October 27, 2008

ನಮ್ಮ ದೇಶದ ಕತೆ ಇಷ್ಟೇ ಕಣಮ್ಮೋ

ದೇಶದ ಹಲವಾರು ಪ್ರದೇಶಗಳಲ್ಲಿ ಬಾಂಬ್ಗಳು ಸ್ಪೋಟಗೊಂಡ ಸುದ್ದಿ ಎಲ್ಲಡೆ ಮಿಂಚಿನ ವೇಗದಲ್ಲಿ ಹರಡಿತ್ತು. ನಾನು ಎಲ್ಲರ ಹಾಗೆ ದೂರದರ್ಶನ, ರೇಡಿಯೋ ಹೀಗೆ ನಾಲ್ಕಾರು ಮಾದ್ಯಮಗಳ ಮೊಲಕ ಸುದ್ದಿಯ ವಿವರಗಳನ್ನು ಕೇಳುವ ಪ್ರಯತ್ನದಲಿದ್ದೆ . ಈ ಎಲ್ಲ ಪ್ರಯತ್ನಗಳ ಜೊತೆಗೆ ಸ್ನೇಹಿತರೊಂದಿಗೆ ಚರ್ಚೆ ಸಾಕಷ್ಟು ಗಂಬೀರವಗಿಯೇ ಸಾಗಿತ್ತು. ಕೆಲವೊಮ್ಮೆ ಶನಿವಾರ ಬಂತೆಂದರೆ ಯಾವ ಊರಿನಲ್ಲಿ ಬಾಂಬ್ ಸ್ಪೋಟಗೊಂಡಿದೆ, ಅಥವಾ ಎಲ್ಲಿ ಸ್ಪೋಟ ಆಗಬಹುದು ಎಂದು ಊಹಿಸುವ ಚರ್ಚೆಗಳು ನೆದೆಯುತಿದ್ದವು. ಅಷ್ಟೇ ಮುಖ್ಯವಾಗಿ ಕೇಳಿಬರುತಿದ್ದ ಮತ್ತೊಂದು ಪ್ರಶ್ನೆ ಎಂದರೆ ಈ ಎಲ್ಲ ಸ್ಪೋಟಗಳ ಹಿಂದಿರುವ ದೇಶದ್ರೋಹಿಗಳು ಯಾರು? ಹೀಗೆ ಹಲವಾರು ಚರ್ಚೆಗಳು, ಮನಸಿನ ಒಳಗಡೆ ಅವಿತಿರುವ ಭಯ, ದೂರದರ್ಶನದಲ್ಲಿ ನೋಡಿರುವ ಆ ದೃಶ್ಯಗಳು ಎಲ್ಲವೂ ಸೇರಿ ಮನಸಿನಲ್ಲಿ ಸಾಕಷ್ಟು ಗೊಂದಲಗಳನ್ನು ಹುಟ್ಟಿಸಿತು. ಇದೆಲ್ಲದರ ಮದ್ಯೆ ಒರಿಸ್ಸಾ ಹಾಗು ಕರ್ನಾಟಕದಲ್ಲಿ ಕ್ರ್ಯಸ್ತರ ಮೇಲೆ ಹಲ್ಲೆ ನಡೆಸಿದ ಸುದ್ದಿಯು ಸಾಕಷ್ಟು ಪ್ರಚಾರವಾಗಿತ್ತು. ಇಂತಹ ಸಂದರ್ಬದಲ್ಲಿ "TIMES NOW" ಸುದ್ದಿ ವಾಹಿನಿಯಲ್ಲಿ ಒಂದು ಕಾರ್ಯಕ್ರಮ ಪ್ರಸಾರಗೊಂಡಿತು. ಕಾರ್ಯಕ್ರಮದ ಉದ್ದೇಶ ತುಂಬಾ ಆಕರ್ಷಕವಾಗಿತ್ತು. ಕಾರಣವೆಂದರೆ ನಾವು ನಡೆಸುತಿದ್ದ ಚರ್ಚೆ ಮತ್ತು ಈ ಕಾರ್ಯಕ್ರಮದ ಉದ್ದೇಶ ಒಂದೇ. ಈಗ ನಮ್ಮ ಚರ್ಚೆ ಮತ್ತು ಈ ಕಾರ್ಯಕ್ರಮದ ಉದ್ದೇಶ ಹೇಳ್ತಿನಿ. ಈ ವಿಚಾರ ತುಂಬಾ ಸೂಕ್ಷ್ಮ ವಾದದ್ದು.

