October 31, 2008

ಹೀಗೊಂದು ಸತ್ಯ ದರ್ಶಿನಿ

ಆತ್ಮಿಯರೇ,
ಮಂಗಳೂರು ಅಂದಕೂಡಲೇ ಮನಸ್ಸಿಗೆ ತಟ್ಟನೆ ನೆನಪಾಗುವ ಗಟನೆ ಅಂದ್ರೆ ಇತ್ತೀಚೆಗಷ್ಟೇ ಚರ್ಚ್ಗಳ ಮೇಲೆ ಬಜರಂಗದಳದವರು ನಡೆಸಿದ ಹಲ್ಲೆ. ನಾನು ಇಲ್ಲಿ ನನ್ನ ದಿಲ್ಲಿ ಸ್ನೇಹಿತರೊಂದಿಗೆ ಈ ವಿಚಾರ ಬಂದಾಗಲೆಲ್ಲ ನನ್ನ ಮನಸ್ಸಿಗೆ ತುಂಬ ಮುಜುಗುರವಾದ ಒಂದು ಬಾವನೆ. ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಇದೆ ಸುದ್ದಿ. ಮಂಗಳೂರಿನಿಂದ ಪ್ರಾರಂಬವಾಗಿ ದಿಲ್ಲಿ ತಲುಪಿ ಅಲ್ಲಿಂದ ನಮ್ಮ ಪ್ರದಾನ ಮಂತ್ರಿಗಳ ಜೊತೆಗೆ ಅಮೆರಿಕಾಗು ಹೋಗಿ ಬಂತು. ನಮ್ಮ ಪ್ರದಾನ ಮಂತ್ರಿಗಳು ಕೂಡ ತುಂಬ ನೊಂದು ಕೊಂಡು "ದಿಸ್ ಇನ್ಸಿಡೆಂಟ್ ಹಾಸ್ ಪುಟ್ ಇಂಡಿಯಾ ಇನ್ ಟು ವೆರಿ ಹ್ಯುಮಿಲಿಯೇಟಿಂಗ್ ಪೋಸಿಶನ್ " ಅಂತ ಮಾದ್ಯಮದ ಮೂಲಕ ತಮ್ಮ ಕೋಪವನ್ನು ಕರ್ನಾಟಕ ಸರ್ಕಾರದವರಿಗೆ ರವಾನೆ ಮಾಡ್ಬಿಟ್ರು. ಸರ್ಕಾರದವರು ಸಿಂಗ್ ಸಹೆಬ್ರುನಾ ಸಮಾದಾನ ಮಾಡುವ ಪ್ರಯತ್ನದಲ್ಲಿ ಬಜರಂಗ ದಳದ ನಾಯಕ ಮಹೇಂದ್ರ ಕುಮಾರನನ್ನು ಬಂಧಿಸಿಯೇ ಬಿಟ್ರು. ಅಲ್ಲಿಗೆ ಸುದ್ದಿಗಳು ಸಮಾಪ್ತ. ಸುದ್ದಿ ಅಷ್ಟೆ ಮುಗೀತು...ಕತೆ ತುಂಬಾನೆ ಬಾಕಿ ಇದೆ. ಓದಿ......

ನಾನು ಮೊದಲು ಈ ಘಟನೆ ಕೇಳ್ದಾಗ ಈ ಬಜರಂಗ ದಳದವರಿಗೆ ಇನ್ನೇನು ಕೆಲಸ ಇಲ್ವಾ? ಇವರ ಹಣೆಬರಹನೆ ಇಷ್ಟು ಅಂತ ರೆಗ್ತಾ ಇದ್ದೆ. ಆದ್ರೆ ಒಂದು ಪ್ರಶ್ನೆ ಮನಸ್ಸಿಗೆ ಬಂತು. ಮಂಗಳೂರಿನಲ್ಲೇ ಮೊದಲು ಏಕೆ ಪ್ರಾರಂಬ ಆಯಿತು? ಸುಮ್ಸುಮ್ನೆ ಇವರು ಚರ್ಚ್ಗಳ ಮೇಲೆ ಏಕೆ ದಾಳಿ ಮಾಡಿದ್ರು ಅಂತ? ಹುಚ್ಚರು ಒಟ್ಟಿಗೆ ಸೇರಿದ್ದಾರೆ ಅಂತ. ಹೀಗೆ ಮಾಧ್ಯಮಗಳನ್ನು ಗಮನಿಸುತ್ತಾ ಇದ್ದೆ. ಡೆಕ್ಕನ್ ಹೆರಾಲ್ಡ್ ಮತ್ತು ಮುಂಬೈ ಮಿರರ್ ಎಂಬ ದಿನ ಪತ್ರಿಕೆಗಳಲ್ಲಿ ಒಂದು ಲೇಖನ ಬಂತು. ಅದರ ಕೊಂಡಿಯು ಇಲ್ಲಿದೆ ನೋಡಿ.
http://www.mumbaimirror.com/net/mmpaper.aspx?page=article&sectid=3&contentid=200809192008091903361675194568d35&pageno=1


