಟ್ರು. ಈಗ ನೋಡಿ ಯಡಿಯೂರಪ್ಪ ನವರು ಮಂದಗತಿಯಲ್ಲಿ ಸಾಗ್ತಾ ಇದ್ದಾರೆ. ಇದನ್ನ ಗಮನಿಸಿದ ಕುಮಾರಣ್ಣ ಹೀಗೆ ಒಂದು ದೂರವಾಣಿನ ಮಾಡಿದರಂತೆ ಯಡಿಯೂರು ಸಾಹೆಬ್ರುಗೆ. ನಿಮಗೊಂದು ಸವಾಲಿದೆ, ಬೇಟಿ ಮಾಡಿ ಹೇಳ್ತೀನಿ ಅಂದ್ರಂತೆ. ಇನ್ನು ಯಡ್ಡಿ ಸಾಹೆಬ್ರುನ ಕೇಳ್ಬೇಕಾ. ಬಂದೆ ಈಗಲೇ ಅಂತ ಬೇಟಿ ಮಾಡೇ ಬಿಟ್ರಂತೆ. ಅದೇನು ನಿಮ್ಮ ಸವಾಲು ಹೇಳಪ್ಪ ಅಂದ್ರಂತೆ. ಕುಮಾರಣ್ಣ ಆದಿಕೆ ಹಿಂದೆ ನೆಡೆದ ೨೦ -೨೦ ನಲ್ಲಿ ನಿಮಗೆ ಬ್ಯಾಟ್ಟಿಂಗ್ ಕೊಡ್ಲಿಲ್ಲ. ಈ ಸಾರಿ ಬ್ಯಾಟ್ಟಿಂಗ್ ಕೊಟ್ಟೆ ಕೊಡ್ತೀವಿ. ದಮ್ಮಿದ್ರೆ ಬನ್ರಿ ಒಂದು ೨೦ -೨೦ ಆಡೋಣ ಅಂದ್ರಂತೆ. ಯಡ್ಡಿ ಈಗ ಸಿ.ಎಂ. ಸವಾಲನ್ನ ಸ್ವೀಕಾರ ಮಾಡ್ದೆ ಇರ್ತಾರ. ಕುಮಾರಣ್ಣ ಈಗ ಸೋತು ಸುಣ್ಣ ಆಗಿದಾರೆ. ಯಡ್ಡಿ ಮನಸಲ್ಲೇ ಅಂದ್ಕೊಂಡ್ರಂತೆ. ಸೋತರು ಈ ನನ್ ಮಗುನ್ ಜಂಬಕ್ಕೆನು ಕಡಮೆ ಇಲ್ಲ ಅಂತ. ನಾನು ರೆಡಿ ನೀನು ನಿನ್ನ ತಯಾರಿ ಮಾಡ್ಕೊಂಡು ಬಾ ಕುಮಾರ, ಅಂದೇ ಬಿಟ್ರು. ನಂತರ ಯಡ್ಡಿ ಸಾಹೇಬ್ರು ಸ್ವುಲ್ಪ ಯೋಚನೆ ಮಾಡಿ ನಂದೊಂದು ಕಂಡೀಷನ್ ಇದೆ ಅಂದ್ರಂತೆ. ಕುಮಾರಣ್ಣ ಅದೇನಿದೆ ನಿಮ್ ಕಂಡೀಷನ್ ಹೇಳ್ಬಿಡಿ ಅಂತಾರೆ. ಆದಿಕೆ ಯಡ್ಡಿ ಸಾಹೇಬ್ರು ಬ್ಯಾಟ್ಟಿಂಗ್ ಮಾತ್ರ ನಾವೇ ಫರ್ಸ್ಟ್ ಮಾಡಬೇಕು ಅಂದ್ರಂತೆ. ಕುಮಾರಣ್ಣ ಯೋಚನೇನೆ ಮಾಡ್ದೆ ಓಕೆ ಅಂದ್ಬಿಟ್ರು. ಯಡ್ಡಿ ಫುಲ್ ಕುಶ್. ಹಾಗಾದ್ರೆ ನಾನ್ ರೆಡಿ ಅಂತ ಹೇಳ್ಬಿತ್ರು. ಆಮೇಲೆ ಕುಮಾರಣ್ಣ ನೀವು ಮಾತ್ರ ಕಂಡೀಷನ್ ಹಾಕಿದರೆ ಹೇಗೆ, ನನ್ದುನು ಒಂದು ಕಂಡೀಷನ್ ಇದೆ ಅಂದ್ರಂತೆ. ಯಡ್ಡಿ ಸಾಹೇಬರು ಹೇಗಿದ್ರು ಬ್ಯಾಟ್ಟಿಂಗ್ ನಂದೆ ಮೊದಲು ಅದೇನು ಹೇಳ್ರಿ ಅಂದ್ರಂತೆ. ಆದಿಕೆ ಕುಮಾರಣ್ಣ, ಅಂಪೈರ್ ಮಾತ್ರ ನಮಪ್ಪಾನೆ ಆಗಬೇಕು ಅಂದ್ರಂತೆ.
ಯಡ್ಡಿ ಫುಲ್ಲು ತಲೆ ಕೆಟ್ಟು ಈ ಅಪ್ಪ ಮಕ್ಳು ಸಹವಾಸ ಲೈಫ್ ನಲ್ಲಿ ಬೇಡ ಅಂತ ಅನ್ಕೊಂಡು, ಕುಮಾರಣ್ಣ ನಿಂಗು ನಿಮಪ್ಪನಿಗು ದೊಡ್ ನಮಸ್ಕಾರ ಅಂದ್ಬಿಟ್ಟು ಸೀದಾ ರೈಟ್ ಅಂದ್ರಂತೆ.