ಒಂದೆಡೆ ಬಾಂಬ್ಗಳ ಹಾವಳಿ, ಒಂದೆಡೆ ಕ್ರೈಸ್ತರ ಮೇಲೆ ದಾಳಿ, ಇಂತ ಸಂದರ್ಬಗಲ್ಲಿ ನಮ್ಮುಗಳ ಮನಸಲ್ಲಿ ಸಾವಿರಾರು ಪ್ರಶ್ನೆಗೆಳು ಉತ್ತರಕ್ಕಾಗಿ ಹುಡುಕಾಟ ಮಾಡುವಾಗ, ಮೆದುಳು ಮುಂಕಾಗಿ ಸೊರಗಿ ಬಿಡುತಿತ್ತು.ಈ ರೀತಿಯ ಪ್ರಶ್ನೆಗಳನ್ನು ನಾನು ಇಲ್ಲಿ ಉಲ್ಲೆಕಿಸಲೇಬೇಕು. ಎಲ್ಲ ಬಾಂಬ್ ಸ್ಪೋಟಗಳ ಹಿಂದೆ ಮುಸಲ್ಮಾನರ ಹೆಸರು ಮತ್ತೆ ಮತ್ತೆ ಏಕೆ ಕೇಳಿ ಬರುತಿದೆ? ಎಷ್ಟು ಜನ ಮುಸಲ್ಮಾನರು ಈ ದೇಶ ದ್ರೋಹಿಯ ಕೆಲಸದಲ್ಲಿ ತೊಡಗಿರುವರು? ಇವರೆಲ್ಲ ನಮ್ಮ ದೇಶದ ಪ್ರಜೆಗಳೇ? ಈ ರೀತಿಯ ಪ್ರಶ್ನೆ ಎಷ್ಟು ಸರಿ ಎಷ್ಟು ತಪ್ಪು ? ಇನ್ನು ಕ್ರೈಸ್ತರ ಮೇಲೆ ನೆಡೆದ ಹೀನಾಯ ಕೃತ್ಯಗಳಿಗೆ ಏನು ಹೇಳುವುದು ಗೊತ್ತಿಲ್ಲ. ಒಟ್ಟಾರೆಯಾಗಿ ಒಂದು ಅಂಶವನ್ನು ನಾನು ಸ್ಪಷ್ಟವಾಗಿ ಹೇಳಬಲ್ಲೆ. ನಮ್ಮ ಒಳಗಡೆ ಸಾಕಷ್ಟು ಕಿಡಿಗೇಡಿಗಳು ಬೆಳೆಯುತಿದ್ದಾರೆ. ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಈ ಕಾರ್ಯಕ್ರಮದಲ್ಲಿ ಕೇಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹನೀಯರು

೧ .ಶ್ರೀ ಜಾವಿದ್ ಅಕ್ತರ್ (ಖ್ಯಾತ ಗೀತ ರಚನಕಾರರು )

೨. ಶ್ರೀ ಪೆರರಿಯ (ನಿವೃತ್ತ ಪೋಲಿಸ್ ಆಯುಕ್ತರು , ಹೊಸ ದೆಹಲಿ )

೩. ಶ್ರೀ ರವಿಶಂಕರ್ ಪ್ರಸಾದ್ (ಹಿರಿಯ ಮುಕಂದರು, ಭಾರತೀಯ ಜನತಾ ಪಕ್ಷ )

