ಅದು ಯಾಕೋ ಏನೋ ಗೊತ್ತಿಲ್ಲ. ರವಿ ಬೆಳಗರೆ ಅವರಿಗೆ ದೇವೇಗೌಡರ ನೆನಪು ಅಗಾಗ ಆಗ್ತಾ ಇರುತ್ತೆ. ಮೊನ್ನೆ ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಎಂದು ಮರೆಯದ ಹಾಡು ಕಾರ್ಯಕ್ರಮದಲ್ಲಿ ಶ್ರೀ ಬೆಳಗೆರೆ ಅವರಿಗೆ ಗೌಡರ ನೆನಪು ಅಗಾಗ ಆಗ್ತಾ ಇತ್ತು. ಬಹುಷಃ ಇವರಿಬ್ಬರು ಪದ್ಮನಾಭನಗರದ ನಿವಾಸಿಗಳು ಆಗಿರೋದ್ರಿಂದ. ಹೇಗೆ ಅಂದ್ರೆ ನಮ್ಮ ಪಕ್ಕದ ಮನೆಯಲ್ಲಿ ಯಾರಾದ್ರೂ ಒಳ್ಳೆ ಫಿಗರ್ ಇದ್ರೆ ನಮಗೆ ನೆನಪಾಗುತ್ತೆ ನೋಡಿ, ಹಾಗೆ. ಎಲ್ಲೊ ಒಂದು ಕಡೆ ಪ್ರೀತಿ. ಅದೇನೇ ಇರಲಿ. ಈ ರೀತಿ ಬೆಳಗರೆ ಅವರಿಗೆ ಗೌಡರ ನೆನಪಾದ ಒಂದು ಪ್ರಸಂಗವನ್ನ ನಾನು ಈಗಾಗಲೇ ನಿಮಗೆ ಹೇಳಿದ್ದೇನೆ. ಹಾಗೆ ಅದೇ ರೀತಿಯ ಇನ್ನೊಂದು ಪ್ರಸ್ನಗವನ್ನ ಇಲ್ಲಿ ಹೇಳ್ಬೇಕು. ಈ ಬಾರಿ ಬೆಳಗೆರೆ ಅವರು ಕ್ರಿಕೆಟ್ ಮತ್ತು ರಾಜಕೀಯವನ್ನ ಹೋಲಿಕೆ ಮಾಡ್ಲಿಕ್ಕೆ ಹೊರಟುಬಿಡ್ತಾರೆ. ಅದ್ಬುತವಾದ ವಾಕ್ಚತುರತೆ ಬೆಳಗರೆ ಅವರಿಗೆ ದೇವರು ಕೊಟ್ಟ ವರ ಬಿಡಿ. ಇಲ್ಲಿ ಇನ್ನು ಒಂದು ಮಾತಿದೆ. ಸರಿಯಾಗಿ ಎಣ್ಣೆ ಏರ್ಸವ್ರೆಲ್ಲ ಮಸ್ತಾಗೆ ಮಾತನಾಡ್ತಾರೆ ಅಂತ. ಆದ್ರೆ ನಮ್ಮ್ ಬೆಳಗರೆ ಅವರು ಯಾವಾಗ ಮಾತು ಕಲಿತರು ಅಂತ ಅವರನ್ನೇ ಕೇಳಿ ತಿಳ್ಕೊಬೇಕು. ಅದೇನೇ ಇದ್ರೂ ಬೆಳಗರೆ ಸಾಹೇಬರ ನಿರೂಪಣೆ ಅಂತು ಕೇಳುಗರಿಗೆ ರಸದೌತಣ. ಹೀಗೆ ನಿರೂಪಣೆ ಮಾಡ್ತಾ ಬೆಳಗರೆ ಸಾಹೇಬ್ರು ನಮ್ಮ ಕರ್ನಾಟಕದ ರಾಜಕೀಯದಲ್ಲಿ ನಡೆಯಲಿರುವ ಒಂದು ೨೦ - ೨೦ ಲೀಗ್ ಬಗ್ಗೆ ಹೇಳಿದ್ರು. ನಮ್ಮ ಎಲ್ರುಗೂ ಗೊತ್ತು. ಕುಮಾರಸ್ವಾಮಿ ಅವರು ಅಧಿಕಾರದ ಅವದಿಯಲ್ಲಿ ಎಷ್ಟು ಚುರುಕಾಗಿ ಸರ್ಕಾರಿ ಕೆಲಸಗಳು ಸಾಗ್ತಾ ಇದ್ವು. ಮಜಾ ಅಂದ್ರೆ ಅಷ್ಟೆ ಚುರುಕಾಗಿ ಕುಮಾರಸ್ವಾಮಿ ಅವ್ರು ಕೂಡ ಹೋಗ್ಬಿಟ್ರು. ಈಗ ನೋಡಿ ಯಡಿಯೂರಪ್ಪ ನವರು ಮಂದಗತಿಯಲ್ಲಿ ಸಾಗ್ತಾ ಇದ್ದಾರೆ. ಇದನ್ನ ಗಮನಿಸಿದ ಕುಮಾರಣ್ಣ ಹೀಗೆ ಒಂದು ದೂರವಾಣಿನ ಮಾಡಿದರಂತೆ ಯಡಿಯೂರು ಸಾಹೆಬ್ರುಗೆ. ನಿಮಗೊಂದು