ಈ ಲೇಖನಗಳ ಪ್ರಕಾರ ಈ ಎಲ್ಲ ಗಲಬೆಗಳಿಗೆ ಕಾರಣ ಸತ್ಯ ದರ್ಶನ ಎಂಬ ಒಂದು ಪುಸ್ತಕ. ಈ ಪುಸ್ತಕ ದಲ್ಲಿ ಇರುವುದಾದರೂ ಏನು? ಕೆಲವು ಆಯ್ದ ಭಾಗಗಳನ್ನು ನಾನು ಇಲ್ಲಿ ಉಲ್ಲೆಕಿಸುತ್ತಿದ್ದೇನೆ.
೧. ಊರ್ವಶಿ - ಭಾಗವಾನ್ ಶ್ರೀ ವಿಷ್ಣುವಿನ ಮಗಳು - ಇವಳು ದೇವದಾಸಿ - ವಶಿಷ್ಟ ಈ ದೇವದಾಸಿಯ ಮಗ - ಇವನು ತನ್ನ ತಾಯಿಯನ್ನೇ ವದಿಸುತ್ತಾನೆ - ಇಂತಹ ನೀಚ ಮನುಷ್ಯ ಹಿಂದೂಗಳ ಭಗವಂತ ರಾಮನ ಗುರು.
೨. ಇಂತಹವರನ್ನು ದೇವರು ಎಂದು ಹೇಳುವುದೇ ಒಂದು ದೊಡ್ಡ ತಮಾಷೆ.
ಹೀಗೆ ಹಲವಾರು ರೀತಿಯಲ್ಲಿ ಹಿಂದೂ ದೇವರುಗಳ ವಿಶ್ಲೇಷಣೆ ಮಾಡುತ್ತ ಹೊರಡುತ್ತಾನೆ. ನಾನು ಇಂತಹ ಮಹಾನುಭಾವ ಯಾರೆಂದು ತಿಳಿಯುವ ಕುತೂಹಲ. ಅವನ ಹೆಸರು ಪರವಸ್ತು ಸೂರ್ಯನಾರಾಯಣ. ಇವನ ಬಗ್ಗೆ ಹೇಳೋದು ತುಂಬ ಇದೆ.

ಇವನೇನೋ ಬರೆದ ಸರಿ. ನಂತರ ಏನಾಯ್ತು. ೧೯೯೬ ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ಆಂದ್ರ ಪ್ರದೇಶದಲ್ಲಿ ಕೆಲವೊಂದು ಚುರ್ಚುಗಳು ಜನರ ಮುಂದೆ ಈ ಪುಸ್ತಕವನ್ನು ತಂದಿಡುವ ಸಾಹಸ ಪ್ರಯತ್ನ ಮಾಡಿದರು. ಅಂದ್ರ ಸರ್ಕಾರದವರು ಅಂದೇ ಈ ಪುಸ್ತಕವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದರು. ಅದೇನೋ ಸರಿ, ಆದ್ರೆ ಮಂಗಳೂರಿನಲ್ಲಿ ಗಲಾಟೆ ಏಕೆ ಶುರುವಾಯ್ತು? ಹಾಗೆ ಯೋಚಿಸಿ...ಮಂಗಳೂರಿನ ಚುರ್ಚುಗಳು ಮತ್ತೊಮ್ಮೆ ದುಸ್ಸಾಹಸ ಮಾಡುವ ಪ್ರಯತ್ನ. ಇದೆ ಪುಸ್ತಕವನ್ನು ತೆಲಗಿನಿಂದ ಕನ್ನಡಕ್ಕೆ ಅನುವಾದ ಮಾಡಿ ಜನರಿಗೆ ತಲುಪಿಸಲು ಮಾಡಿದ ಹೀನ ಕೃತ್ಯ. ಉತ್ತರ ಅವರಿಗೆ ತುಂಬ ಬೇಗ ಹಾಗು ಸಾಕಷ್ಟು ಚುರುಕಾಗಿಯೇ ಸಿಕ್ತು. ಇದೆಲ್ಲ ಆದ ನಂತರ ಮಾಧ್ಯಮಗಳಲ್ಲಿ ಬಂದ ಸುದ್ದಿ ಎಲ್ಲರಿಗೂ ಗೊತ್ತು.