ನನಗೆ ಈ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎನ್ನುವ ಹಂಬಲ. ಕಾರಣವೆಂದರೆ ಇಂದಿನ ನಮ್ಮ ಸಮಜಾದ ಆಗು ಹೋಗುಗಳು. ನಮ್ ಅಂತಹ ಸಾಮಾನ್ಯ ಜನರ ಪ್ರಶ್ನೆಗಳಿಗೆ ಈ ನಾಯಕರು ಉತ್ತರ ಕೊಡ ಬಲ್ಲರು ಎನ್ನುವ ಹಂಬಲ ಅಷ್ಟೇ. ನಾನು ಇಲ್ಲೇ ಕಾರ್ಯಕ್ರಮದಿಂದ ನನಗೆ ಏನು ತಿಳೀತು ಎಂದು ಹೇಳುವ ಪ್ರಯತ್ನ ಅಷ್ಟೇ ಮಾಡ್ತಿನಿ.

ರವಿ ಶಂಕರ್ ಪ್ರಸಾದ್ ಅವರಿಗೆ ವಿಶ್ವ ಹಿಂದು ಪರಿಷತ್ ನಡೆಸಿದ ದಾಳಿ ಅಷ್ಟೇನೂ ನೋವಲ್ಲ. ಆದರೆ ದಿಲ್ಲಿಯಲ್ಲಿ ನೆಡೆದ ಎನ್ಕೌಂಟರ್ ನಲ್ಲಿ ಮಡಿದ ಸಾಹಸಿ ಅರಕ್ಷಕನ ಸಾವು ತುಂಬಾ ನೋವುಂಟು ಮಾಡಿತ್ತು.

ಪೆರೆರಿಯ ಅವರಿಗೆ ದೇಶ ದೆಲ್ಲದೆ ನೆಡೆದ ಬಾಂಬ್ಗಳ ಹಾವಳಿ ಗಿಂತ ಹೆಚ್ಚಾಗಿ ಕ್ರೈಸ್ತರ ಮೇಲೆ ನೆಡೆದ ದಾಳಿ ತುಂಬಾ ಗೊಂದಲವನ್ನು ಅವರ ಮನಸಲ್ಲಿ ಮಾಡಿತ್ತು.

ಇನ್ನು ನಮ್ಮ ಮಹಾನ್ ಗೀತ ರಚನಕಾರರಿಗೆ ಕ್ರೈಸ್ತರ ಮೇಲೆ ನೆಡೆದ ದಾಳಿನು ಅಲ್ಲ, ಬಾಂಬ್ಗಳ ಹಾವಳಿನು ಅಲ್ಲ, ದಿಲ್ಲಿಯಲ್ಲಿ ಬಂದಿಸಿದ ಜಾಮಿಯಾ ಕಾಲೇಜಿನ ವಿದ್ಯಾರ್ಥಿಗಳು. ಇವರ ಬಂದನ ಶ್ರೀ ಅಕ್ತರ್ ಅವರಿಗೆ ಮನದಾಳದಲ್ಲಿ ನೋವುಂಟು ಮಾಡಿದೆ.

ಇವರೆಲ್ಲರೂ ಹೇಳಿದ್ದು ಇಷ್ಟೇ. "I strongly condemn the attack on christians" ಅಂತ ಒಬ್ರು ಹೇಳಿದ್ರೆ, ಇನ್ ಒಬ್ರು "VHP and ABVP should be banned" ಅಂತ ಮೊತ್ತ್ಹೊಬ್ರು ಆಮೇಲೆ ಇನ್ನೊಬ್ರು "minorities are targetted for no reason" ಅಂದ್ಬಿಟ್ರು. ನಾನು ಅವರುಗಳು ಹೇಳಿದನ್ನ ಹಾಗೆ ಇಲ್ಲಿ ಬರಿತ ಎಲ್ಲ. ಅವರುಗಳ ಮಾತಿನ ಸಾರಾಂಶವನ್ನಷ್ಟೇ ಇಲ್ಲಿ ಹೇಳುವ ಪ್ರಯತ್ನ ಮಾಡ್ತಿದೀನಿ.