ಸವಾಲಿದೆ, ಬೇಟಿ ಮಾಡಿ ಹೇಳ್ತೀನಿ ಅಂದ್ರಂತೆ. ಇನ್ನು ಯಡ್ಡಿ ಸಾಹೆಬ್ರುನ ಕೇಳ್ಬೇಕಾ. ಬಂದೆ ಈಗಲೇ ಅಂತ ಬೇಟಿ ಮಾಡೇ ಬಿಟ್ರಂತೆ. ಅದೇನು ನಿಮ್ಮ ಸವಾಲು ಹೇಳಪ್ಪ ಅಂದ್ರಂತೆ. ಕುಮಾರಣ್ಣ ಆದಿಕೆ ಹಿಂದೆ ನೆಡೆದ ೨೦ -೨೦ ನಲ್ಲಿ ನಿಮಗೆ ಬ್ಯಾಟ್ಟಿಂಗ್ ಕೊಡ್ಲಿಲ್ಲ. ಈ ಸಾರಿ ಬ್ಯಾಟ್ಟಿಂಗ್ ಕೊಟ್ಟೆ ಕೊಡ್ತೀವಿ. ದಮ್ಮಿದ್ರೆ ಬನ್ರಿ ಒಂದು ೨೦ -೨೦ ಆಡೋಣ ಅಂದ್ರಂತೆ. ಯಡ್ಡಿ ಈಗ ಸಿ.ಎಂ. ಸವಾಲನ್ನ ಸ್ವೀಕಾರ ಮಾಡ್ದೆ ಇರ್ತಾರ. ಕುಮಾರಣ್ಣ ಈಗ ಸೋತು ಸುಣ್ಣ ಆಗಿದಾರೆ. ಯಡ್ಡಿ ಮನಸಲ್ಲೇ ಅಂದ್ಕೊಂಡ್ರಂತೆ. ಸೋತರು ಈ ನನ್ ಮಗುನ್ ಜಂಬಕ್ಕೆನು ಕಡಮೆ ಇಲ್ಲ ಅಂತ. ನಾನು ರೆಡಿ ನೀನು ನಿನ್ನ ತಯಾರಿ ಮಾಡ್ಕೊಂಡು ಬಾ ಕುಮಾರ, ಅಂದೇ ಬಿಟ್ರು. ನಂತರ ಯಡ್ಡಿ ಸಾಹೇಬ್ರು ಸ್ವುಲ್ಪ ಯೋಚನೆ ಮಾಡಿ ನಂದೊಂದು ಕಂಡೀಷನ್ ಇದೆ ಅಂದ್ರಂತೆ. ಕುಮಾರಣ್ಣ ಅದೇನಿದೆ ನಿಮ್ ಕಂಡೀಷನ್ ಹೇಳ್ಬಿಡಿ ಅಂತಾರೆ. ಆದಿಕೆ ಯಡ್ಡಿ ಸಾಹೇಬ್ರು ಬ್ಯಾಟ್ಟಿಂಗ್ ಮಾತ್ರ ನಾವೇ ಫರ್ಸ್ಟ್ ಮಾಡಬೇಕು ಅಂದ್ರಂತೆ. ಕುಮಾರಣ್ಣ ಯೋಚನೇನೆ ಮಾಡ್ದೆ ಓಕೆ ಅಂದ್ಬಿಟ್ರು. ಯಡ್ಡಿ ಫುಲ್ ಕುಶ್. ಹಾಗಾದ್ರೆ ನಾನ್ ರೆಡಿ ಅಂತ ಹೇಳ್ಬಿತ್ರು. ಆಮೇಲೆ ಕುಮಾರಣ್ಣ ನೀವು ಮಾತ್ರ ಕಂಡೀಷನ್ ಹಾಕಿದರೆ ಹೇಗೆ, ನನ್ದುನು ಒಂದು ಕಂಡೀಷನ್ ಇದೆ ಅಂದ್ರಂತೆ. ಯಡ್ಡಿ ಸಾಹೇಬರು ಹೇಗಿದ್ರು ಬ್ಯಾಟ್ಟಿಂಗ್ ನಂದೆ ಮೊದಲು ಅದೇನು ಹೇಳ್ರಿ ಅಂದ್ರಂತೆ. ಆದಿಕೆ ಕುಮಾರಣ್ಣ, ಅಂಪೈರ್ ಮಾತ್ರ ನಮಪ್ಪಾನೆ ಆಗಬೇಕು ಅಂದ್ರಂತೆ.
ಯಡ್ಡಿ ಫುಲ್ಲು ತಲೆ ಕೆಟ್ಟು ಈ ಅಪ್ಪ ಮಕ್ಳು ಸಹವಾಸ ಲೈಫ್ ನಲ್ಲಿ ಬೇಡ ಅಂತ ಅನ್ಕೊಂಡು, ಕುಮಾರಣ್ಣ ನಿಂಗು ನಿಮಪ್ಪನಿಗು ದೊಡ್ ನಮಸ್ಕಾರ ಅಂದ್ಬಿಟ್ಟು ಸೀದಾ ರೈಟ್ ಅಂದ್ರಂತೆ.
maga ninu jsut one signal miss agidiya illandre yello irtttide kanu,
ReplyDeletenanu ninnalli mattibba ravi belegere kantha idini