ನಾನು ಹೀಗೆ ಬರೆಯೋದು ಬಜರಂಗ ದಳದವರಿಗೆ ಕೊಡುವ ಬೆಂಬಲ ಅಂತು ಅಲ್ಲ. ಹಾಗಂತ ಕೆಲವು ಚುರ್ಚುಗಳು ಮಾಡ್ತಿರೋದು ಕೂಡ ಸರಿ ಅಲ್ಲ. ನನ್ನ ಎಲ್ಲ ಆತ್ಮೀಯರಿಗೆ ತಿಳಿದ ಹಾಗೆ ನಾನು ಬಜರಂಗ ದಳದವರನ್ನು ಹಲವಾರು ಬಾರಿ ಕಂಡಿಸಿರುವುದು ಇದೆ. ಇವರುಗಳು ಚುರ್ಚುಗಳಿಗೆ ನುಗ್ಗಿ ಹಲ್ಲೆ ನಡೆಸಿದರು. ಹಾಗೆ ನೋಡಿದರೆ ಬಜರಂಗದಳ, ಪುಸ್ತಕ ವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ ಚುರ್ಚುಗಳು ಮತ್ತು ನೀಚಾತ್ಮ ಪರವಸ್ತು ಸೂರ್ಯನಾರಾಯಣ ಎಲ್ಲರೂ ಒಂದೇ ಜಾತಿಗೆ ಸೇರಿದ, ಸಮಾಜದಲ್ಲಿರುವ ಸೊಳ್ಳೆಗಳು.

ಇಲ್ಲಿ ಎಷ್ಟೊಂದು ತಪ್ಪುಗಳು ನೆಡೆದು ಹೋಗಿದೆ ನೋಡಿ.
೧. ಯಾರೋ ನೀಚಾತ್ಮ ತಲೆ ಕೆಟ್ಟಿ ಏನೋ ಬರೆದ.
೨. ಈ ಹುಚ್ಚನ ಮಾತು ಕೇಳಿ ಕೆಲವು ಚುರ್ಚುಗಳು ಚಪ್ಪಾಳೆ ಹಾಕಿದರು.
೩. ಎಲ್ಲ ಹುಚ್ಚರಿಗೂ ನಾವು ಸರಿ ಮಾಡುತ್ತೇವೆಂದು ಬಜರಂಗ ದಳದವರು ಹುಚ್ಚರಾದರು.
ಯಂತಹ ತಮಾಷೆ ನೋಡಿ. ಕೋತಿಗೆ ಹೆಂಡ ಕುಡಿಸಿದ ಹಾಗೆ. ಆದರೆ ಇವೆಲ್ಲ ನೀಚ ಕೃತ್ಯಗಳು ತಂದಿಟ್ಟ ಕಳಂಕ ವೆಂದರೆ ಹಿಂದೂ - ಕ್ರಿಶ್ಚನ್ ಗಲಾಟೆಎನ್ನುವ ವಿಷ ನಮ್ಮ ಸಮಾಜದಲ್ಲಿ ನೆಲೆ ಮಾಡಿತು . ನನ್ನ ಪ್ರಕಾರ ಮೇಲೆ ನಮೂದಿಸಿರುವ ಮೂರು ಹುಚ್ಚರ ಪೈಕಿಯಲ್ಲಿ ಮೊದಲೆರೆಡು ಹುಚ್ಚರು ತಣ್ಣಗಾದರೆ ಮೂರನೆಯ ಕೋತಿ ಕುಣಿಯುವುದನ್ನು ತಾನಾಗೆ ನಿಲ್ಲಿಸುವದು ಎಂದು ನಂಬಿರುತ್ತೇನೆ.

No comments:

Post a Comment