ಕಾರ್ಯಕ್ರಮ ಮುಗಿತು.. ನಮ್ಮ ನಾಯಕರ ಯೋಚನಾ ದಿಕ್ಕುಗಳು ಏನು ಎಮ್ಬುದು ಮೊತ್ಹೊಮ್ಮೆ ಅರಿವು ಆಯಿತು. ಇಲ್ಲಿ ವಿಶೇಷ ಏನಂದ್ರೆ ನನ್ನ ಸ್ನೇಹಿತ ಮೊದಲೇ ಹೇಳಿದ್ದ. ಇವರೆಲ್ಲ ಕೆಲಸಕ್ಕೆ ಬಾರದವರು ಸಮಯ ವ್ಯರ್ಥ ಮಾಡಬೇಡ ಅಂತ. ಅದು ಸತ್ಯ ಅಂತ ನಂಗು ಅರಿವಾಯ್ತು. ಹಗಲಲ್ಲಿ ಕಂಡ ಬಾವಿಗೆ ಇರುಳಲ್ಲಿ ಬಿದ್ದ ಅನುಭವ.

ನಾನು ಈ ಮೊದಲು ಸಾಕಷ್ಟು ಬಾರಿ ಹೇಳ್ತಾ ಇದ್ದೆ. "ನಮಲ್ಲಿ ನಾಯಕರ ಕೊರತೆ ಇಲ್ಲ . ಒಂದು ವ್ಯವಸ್ಥೆಯ ಕೊರತೆ ಎದೆ. ನಮಗೆ ಹೊಸ ನಾಯಕರು ಬೇಡ. ಹೊಸ ವ್ಯವಸ್ಥೆಗಳು ಬೇಕು " ಅಂತ. ಅದು ತಪ್ಪು ಅಂತ ಅರಿವು ಆಯಿತು.

ಆಮೇಲೆ ನಂಗೆ ಅರಿವು ಏನು ಆಯಿತು ಅಂತ ನಿಮಗೆ ಹೇಳಲೇಬೇಕು. ಪೆರರಿಯ ಅವರಿಗೆ ಕ್ರೈಸ್ತರ ಮೇಲೆ ನೆಡೆದ ದಾಳಿ ತುಂಬಾ ನೋವುಂಟು ಮಾಡಿದೆ ಏಕೆ ಅಂದ್ರೆ ಅವರು ಕ್ರೈಸ್ತರು. ಅಕ್ತರ್ ಅವರಿಗೆ ಜಾಮಿಯಾ ವಿದ್ಯಾರ್ಥಿಗಳ ಬಂದನ ಹಾಗು ರವಿಶಂಕರ್ ಅವರಿಗೆ ದಿಲ್ಲಿ ಎನ್ಕೌಂಟರ್. ನಾನು ಇಲ್ಲಿ ಕಾರಣ ಹೇಳುವ ಅವಶ್ಯಕತೆ ಇಲ್ಲ. ಹಾಗಾಗಿ ಸಾರಾಂಶ ಏನ್ ಅಂದ್ರೆ ದೇಶ ಕಿಂತ ಜಾತಿ ಮುಖ್ಯ ಅಂತ ನಮ್ಮ ನಾಯಕರುಗಳು ಕೂಗಿ ಕೂಗಿ ಹೇಳ್ಬಿಟ್ರು.

ಸ್ನೇಹಿತರೆ ನೀವು ಕೂಡ ನಿಮ್ಮ ಅಭಿಪ್ರಾಯಗಳನ್ನ ಹೇಳಿ. ಈ ಮೌಲಕ ನನಗೆ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದೆಂದು ಮತೊಮ್ಮೆ ಹಂಬಲಿಸುತ್ತ .......